Breaking News

ಕಟ್ಟಡ ನಿರ್ಮಾಣ ಮತ್ತು ಇತರೆನಿರ್ಮಾಣಕಾರ್ಮಿಕಐದನೇವಾರ್ಷಿಕೋತ್ಸವ ಕಾರ್ಯಕ್ರಮ

Building construction and other construction industry fifth anniversary program

ತಿಪಟೂರು: ನಗರದ ಸರ್ಕಾರಿ ನಿವೃತ್ತಿ ನೌಕರರ ಭವನದಲ್ಲಿ ಆಯೋಜಿಸಲ್ಪಟ್ಟ, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ ತಿಪಟೂರು ಘಟಕ ವತಿಯಿಂದ ಐದನೇ ವಾರ್ಷಿಕೋತ್ಸವ ಸಮಾರಂಭ, ತಾಲೂಕಿನ ಸಂಘದ ಪದಾಧಿಕಾರಿಗಳಿಗೆ ಅಧಿಕಾರದ ಪದಗ್ರಹಣ, ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಹಾಗೂ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಯಿತು.
ಉದ್ಘಾಟನೆಯನ್ನು ಮಾನ್ಯ ಶಾಸಕರು ಕೆ ಷಡಕ್ಷರಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕೂಲಿ ಕಟ್ಟಡ ಕಾರ್ಮಿಕರಿಗೆ ನಮ್ಮ ಸರ್ಕಾರದಿಂದ ಹಲವಾರು ಸೌಲತ್ತುಗಳನ್ನು ನೀಡುತ್ತಿದ್ದೇವೆ, ಇದರ ಉಪಯೋಗವನ್ನು ತಾಲೂಕಿನ ಕೂಲಿ ಕಟ್ಟಡ ಕಾರ್ಮಿಕರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು. ಸಂಘದ ರಾಜ್ಯಾಧ್ಯಕ್ಷರು ಸತ್ಯನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಿದಾನಂದ್ ರವರು ಸರ್ಕಾರದಿಂದ ಬರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು, ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು, ಕಾರ್ಮಿಕರಿಗೆ ಕಾರ್ಮಿಕ ಕಾರ್ಡನ್ನು ವಿತರಿಸಲಾಯಿತು. ಸಂಘದ ತುಮಕೂರು ಜಿಲ್ಲಾಧ್ಯಕ್ಷರು ಸರ್ವೇಶ್ ಕಾರ್ಮಿಕ ಇಲಾಖೆಯಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯವಿಲ್ಲದ ಕಾರಣ, ಕಾರ್ಮಿಕ ಇಲಾಖೆಯನ್ನು ಬದಲಾವಣೆ ಮಾಡಿ ಕೊಡಬೇಕೆಂದು ಶಾಸಕರಿಗೆ ಮನವಿ ಮಾಡಲಾಯಿತು, ಶಾಸಕರು ಇಲಾಖೆಯನ್ನು ಬದಲಾವಣೆ ಮಾಡಿ ಕೊಡುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಗೌರವ ಅಧ್ಯಕ್ಷರು ಸಿದ್ದಯ್ಯ, ಉಪಾಧ್ಯಕ್ಷರು ಬಿ ಬಿ ಸಿದ್ದಲಿಂಗ ಮೂರ್ತಿ, ಪತ್ರಕರ್ತರು ಡಾಕ್ಟರ್ ಭಾಸ್ಕರ್, ರೈತ ಕವಿ ಪಿ ಶಂಕರಪ್ಪ, ಕಾರ್ಮಿಕ ಸಂಘ ಜಿಲ್ಲಾ ಕಾರ್ಯದರ್ಶಿ ಧರಣೇಶ್ ಕುಪ್ಪಾಳು, ನಿವೃತ್ತ ಶಿಕ್ಷಕರು ಮಡೆನೂರು ಸೋಮಶೇಖರ್, ಶುಭ ವಿಶ್ವಕರ್ಮ, ಹರೀಶ್, ಪರಮೇಶ್, ಗಂಗಾಧರಯ್ಯ, ತಾಲೂಕಿನ ಸಂಘದ ಎಲ್ಲಾ ಪದಾಧಿಕಾರಿಗಳು, ತಾಲೂಕಿನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.