Breaking News

ವಿಭೂತಿ ಧರಿಸಿದವರ ಮಹತ್ವ..!

Importance of those who wear Vibhuti..!

ಜಾಹೀರಾತು
Screenshot 2023 12 04 09 32 49 02 680d03679600f7af0b4c700c6b270fe72

ವಿಭೂತಿ ಧರಿಸುವುದರಿಂದ ಭವ ರೋಗ ನಿವಾರಣೆಯಾಗುವುದಲ್ಲದೆ ಕಾಯ ಶಿವಮಯವಾಗುವುದು . ವಿಭೂತಿ ಧರಿಸಿದವರ ಮೊಗವು
ಸಾವಿರಾರು ಜನರ ಮಧ್ಯೆ ನಿಂತರು ಎದ್ದು ಕಾಣುತ್ತದೆ .
ವಿಭೂತಿ ಹಚ್ಚಿ ಕೊಂಡವರ ಮುಖದಲ್ಲಿ ತೇಜಸ್ಸು ಮತ್ತು ರಾಜ ಕಳೆ ತುಂಬಿರುತ್ತದೆ .
ಲಿಂಗ ವಿಭೂತಿ ರುದ್ರಾಕ್ಷಿ ನಮ್ಮ
ನಮ್ಮ ಬದುಕಿನ ಸಂಪತ್ತು . ಇದಕ್ಕೆ ಸರಿಸಮಾನವಾದ ಯಾವ ಐಶ್ವರ್ಯಾ ಇಲ್ಲ . ಹುಟ್ಟಿನಿಂದ ಬಂದು ಸಾವಿನ ಮನೆ ಅಂದ್ರೆ,ಮಣ್ಣಲ್ಲಿ ಮಣ್ಣಾಗುವ ತನಕ ನಮ್ಮ
ಜೊತೆಗೆ ಬರುವ. ಸಿರಿಸಂಪತ್ತು .
ನಮ್ಮ ಧರ್ಮದ ಸಂಪ್ರದಾಯಗಳು ಮನೆಗೆ ಅಡಿಪಾಯವಾಗಿರಬೇಕು . ಏಕೆಂದರೆ ?
ನಮ್ಮ ಬದುಕು ಕಟ್ಟಿಕೊಡುವುದು .ನಮ್ಮ ಆಚಾರ ವಿಚಾರ ಸಂಸ್ಕಾರ ಸಂಸ್ಕೃತಿಯಿಂದ .ನಮ್ಮ ಪೂರ್ವಜರು ಎಲ್ಲಾ ಸಂಪ್ರದಾಯಗಳು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.
“ನಾವು ಚಿಕ್ಕವರಿದ್ದಾಗ ಬೆಳಿಗ್ಗೆ ಎದ್ದ ತಕ್ಷಣ ಹೊರಗೆ ಬಂದು ನೋಡಿದರೆ ಪ್ರತಿಯೊಬ್ಬರ ಹಣೆಯ ಮೇಲೆ ವಿಭೂತಿ ಎದ್ದು ಕಾಣುತ್ತಿತ್ತು .
ಮನೆಯ ಆಚಾರ ಹೇಗಿರುತ್ತಿತ್ತು.ಅಂದ್ರೆ ಬೆಳೆಗೆ ಬೇಗ ಏಳಬೇಕು ಸ್ನಾನ ಮಾಡಿ ವಿಭೂತಿ ಹಚ್ಚಿ ಕೊಳ್ಳಬೇಕು.
ಪ್ರತಿಯೊಂದು ಮನೆ ಮನೆಗಳಲ್ಲಿ ಎಲ್ಲರ ಹಣೆ ಮೇಲೆ ವಿಭೂತಿ ನೋಡಿದಾಗ ಎಂತಹವರಿಗೂ ಭಕ್ತಿ ಮೂಡುತ್ತಿತ್ತು . ಒಬ್ಬರ ಮುಖ ಮತ್ತೊಬ್ಬರು ನೋಡುವುದರಿಂದ ಮುಂದೆ ಬರುವ ಕಂಟಕಗಳು ದೂರ ಆಗುತ್ತಿದ್ದವು . ಯಾವ ದುಷ್ಟ ಶಕ್ತಿಯೂ ಸನಿಯ ಸುಳಿಯುತ್ತಿರಲಿಲ್ಲ . ಮನೆಯಿಂದ ಹೊರಗೆ ಯಾವ ಕೆಲಸಕ್ಕೆ ಹೋಗಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಕೊಂಡು ಹಿಂದುರುಗಿ ಬರುತ್ತಿದ್ದರು.
ಲಿಂಗ ಪೂಜೆ ಮಾಡಿಕೊಳ್ಳುವಾಗ ಮೈತುಂಬಾ ವಿಭೂತಿ ಹಚ್ಚಿ ಕೊಳ್ಳುವುದರಿಂದ ಯಾವ ರೋಗಗಳು ಬರುತ್ತಿರಲಿಲ್ಲ .ಕಾಯ ಸದೃಢವಾಗಿ ಇರುತ್ತಿತ್ತು . ರೋಗ ನಿರೋಧಕ ಶಕ್ತಿ ವರ್ಧಕ ಚಿಕಿತ್ಸೆ ಅದಾಗಿತ್ತು.
ಯಾವ ವೈರಸ್ ಮೈಯಿಗೆ ಸೊಂಕುತ್ತಿರಲಿಲ್ಲ . ಅಷ್ಟೇಕೆ ಇಡೀ ದಿನ ಚೈತನ್ಯ ತುಂಬಿ ಮನಸ್ಸು ಉಲ್ಲಾಸದಿಂದ ಕೂಡಿ ಅನ್ಯ ವಿಚಾರಗಳಿಗೆ ಆಸ್ಪದ ಇರುತ್ತಿರಲಿಲ್ಲ.
ಹೀಗಾಗಿ ನಮ್ಮ ಸಂಪ್ರದಾಯದಲ್ಲಿ ವಿಶಿಷ್ಟ ಶಕ್ತಿ ಇದೆ.
ಉದಾಹರಣೆಗೆ ಒಂದು ಮಾತು
” ಒಬ್ಬ ಹುಡುಗ ಎಷ್ಟೇ ಪ್ರಯತ್ನ ಪಟ್ಟರೂ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗಲಿಲ್ಲ.
ಓದಿ ವಿದ್ಯಾವಂತನಾಗಿ ಬಂದರು ನೌಕರಿ ಇಲ್ಲ.ಕಷ್ಟಪಟ್ಟು ಏನಾದರೂ ಮಾಡಿದರು ಎಲ್ಲವೂ ಎದುರಾಗುತ್ತಿತ್ತು .
ಹೀಗಾಗಿ ಒಂದು ದಿನ ತನ್ನ ಗೆಳೆಯನ ಹತ್ತಿರ ತನ್ನ ದುಃಖ ತೊಡಗಿಕೊಂಡ . ಇಬ್ಬರೂ ಸೇರಿ ಯಾರಿಗಾದರೂ ಕೇಳಿ ನೋಡೋಣ ಎಂದು ಬರುತ್ತಿರುವಾಗ ಒಬ್ಬಳು ಅಜ್ಜಿ ಎದುರಿಗೆ ಬಂದಳು.
ಇವರ ಒಣಗಿದ ಮುಖ ನೋಡಿ “ಯಾಕ್ರಪ್ಪ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಿದಳು “
ಅಜ್ಜಿ ನಮ್ಮ ಕಥೆ ಏನು ಕೇಳುತ್ತಿ.
ಓದಿ ಬಂದರು ನೌಕರಿ ಇಲ್ಲ
ವ್ಯವಸಾಯ ನಮಗೆ ತಿಳಿಯದು ವ್ಯಾಪಾರ ಮಾಡಿದರೆ ಎಲ್ಲವೂ ಎದುರು ಆಗುವುದು ಅದಕ್ಕೆ ಏನು ಮಾಡಬೇಕು ಎಂಬುದನ್ನು ತಿಳಿಯದಾಗಿದೆ “
ಅಜ್ಜಿ ಹೇಳಿದಳು ಮಕ್ಕಳೆ ಮುಂಜಾನೆ ಎದ್ದು ವಿಭೂತಿ ಹಚ್ಚಿ ಕೊಂಡವರ ಮುಖ ನೋಡ್ರಿ ಎಲ್ಲವೂ ಒಳ್ಳೆಯದಾಗುತ್ತದೆ ಎಂದು ಹೇಳಿದಳು .
ಆಯ್ತು ಅಜ್ಜಿ ಇಷ್ಟೇನಾ ಪರಿಹಾರ ನೋಡೋಣ ಎಂದು ಇಬ್ಬರೂ ತಾವು ವಿಭೂತಿ ಹಚ್ಚಿ ಕೊಂಡು ವಿಭೂತಿ ಹಚ್ಚಿ ಕೊಂಡವರ ಮುಖ ನೋಡಿ ಹೋಗುತ್ತಿದ್ದರು .
ಎರಡು ದಿನಗಳಲ್ಲಿ ನೌಕರಿಗೆ ಕರೆ ಬಂತು .ಒಂದರ ಮೇಲೊಂದು ಜೀವನದ ಮೌಲ್ಯ ಹೆಚ್ಚುತ್ತಾ ಹೋಯಿತು .
ಅವರು ದಿನ ನಿತ್ಯವೂ ತಾವು ಮತ್ತು ಮನೆಯವರೆಲ್ಲರೂ ವಿಭೂತಿಯನ್ನು ಭಕ್ತಿಯಿಂದ ಹಚ್ಚಿಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರಿಗೂ ವಿಭೂತಿ ಮಹಿಮೆ ತಿಳಿಸುತ್ತಾ ನೆಮ್ಮದಿಯ ಜೀವನ ನಡೆಸುತ್ತಿದ್ದರು .
ಅದಕ್ಕಾಗಿ ನಮ್ಮ ಧರ್ಮದ ಪ್ರತಿಯೊಂದು ಆಚಾರ ವಿಚಾರಗಳು ನಡೆ ನುಡಿ ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ . ವಿಭೂತಿ ರುದ್ರಾಕ್ಷಿ ಮಂತ್ರ ಪಾದೋದಕ ಪ್ರಸಾದ್ ಎಲ್ಲದರಲ್ಲೂ ಅದ್ಬುತವಾದ ಶಕ್ತಿ ಅಡಗಿದೆ.

(ವಾಟ್ಸಪ್ ಕೃಪೆ)

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.