ಡಾ.ರಾಯಲು ಅವರ ‘ಸಾಯಿ ಪಾದುಕಾ’ ನೂತನ ಆಸ್ಪತ್ರೆ ಆರಂಭ.
Dr. Rayalu's new hospital 'Sai Paduka' started.

ಗಂಗಾವತಿ: ಮಾಜಿ ಸಚಿವ ಶ್ರೀರಂಗದೇವರಾಯಲು ಮತ್ತು ಶ್ರೀಮತಿ ಲಲಿತಾ ರಾಣಿಯವರ ಎರಡನೇ ಪುತ್ರ ಡಾ.ವೀರ ಸಿಂಹ ನರಸಿಂಹ ದೇವರಾಯಲು ಅವರು ಆನೆಗುಂದಿ ರಸ್ತೆಯಲ್ಲಿ ಗುರುವಾರ ಹೊಸದಾಗಿ ತಮ್ಮ ಆಸ್ಪತ್ರೆ ಆರಂಭಿಸಿದರು.

ಶಸ್ತ್ರ ಚಿಕಿತ್ಸಕರಾದ ಡಾ.ರಾಯಲು,ಲ್ಯಾಪ್ರೋಸ್ಕೋಪಿಕ್‌ ತಜ್ಞರಾಗಿದ್ದು ,ಹತ್ತು ವರ್ಷಗಳ ಕಾಲ ವಿದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ.ಈ ಮೊದಲು ಹೊಸಪೇಟೆ ನಗರದಲ್ಲಿ ತಮ್ಮ ಆಸ್ಪತ್ರೆ ಆರಂಭಿಸಿದ್ದ ಇವರು ಇದೀಗ ಗಂಗಾವತಿ ನಗರದಲ್ಲಿ ನೂತನವಾಗಿ ಆಸ್ಪತ್ರೆ ಆರಂಭಿಸಿದ್ದಾರೆ.

ಇದುವರೆಗೂ ಗಂಗಾವತಿ ಭಾಗದ ಜನತೆ ಲ್ಯಾಪ್ರೊಸ್ಕೋಪಿಕ್ ಚಿಕಿತ್ಸೆಗಾಗಿ ಬೇರೆ ಬೇರೆ ಊರಿನ ವೈಧ್ಯರನ್ನು ಅವಲಂಭಿಸಬೇಕಾಗಿತ್ತು.ಇದೀಗ ಗಂಗಾವತಿ ನಗರದಲ್ಲಿಯೇ ಲ್ಯಾಪ್ರೋಸ್ಕೋಪಿಕ ತಜ್ಞರು ಲಭ್ಯವಾಗಲಿದ್ದಾರೆ.

ನೂತನ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ, ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಎಚ್.ಗಿರೇಗೌಡ, ನ್ಯಾಯವಾದಿ ಸಂಧ್ಯಾ ಪಾರ್ವತಿ ಮತ್ತು ಸ್ಥಳೀಯ ಔಷಧ ವಿತರಕ ನಾಗರಾಜಸ್ವಾಮಿ ಡಾ.ರಾಯಲು ಅವರಿಗೆ ಶುಭ ಕೋರಿದರು.ಶ್ರೀಮತಿ ಲಲಿತಾ ರಾಣಿ ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತಿ ಅಮವಾಸೆ ಕಿಷ್ಕಿಂದಿಯಅಂಜನಾದ್ರಿ ಸನ್ನಿಧಿಯಲ್ಲಿ ಭೋಜನ ಪ್ರಸಾದ ವ್ಯವಸ್ಥೆ,,, ಜಿ ರಾಮಕೃಷ್ಣ,
Arrangement of Bhoja Prasad in Kishkindiya Anjanadri Sannidhi every new moon,,, G Ramakrishna,

ಗಂಗಾವತಿ, 17 ಸಮಾಜ ಸೇವೆ ಜೊತೆಗೆ ಧಾರ್ಮಿಕ ಮನೋಭಾವನೆ ಹೊಂದಿರುವ ಶ್ರೀ ರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಜಿ ರಾಮಕೃಷ್ಣ ಅವರು ಸೋಮವಾರದಂದು ಭೀಮನ ಹಾಗೂ ನಾಗರ ಅಮಾವಾಸ್ಯೆ ಪ್ರಯುಕ್ತ ಕಿಷ್ಕಿಂದೆಯ ಅಂಜನಾದ್ರಿ ಬೆಟ್ಟದಲ್ಲಿ ಶ್ರೀ ಆಂಜನೇಯನಿಗೆ ವಿಶೇಷ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ಭೋಜನ ಹಾಗೂ ಪ್ರಸಾದ ವ್ಯವಸ್ಥೆಯನ್ನು ಮಾಡಿದರು, ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ ವಂಶಸ್ಥರಾದ ಶ್ರೀಮತಿ ಲಲಿತಾರಾಡಿ ರಾಯಲು, ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಶ್ರೀರಾಮನಗರದ ಜಿ ರಾಮಕೃಷ್ಣ ಅವರು ಅತ್ಯಂತ ಕ್ರಿಯಾಶೀಲರಾಗಿದ್ದು ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಮನೋಭಾವನೆಯ ಜೊತೆಗೆ ಸರ್ವ ಜನಾಂಗದ ಪ್ರೀತಿಗೆ ಪಾತ್ರರಾಗಿದ್ದಾರೆ, ಅವರು ಪ್ರತಿ ಅಮಾವಾಸ್ಯೆ ಕಿಷ್ಕಿಂದೆಯ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಪುರಸ್ಕಾರದ ಜೊತೆಗೆ ಅನ್ನದಾಸೋಹ ಪ್ರಸಾದ ವ್ಯವಸ್ಥೆಯನ್ನು ನಡೆಸುವ ಸಂಕಲ್ಪವನ್ನು ಹೊಂದಿದ್ದು ಇದರಿಂದ ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿ ಅವರ ಕಾರ್ಯವನ್ನು ಪ್ರಶಂಶಿಸಿದರು, ಪ್ರಸ್ತುತ ಇಂದಿನ ಪ್ರಸಾದ ಹಾಗೂ ಬೋಧನಾ ವ್ಯವಸ್ಥೆಯನ್ನು ಅವರ ಶ್ರೀಮತಿಯಾದ ಶ್ರೀಮತಿ ದುರ್ಗಾರಾಣಿ ಜಿ ರಾಮಕೃಷ್ಣ ಅವರು ನೆರವೇರಿಸಿದ್ದು ಈ ಹಿನ್ನೆಲೆಯಲ್ಲಿ, ಶ್ರೀಮತಿ ದುರ್ಗಾ ರಾಣಿ ಹಾಗೂ ಲಲಿತಾ ರಾಣಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಭಕ್ತರು ಗೌರವಿಸಿದರು,,, ಆಯೋಜಕ ಜಿ ರಾಮಕೃಷ್ಣ ಮಾತನಾಡಿ, ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಿಂದ ಬರುವ ಭಕ್ತಾದಿಗಳಿಗೆ ಪ್ರಸಾದ ಹಾಗೂ ಭೋಜನೆಯ ಮೂಲಕ ಕಿಷ್ಕಿಂದದಆಂಜನೇಯ ಸ್ವಾಮಿ ವಿಶ್ವದ್ಯಂತ ಪಸರಿಸಲಿ ಆತನ ಅನುಗ್ರಹ ಆಶೀರ್ವಾದ ಸದಾ ಕಾಲ ವಿಶ್ವದ ಜನತೆಗೆ ದೊರೆಯಲಿ ಎಂದು ತಿಳಿಸಿದರು, ಇದಕ್ಕೂ ಮುಂಚೆ ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಅಷ್ಟೋತ್ತರ ಶತರಾಮಾವಳಿ ಪಾರಾಯಣ ಪೂಜಾ ಕಾರ್ಯಕ್ರಮಗಳನ್ನು ಶ್ರೀ ರಾಮಕೃಷ್ಣ ದಂಪತಿಗಳು ನೆರವೇರಿಸಿದರು,, ಅಮಾವಾಸ್ಯೆ ಪ್ರಯುಕ್ತ ಆಗಮಿಸಿದ ನೂರಾರು ಸಂಖ್ಯೆ ಭಕ್ತಾದಿಗಳು ಶುಚಿ ರುಚಿಯಾದ ಪ್ರಸಾದ ಭೋಜನವನ್ನು ಸವಿದು ರಾಮಕೃಷ್ಣ ದಂಪತಿಗಳಿಗೆ ಶುಭ ಹಾರೈಸಿದರು,,,

ಸಂಗೀತದಿಂದ ಮಾನಸಿಕ ನೆಮ್ಮದಿ, ಒತ್ತಡ ನಿಗ್ರಹ ಸಾಧ್ಯ
Music can help you relax and reduce stress



ಗಂಗಾವತಿ: ವೇಗದ ಮತ್ತು ಒತ್ತಡದ ಜೀವನದಲ್ಲಿ ಮನುಷ್ಯನಿಗೆ ನೆಮ್ಮದಿ ಇಲ್ಲದಂತಾಗಿದೆ. ಸಂಗೀತದಿAದ ಮನುಷ್ಯನು ಆ ನೆಮ್ಮದಿಯನ್ನು ಪಡೆಯಲು ಸಾಧ್ಯವಾಗಿದೆ
ಎಂದು ನ್ಯಾಯವಾದಿ ದೊಡ್ಡಬಸಪ್ಪ ಹಾಲಸಮುದ್ರ ಹೇಳಿದರು.
ಅವರು ನಗರದ ಆನೆಗೊಂದಿ ರಸ್ತೆಯ ಗದಿಗೆಪ್ಪ ಕಾಲೋನಿಯ ಗಣೇಶ ಸಮುದಾಯಭವನದಲ್ಲಿ .ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತ ಕಲಾ ಸಂಸ್ಥೆ ಹಾಗೂ ಕೇಂದ್ರ ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ನಡೆದ “ಕಲಾ ಕುಸುಮ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂಡಿತ್ ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಕವಿ ಗವಾಯಿಗಳವರು ಅನೇಕ ಅಂಧ, ಅನಾಥ ಮಕ್ಕಳಿಗೆ ಸಂಗೀತವನ್ನು ಧಾರೆಯೆರೆದು ಸಂಗೀತದಿAದ ಅವರುಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಮಾಡಿದ ಮಹಾತಪಸ್ವಿಗಳು ಎಂದು ಸ್ಮರಿಸಿದರು.
ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ.ನಿಂಗಜ್ಜ ಸನ್ಮಾನ ಸ್ವೀಕರಿಸಿ ಮಾತನಾಡಿ, ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯು ಸುಮಾರು ವರ್ಷಗಳಿಂದ ಸಂಗೀತ ಕಾರ್ಯಕ್ರಮಗಳನ್ನು ನಡೆಸುತ್ತಾ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿರುವಂತಹ ಮಹನೀಯರನ್ನು ಗುರುತಿಸಿ ಸನ್ಮಾನ ಮಾಡುತ್ತಾ ಬಂದಿರುತ್ತಾರೆ. ಶ್ರೀಯುತ ದಿ|| ಗೋವಿಂದರಾಜ್ ಬೊಮ್ಮಲಾಪುರ ರವರು ಈ ಒಂದು ಸಂಸ್ಥೆಯನ್ನು ಹುಟ್ಟುಹಾಕಿರುತ್ತಾರೆ. ಅದನ್ನು ಅವರ ಶ್ರೀಮತಿಯವರಾದ ಶ್ರೀಮತಿ ಮನೋರಮಾ ಗೋವಿಂದರಾಜ್ ಮುನ್ನಡೆಸಿಕೊಂಡು ಬರುವ ಮೂಲಕ ಸಂಗೀತ ಸೇವೆಯನ್ನು ನೀಡುತ್ತಾ ಬಂದಿದ್ದಾರೆ ಎಂದು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕೆ. ನಿಂಗಜ್ಜರವರಿಗೆ ಹಾಗೂ ಕ್ರಿಯಾಶೀಲ ಪ್ರೌಢಶಾಲೆ ಶಿಕ್ಷಕರಾದ ಸಿದ್ಧಲಿಂಗೇಶ್ವರ ಪೂಲಬಾವಿಯವರಿಗೆ ಸನ್ಮಾನಿಸಲಾಯಿತು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬಾನ್ಸುರಿ ವಾದನವನ್ನು ನಾಗರಾಜ ಶ್ಯಾವಿ ಕೊಪ್ಪಳ, ಹಾರ್ಮೊನಿಯಂ ಸೊಲೋ ರಾಮಚಂದ್ರಪ್ಪ ಉಪ್ಪಾರ ಭಾಗ್ಯನಗರ, ವಚನ ಸಂಗೀತವನ್ನು ಮಾರುತಿ ದೊಡ್ಡಮನಿ ಗದಗ, ದಾಸವಾಣಿಯನ್ನು ಪಂಚಾಕ್ಷರ ಕುಮಾರ ಗಂಗಾವತಿ, ಸುಗಮ ಸಂಗೀತ ಶ್ರೀಮತಿ ಕೆ. ಗಂಗಮ್ಮ ವಿದ್ಯಾನಗರ, ಭರತನಾಟ್ಯವನ್ನು ಕುಮಾರಿ ಕೆ. ವರ್ಷಿತಾ ಹಾಗೂ ಕೆ. ವೈಷ್ಣವಿ ನಡೆಸಿಕೊಟ್ಟರು ಮತ್ತು ಡಾ. ಎಫ್.ಎಂ. ಮುದ್ದಾಬಳ್ಳಿ ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನೀಡಿದರು. ಈ ಕಾರ್ಯಕ್ರಮದಲ್ಲಿ ರಾಜಾಸಾಬ್ ಮುದ್ದಾಬಳ್ಳಿ, ಪವನ್ ದೇಸಾಯಿ, ಸಂಗೀತ ಶಿಕ್ಷಕರಾದ ಶಿವಕುಮಾರ ಗೆಜ್ಜಿ, ಯುವ ಕಲಾವಿದರಾದ ರಿಜ್ವಾನ್ ಮುದ್ದಾಬಳ್ಳಿ ಸೇರಿ ದಂತೆ ಅನೇಕರಿದ್ದರು.

ಜನತಾ ಪಕ್ಷದ ಉಪಾಧ್ಯಕ್ಷರಾಗಿ ಚಕ್ರವರ್ತಿ ನಾಯಕ ನೇಮಕ
Chakraborty Nayaka appointed as Vice President of Janata Party


ಗಂಗಾವತಿ: ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ಟಿ. ಚಕ್ರವರ್ತಿ ನಾಯಕ ಇವರನ್ನು ನೇಮಕ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಂ.ಪಾಲಾಕ್ಷ ಆದೇಶ ಪತ್ರ ನೀಡಿದ್ದಾರೆ. ಪಕ್ಷದ ಶ್ರೇಯೋದ್ದೇಶಗಳಿಗೆ ಬದ್ಧರಾಗಿ, ಜನತಾಪಕ್ಷದ ರಾಷ್ಟ್ರೀಯ ಮತ್ತು ರಾಜ್ಯದ ಸಂಘಟನಾತ್ಮಕ ಸೂಚನೆಗಳನ್ನು ಕಂಡುಕೊಂಡು ಪಕ್ಷವನ್ನು ಸಶಕ್ತಗೊಳಿಸುವಂತೆ ಸೂಚನೆ ನೀಡಿದ್ದಾರೆ.

ನೇತ್ರ ಚಿಕಿತ್ಸೆಗೆ ಒಳಗಾದ 800 ಫಲಾನುಭವಿಗಳಿಗೆ ಕನ್ನಡಕಗಳ ವಿತರಣೆ
Distribution of spectacles to 800 beneficiaries who underwent eye treatment

ಗಂಗಾವತಿ 14 ತಾಲೂಕಿನ ಶ್ರೀರಾಮನಗರ ಬೆಂಗಳೂರು ವಿಜಯನಗರ ಲಯನ್ಸ್ ಕ್ಲಬ್ ಹಾಗೂ ಸ್ವಾಮಿ ವಿವೇಕಾನಂದ ಸೇವಾ ಸಂಘ ನೇತೃತ್ವದಲ್ಲಿ ಆಯೋಜಿಸಿದ ಉಚಿತ ನೇತ್ರ ಚಿಕಿತ್ಸಾಹ ಶಿಬಿರದಲ್ಲಿ ಪಾಲ್ಗೊಂಡಿದ್ದ 800 ಫಲಾನುಭವಿಗಳಿಗೆ ಗುರುವಾರದಂದು ಉಚಿತ ಕನ್ನಡ ಕ ವಿತರಣೆಯನ್ನು ನಡೆಸಲಾಯಿತು,,

ಈ ಸಂದರ್ಭದಲ್ಲಿ ಬೆಂಗಳೂರು ವಿಜಯನಗರ ಲೈನ್ಸ್ ಕ್ಲಬ್ಬಿನ, ಗಂಗಾಧರ್ ಅವರು ಮಾತನಾಡಿ ಮೂಲತಹ ಗಂಗಾವತಿ ತಾಲೂಕಿನವರಾಗಿದಉ, ಈ ಹಿನ್ನೆಲೆಯಲ್ಲಿ ನಮ್ಮ ಸುತ್ತಮುತ್ತಲಿನ ಬಡ ಜನರಿಗೆ ಅನುಕೂಲವಾಗಲೆಂದು ನೇತ್ರತಪಾಸಣೆ ಶಿಬಿರ ಬಡ ವಿದ್ಯಾರ್ಥಿಗಳಿಗೆ ನೋಟು ಪುಸ್ತಕಗಳು ವಿತರಣೆ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಶ್ರೀ ರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷ ಜಿ ರಾಮಕೃಷ್ಣ ಅವರ ಸಹಕಾರದೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದ್ದು ಚಿಕಿತ್ಸೆಗೆ ಒಳಗಾದ ಫಲಾನುಭವಿಗಳಿಗೆ ಕಣ್ಣು ಕಾಣಿಸುವಂತಹ ಕಾರ್ಯಕ್ಕೆ ಅಭೂತಪೂರ್ವ ಯಶಸ್ಸು ದೊರಕಿದ್ದು ಸಂತಸದಾಯಕವಾಗಿದೆ ಎಂದು ತಿಳಿಸಿದರು, ಸ್ವಾಮಿ ವಿವೇಕ ಸೇವಾ ಸಂಘದ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ನಿಸ್ವಾರ್ಥ ಸೇವಾ ಮನೋಭಾವನೆಯಲ್ಲಿ ಆತ್ಮ ತೃಪ್ತಿ ಇದೆ ವಿಶೇಷವಾಗಿ ವ್ಯಕ್ತಿಗೆ ಕಣ್ಣು ಅವಶ್ಯವಾಗಿದ್ದು ಹೆಚ್ಚಾಗಿ ನೇತೃ ತಪಾಸಣೆ ಹಾಗೂ ಶಿಬಿರಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಒಬ್ಬ ರಾಮಚಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಪೂಜ್ಯರು ಪಾಲ್ಗೊಂಡಿದ್ದರು

ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ನಾಶದಿಂದ ಬೀದಿಗೆ ಬಿದ್ದಿರುವಕೂಲಿಕಾರ್ಮಿಕರು
On the other side, the laborers are lying on the streets due to the destruction of tourism


ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದಲ್ಲಿ ಕಳೆದ ಎರಡು ದಶಕಗಳಿಂದ ಪ್ರವಾಸೋದ್ಯಮದ ಮೂಲಕ ಕೂಲಿಕಾರ್ಮಿಕರಿಗೆ ಉದ್ಯೋಗ ಲಭಿಸಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ಪರಿಣಾಮವಾಗಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅನಧಿಕೃತ ಹೊಟೇಲ್, ರೆಸಾರ್ಟ್ ತೆರವು ಮಾಡಿದ್ದು ಇದರಿಂದ ೧೫ ಗ್ರಾಮಗಳ ಸುಮಾರು ೨-೩ ಸಾವಿರ ಕುಟುಂಬಗಳ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ರಾಜ್ಯ ಸರಕಾರ ಕೂಡಲೇ ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಗಳಲ್ಲಿ ವಲಯ(ಝೋನಲ್)ನಿಯಮಗಳಿಗೆ ತಿದ್ದುಪಡಿ ಮಾಡಿ ನೈಸರ್ಗಿಕ ಪ್ರವಾಸೋದ್ಯಮಕ್ಕೆ ಫಾರ್ಮ್ಸ್ಟೇ, ಹೋಂಸ್ಟೇಗಳನ್ನು ಆರಂಭಿಸಲು ಅನುಮತಿ ನೀಡುವಂತೆ ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವಿಧಾನಸಭೆಯ ಸದನದಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶವು ಡ್ರಗ್ಸ್ ಪೆಡ್ಲರ್‌ಗಳಿಂದ ಕೂಡಿದ್ದು ವಿದೇಶಿಗರು ಮಾದಕ ವಸ್ತು ಸೇವನೆಗಾಗಿ ಇಸ್ರೇಲ್ ಸೇರಿ ಹಲವು ದೇಶಗಳಿಂದ ಆಗಮಿಸುತ್ತಾರೆ. ವ್ಯಾಪಕ ಡ್ರಗ್ಸ್ ಜಾಲವಿದೆ ಎಂದು ಹೇಳುವ ಮೂಲಕ ಕಿಷ್ಕಿಂಧಾ ಪ್ರದೇಶಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುವ ಯತ್ನ ನಡೆಸಿದ್ದಾರೆ. ೨೦೧೬-೧೮ ರ ವರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಪ್ರಸ್ತುತ ಕಾಂಗ್ರೆಸ್ ಸರಕಾರವಿದ್ದು ಡ್ರಗ್ಸ್ ಜಾಲವನ್ನು ತಡೆಯಲು ಕಠಿಣ ಕ್ರಮ ಜರುಗಿಸದೇ ಅಂಜನಾದ್ರಿ ಪ್ರದೇಶ ಡ್ರಗ್ಸ್ ಎಂದು ಹೇಳಿದ್ದು ಸರಿಯಲ್ಲ. ಇದರಿಂದ ಸಾಮಾಜಿಕ ವ್ಯವಸ್ಥೆ ಹದಗೆಡಲಿದೆ. ಕಳೆದ ೩೦ ವರ್ಷಗಳಿಂದ ಆನೆಗೊಂದಿ ಭಾಗದಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ಹೊಸಪೇಟೆ ಹೊಟೇಲ್ ಲಾಭಿ ಷಡ್ಯಂತ್ರ ನಡೆಸಿದೆ. ರಾಯರೆಡ್ಡಿಯವರೇ ಹೇಳಿರುವಂತೆ ಕೇವಲ ೮ ಗಾಂಜಾ ಕೇಸಗಳು ದಾಖಲಾಗಿದ್ದು ಅವರು ಹೇಳಿದಂತೆ ವ್ಯಾಪಕ ಡ್ರಗ್ಸ್ ಜಾಲವಿಲ್ಲ. ಆದ್ದರಿಂದ ಆನೆಗೊಂದಿ ಭಾಗದಲ್ಲಿ ಪೊಲೀಸ್ ಠಾಣೆ ಸ್ಥಾಪನೆ ಸಂಚಾರಿ ಪೊಲೀಸ್ ವ್ಯವಸ್ಥೆ ಮಾಡಿ ಅಕ್ರಮ ತಡೆಯಬೇಕು. ಸದ್ಯ ಹೊಟೇಲ್‌ಗಳಲ್ಲಿ ನೇರ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದ ಈಗ ಕೆಲಸವಿಲ್ಲದೇ ಖಾಲಿ ಕುಳಿತಿರುವ ಕೂಲಿಕಾರ್ಮಿಕರಿಗೆ ಕೊಪ್ಪಳ, ವಿಜಯನಗರ ಜಿಲ್ಲಾಡಳಿತ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಕುಟುಂಬ ನಿರ್ವಾಹಣೆಗೆ ಧನ ಸಹಾಯ ಮತ್ತು ಪಡಿತರವನ್ನು ಕೊಡಬೇಕು. ನರೇಗಾ ಯೋಜನೆಯಡಿ ಕೂಲಿಕೆಲಸ ಕೊಡಬೇಕು. ಆನೆಗೊಂದಿ ಪ್ರಾಧಿಕಾರ ರಚಿಸಿ ಸಣ್ಣಪುಟ್ಟ ವ್ಯಾಪಾರವಹಿವಾಟು ಮಾಡಲು ನಿಯಮ ರೂಪಿಸಬೇಕು. ಅಕ್ರಮ ಚಟುವಟಿಕೆ ತಡೆಯಬೇಕೆಂದು ಒತ್ತಾಯಿಸಿದ್ದಾರೆ.

ಶಾಸಕ ರಾಯರೆಡ್ಡಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರಿಂದ ಸ್ವಯಂ ಪ್ರೇರಿತ ದೂರು ದಾಖಲು.
Spontaneous complaint registered by the police against those who protested against MLA Rayareddy's statement.


ಗಂಗಾವತಿ: ಕಿಷ್ಕಿಂಧಾ ಅಂಜನಾದ್ರಿ ಪ್ರದೇಶದಲ್ಲಿ ಡ್ರಗ್ಸ್ ಮಾರಾಟ ವ್ಯಾಪಕವಾಗಿದ್ದು ಡ್ರಗ್ಸ್ ಹಬ್ ಆಗಿದೆ ಎಂದು ಸದನದ ಅಧಿವೇಶನದಲ್ಲಿ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿ ಇತಿಹಾಸ ಪ್ರಸಿದ್ಧ ಆನೆಗೊಂದಿ ಪ್ರದೇಶಕ್ಕೆ ಅವಮಾನ ಮಾಡಿದ್ದಾರೆಂದು ಖಂಡಿಸಿ ಆನೆಗೊಂದಿ, ಸಾಣಾಪೂರ ಭಾಗದ ಸ್ಥಳೀಯರು ಮತ್ತು ಹೊಟೇಲ್ ಮಾಲೀಕರು ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅವಾಚ್ಯಶಬ್ದ ನಿಂದಿಸಿ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯುಂಟು ಮಾಡಿದ ಆರೋಪದಲ್ಲಿ ನಗರ ಪೊಲೀಸ್ ಇನ್ಸಪೆಕ್ಟರ್ ಅಡಿವೇಶ ಪ್ರತಿಭಟನೆ ನಡೆಸಿದವರ ವಿರುದ್ಧ ಕಲಂ 283,504 ಮತ್ತು 290 ಅಡಿಯಲ್ಲಿ 20 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಪ್ರತಿಭಟನೆ ನಿರತರಾದ ಶಿವಸಾಗರ ನಾಯಕ, ಗೋಪಿ,
ರಾಮಾಂಜನೇಯ, ಯರಿಸ್ವಾಮಿ, ವರುಣ್‌, ಸುನೀಲ್‌, ರಾಮಾಂಜನೇಯ, ಸಂತೋಷ,ಶ್ರೀಕಾಂತ ಹಾಗೂ ಇತರೆ, ಸುಮಾರು 15 ರಿಂದ 20 ಜನರ ವಿರುದ್ಧ ನಗರಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಾಗಿದ್ದು ಇದುವರೆಗೂ ಪೊಲೀಸರು ಐವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕ್ರಿಕೆಟ್ ಆಯ್ಕೆ ಪ್ರಕ್ರಿಯೆ 12, 13 ರಂದು
Cricket selection process on 12th, 13th


ಗಂಗಾವತಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಕ್ರಿಕೆಟ್ ಆಸಕ್ತಿಇರುವ 19 ವಯೋಮಾನದ ಬಾಲಕರ ಜುಲೈ 12 ಮತ್ತು 13 ರಂದು ಕಲಬುರ್ಗಿ ನಗರದ ಕೆಬಿಎನ್ ಮೈದಾನದಲ್ಲಿ ನಡೆಯಲಿದೆ ಎಂದು ರಾಯಚೂರು ಜಿಲ್ಲೆಯ ನಿರ್ದೇಶಕ ಮಂಜುನಾಥ ಹಾನಗಲ್ ಕೊಪ್ಪಳ ಜಿಲ್ಲೆಯ ನಿರ್ದೇಶಕ ಚಂದ್ರಶೇಖರ ಮೈಲಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜುಲೈ 12 ಬೆಳಗ್ಗೆ 9 ಕ್ಕೆ ವಿಜಯಪುರ, 11 ಗಂಟೆ ಬಾಗಲಕೋಟೆ, 2 ಗಂಟೆಗೆ ಬೀದರ್, 4 ಗಂಟೆಗೆ ಕಲಬುರ್ಗಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಜುಲೈ 13 ರಂದು ಬೆಳಗ್ಗೆ ರಾಯಚೂರು, 11 ಗಂಟೆಗೆ ಕೊಪ್ಪಳ, ಮಧ್ಯಾಹ್ನ 2 ಗಂಟೆಗೆ ಯಾದಗಿರಿ ಜಿಲ್ಲೆಯ 19 ವರ್ಷ ವಯಸ್ಸಿನ ಬಾಲಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆದ್ದರಿಂದ ಕ್ರಿಕೆಟ್ ಆಸಕ್ತ ಬಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಕೋರಿದ್ದಾರೆ.