Breaking News

ಕಿನ್ನಾಳ ಗ್ರಾಮದಲ್ಲಿ ನಡೆದ ಮಗುವಿನ ಕೊಲೆಯನ್ನು ಖಂಡಿಸಿ ತಹಸೀಲ್ದಾರ್ ಅವರ ಮೂಲಕಎ ಐ ಎಮ್‌ಎಸ್‌ಎಸ್ ಹಾಗೂ ಎ ಐ ಡಿ ವೈ ಓ ಸಂಘಟನೆಗಳ ವತಿಯಿಂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಕೆ

AIMSS and AIDYO organizations submitted a petition to Acting Chief Minister through Tehsildar condemning the murder of a child in Kinnal village.

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ನಡೆದ ಬಾಲಕಿಯಕೊಲೆಯತತ್‌ಕ್ಷಣದತನಿಖೆಗೆಎ.ಐ.ಎಂ.ಎಸ್.ಎಸ್ ಮತ್ತುಎ.ಐ.ಡಿ.ವೈ.ಓಸಂಘಟನೆಗಳುಆಗ್ರಹಿಸಿ ತಹಸೀಲ್ದಾರ್ ಅವರ ಮೂಲಕಎ ಐ ಎಮ್‌ಎಸ್‌ಎಸ್ ಹಾಗೂ ಎ ಐ ಡಿ ವೈ ಓ ಸಂಘಟನೆಗಳ ವತಿಯಿಂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು
ಇಂದು ಎ ಐ ಎಮ್‌ಎಸ್‌ಎಸ್ ಹಾಗೂ ಎ ಐ ಡಿ ವೈ ಓ ಸಂಘಟನೆಗಳ ವತಿಯಿಂದ ಜಂಟಿಯಾಗಿ ಕೊಪ್ಪಳದ

ಎ ಐ ಎಮ್‌ಎಸ್‌ಎಸ್ ನ ಜಿಲ್ಲಾ ಸಂಘಟನಾಕಾರರಾದ ಮಂಜುಳಾ ಮಜ್ಜಿಗೆ ಮಾತನಾಡುತ್ತಾ “ಪತ್ರಿಕೆಗಳಲ್ಲಿ ವರದಿಯಾದಂತೆತಾಲೂಕಿನ ಕಿನ್ನಾಳ ಗ್ರಾಮದ ೭ ವರ್ಷದ ಬಾಲಕಿಯನ್ನು ಅಪಹರಿಸಿ, ಹತ್ಯೆಗೈದು ಪ್ಲಾಸ್ಟಿಕ್ ಚೀಲದಲ್ಲಿತುಂಬಿಟ್ಟಿರುವಅಮಾನವೀಯಘಟನೆ ನಡೆದಿದೆ.ಇದಕ್ಕೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಮತ್ತುಎ.ಐ.ಡಿ.ವೈ.ಓ ಸಂಘಟನೆಗಳು ತೀವ್ರಆಘಾತ ಮತ್ತು ನೋವನ್ನು ವ್ಯಕ್ತಪಡಿಸುತ್ತವೆ. ಏಪ್ರಿಲ್ ೧೯ ರಂದು ಹೊರಗೆ ಆಟ ಆಡಲು ಹೋದ ಬಾಲಕಿ ಮನೆಗೆ ಹಿಂದಿರುಗಲಿಲ್ಲ. ಪೋಷಕರು ಸುತ್ತಮುತ್ತ ಹುಡುಕಿದರೂ ಬಾಲಕಿ ಸಿಗಲಿಲ್ಲ. ಕೊನೆಗೆ ಎರಡು ದಿನಗಳ ನಂತರ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಇದರಿಂದಾಗಿಇಡೀಗ್ರಾಮದಜನತೆ ಬೆಚ್ಚಿಬಿದ್ದುಆತಂಕಗೊAಡಿದ್ದಾರೆ.ಜಿಲ್ಲಾಡಳಿತ ಹಾಗೂ ಸರ್ಕಾರಘಟನೆಯ ಬಗ್ಗೆ ಈ ಕೂಡಲೇ ನಿಸ್ಪಕ್ಷಪಾತತನಿಖೆ ನಡೆಸಿ ನ್ಯಾಯಒದಗಿಸಬೇಕು” ಎಂದು ಆಗ್ರಹಿಸಿದರು.

ಎ ಐ ಡಿ ವೈ ಓ ನ ಜಿಲ್ಲಾ ಕಾರ್ಯದರ್ಶಿಗಳಾದ ಶರಣು ಪಾಟೀಲ್ ಮಾತನಾಡುತ್ತಾ “ಅಪ್ರಾಪ್ತ ಹೆಣ್ಣು ಮಕ್ಕಳ ಜೀವತೆಗೆಯುವುದರಿಂದ ನಿಧಿ ಸಿಗುವುದೆಂಬ ಮೂಢ ನಂಬಿಕೆಗೆ ಬಾಲಕಿ ಬಲಿಯಾಗಿರಬಹುದುಎಂಬುದು ಮೇಲ್ನೋಟಕ್ಕೆಕಂಡು ಬರುತ್ತಿದೆ.ಕಾರಣ ಏನೇ ಇದ್ದರೂ ಸರ್ಕಾರ ಈ ಕೂಡಲೇಎಚ್ಚೆತ್ತುಕೊಂಡು ಬಾಲಕಿಯಕೊಲೆಯ ಬಗ್ಗೆ ತೀವ್ರಗತಿಯಲ್ಲಿತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಆ ಮೃತ ಬಾಲಕಿಗೆ ನ್ಯಾಯಒದಗಿಸಬೇಕುಎಂದು ಹೇಳಿದರು.
ಈ ಸಂದರ್ಭದಲ್ಲಿಜಿಲ್ಲಾ ಸಂಘಟನಾಕಾರರಾದ ಶಾರದಗಡ್ಡಿ ,ಕಾಲೇಜು ವಿದ್ಯಾರ್ಥಿಗಳಾದ ಸರಸ್ವತಿ, ಮಹಾಲಕ್ಷ್ಮಿ, ನಿರುಪಾದಿ, ಹುಲಗಪ್ಪ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

About Mallikarjun

Check Also

ದೇವರಮನಿಗೆ ಒಲಿದ ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನೇಮಕ

ಗಂಗಾವತಿ, ಏ.11: ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿ ಅತ್ಯುತ್ತಮ ಪಕ್ಷ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.