Breaking News

ಕುಕನೂರು ಪಟ್ಟಣದಲ್ಲಿ ಅದ್ದೂರಿ ನೂಲಿ ಚೆಂದಯ್ಯಜಯಂತೋತ್ಸವ

Chendayaya Jayanthotsava is a grand yarn festival in Kukanur town

ಜಾಹೀರಾತು

ಕೊಪ್ಪಳ : ಕುಕನೂರು ಪಟ್ಟಣದಲ್ಲಿ ಕಾಯಕಯೋಗಿ ಶಿವಶರಣ ಶ್ರೀ ನೂಲಿಚೆಂದಯ್ಯ ಕೊರಮ ಸಮಾಜದ ವತಿಯಿಂದ 19ರ ಸೋಮವಾರದಂದು ಬೆಳಗ್ಗೆ 8 ಗಂಟೆಯಿಂದ ವಿಜೃಂಭಣೆಯಿಂದ ನೆರವೇರಿಸಲಾಗುವುದು.

ಅಂದು ಬೆಳಗ್ಗೆ 8 ಗಂಟೆಗೆ ಗಾಂಧಿ ನಗರದ ನೂಲಿಚೆಂದಯ್ಯನವರ ಗುಡಿಯಲ್ಲಿರುವ ನೂಲಿಚೆಂದಯ್ಯನವರ ಮೂರ್ತಿಗೆ ವಿಷೇಶ ಪೂಜಾ ವಿಧಿ, ವಿಧಾನಗಳು ಜರುಗುವವು.

ನಂತರ ಬೆಳಗ್ಗೆ 10ಗಂಟೆಯಿಂದ ಹಲಗೂರು ಮತ್ತು ಜಮಖಂಡಿ ಬ್ಯಾಂಡ್ ಕಂಪನಿ ಮತ್ತು ಆರ್ಕೇಸ್ಟ್ರಾ ಕಾರ್ಯಕ್ರಮದ ಮೂಲಕ ನೂಲಿಚೆಂದಯ್ಯನವರ ಭಾವಚಿತ್ರ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿ ಮರಳಿ ದೇವಸ್ಥಾನಕ್ಕೆ ಆಗಮಿಸುವುದು.

ನಂತರ ಮಧ್ಯಾಹ್ನ 1ಗಂಟೆಗೆ ಅನ್ನ ಸಂತರ್ಪಣಾ ಕಾರ್ಯಕ್ರಮಗಳು ಜರಗುವವು ಆದ್ದರಿಂದ ಸಕಲ ಸಧ್ಬಕ್ತರು ಅಭಿಮಾನಿಗಳು ಆಗಮಿಸಿ ತನು, ಮನ, ಧನದಿಂದ ಸೇವೆ ಸಲ್ಲಿಸಲು ಸಮಾಜದವರು ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

ಕಮಲ್ ಹಾಸನ್ ಕ್ಷಮೆ ಕೇಳುವವರೆಗೂಅವರ ಚಿತ್ರಗಳನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು: ಬಳ್ಳಾರಿ ರಾಮಣ್ಣ ನಾಯಕ

Kamal Haasan’s films should be banned in the state until he apologizes: Ballari Ramanna Nayak …

Leave a Reply

Your email address will not be published. Required fields are marked *