Breaking News

ಗಿಣಿಗೇರ ಗ್ರಾಮದಲ್ಲಿ ಡಾ. ಬಳಿ ಆರ್ ಅಂಬೇಡ್ಕರ್ ಯುವಕ ಸಂಘದ 206ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಬೈಕ್ ರಾಲಿ ಮಾಡಲಾಯಿತು.

Dr. in Ginigera village. A bike rally was organized as part of the 206th Bhima Koregaon Victory Day of BR Ambedkar Yuvaka Sangh.

Screenshot 2024 01 02 18 21 35 19 E307a3f9df9f380ebaf106e1dc980bb6 300x134

ಕೊಪ್ಪಳ: ತಾಲೂಕು ಗಿಣಿಗೇರಾ  ಗ್ರಾಮದಲ್ಲಿ ಇಂದು ಡಾ. ಬಿಆರ್ ಅಂಬೇಡ್ಕರ್ ಯುವಕ ಸಂಘದ  ಸರ್ವ ಸದಸ್ಯರಿಂದ 206ನೇ ಭೀಮಾ ಕೋರೆಗಾಂವ್  ವಿಜಯೋತ್ಸವವನ್ನು ಸರ್ವಸದಸ್ಯರಿಂದ ಬೈಕ್ ರಾಲಿ ಮುಖಾಂತರ ಡಾ ಬಿ ಆರ್ ಅಂಬೇಡ್ಕರ್ ಸರ್ಕಲ್ದಿಂದ ಪ್ರಮುಖ ಬೀದಿಗಳಲ್ಲಿ ಹಾಗೂ ಗಂಗಾವತಿಯ ಮುಖ್ಯ ರಸ್ತೆಯ ಮುಖಾಂತರ ಬೈಕ್  ರ್ಯಾಲಿಯಲ್ಲಿ ಭೀಮಾ ಕೋರೆಗಾಂವ್  ವಿಜಯೋತ್ಸವದ ಘೋಷಣೆಗಳನ್ನು ಕೂಗುತ್ತಾ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಕಾರ್ಯಕ್ರಮ ಉದ್ದೇಶಿಸಿ  ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಮಾದಿಗ ದಂಡೋರ ಸಂಘಟನಾ ಕಾರ್ಯದರ್ಶಿ ಆನಂದ್ ಮೂರುಮನೆ ಮಾತನಾಡುತ್ತ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಶಿರೂರು ತಾಲೂಕಿನ ಭೀಮಾನದಿ ಹತ್ತಿರ 1ಜನವರಿ  1818 ರಂದು ಅಸ್ಪೃಶ್ಯತೆ ಯನ್ನು ತೊರೆದು ಹಾಕಲು ಎರಡನೇ ಪೇಶ್ವೆ ಬಾಜಿರಾವ್ ಜೊತೆ 500 ಮಹರ್ ಜನರು  ಸೇರಿ 28000 ಪೇಶ್ವೆಗಳನ್ನು ಸತತ ಹನ್ನೆರಡು ಗಂಟೆಗಳ ಕಾಲ ಯುದ್ಧ ಮಾಡಿ ಕೊನೆಗೆ ಪೇಶ್ವೆಗಳು ಸೋಲನ್ನು ಒಪ್ಪಿಕೊಳ್ಳುತ್ತಾರೆ. ಬ್ರಿಟಿಷ್ ಸರ್ಕಾರವು 1821 ರಂದು 60 ಅಡಿ ಎತ್ತರದ ವಿಜಯಸ್ತಂಬ ಭೀಮ ನದಿ ಹತ್ತಿರ ನಿರ್ಮಾಣ ಮಾಡುತ್ತಾರೆ ಇದೇ ಇತಿಹಾಸದಲ್ಲಿ ಇರತಕ್ಕಂತ ಭೀಮಾ ಕೋರೆಗಾಂವ್ ಈ ವಿಜಯೋತ್ಸವದಲ್ಲಿ ಮೌನೇಶ್ ಹಲಗೇರಿ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರು ದುರ್ಗಪ್ಪ ಮೇಸ್ತ್ರಿ. ಮೈಲಾರಿ ಹಿರೇಮನಿ. ಅಶೋಕ ಹಲಗೇರಿ. ಕೆಂಚಪ್ಪ ಹಲಗೇರಿ.ದಾನಪ್ಪ ಹಲಗೇರಿ. ಅಂಬಣ್ಣ ಮೂರುಮನಿ. ಮಂಜು ಅಳ್ಳವ್ವನವರು.ಹರ್ಷ. ಗುಡದಪ್ಪ ಹಿರೇಮನಿ. ಹಾಗೂ ಸರ್ವ ಸದಸ್ಯರು ಪಾಲ್ಗೊಂಡಿದ್ದರು

About Mallikarjun

Check Also

screenshot 2025 12 17 18 45 28 37 e307a3f9df9f380ebaf106e1dc980bb6.jpg

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.