Breaking News

ರಾಮನಗುಡ್ಡ ಕೆರೆಗೆ ನೀರು ಹರಿಸುವ ಕಾಲುವೆಗಳ ದುರಸ್ತಿಗೆ ಚಾಲನೆ ನೀಡಿದ ಶಾಸಕ ಎಮ್ ಆರ್ ಮಂಜುನಾಥ್

MLA M R Manjunath launched the repair of canals that drain water into Ramanagudda Lake.
Screenshot 2025 08 05 17 26 53 54 6012fa4d4ddec268fc5c7112cbb265e77379986693443732836 1024x568


ವರದಿ : ಬಂಗಾರಪ್ಪ .ಸಿ .

ಜಾಹೀರಾತು

ಹನೂರು :ರೈತರ ಬಹುದಿನಗಳ ಬೇಡಿಕೆಯಾಗಿದ್ದ ರಾಮನ ಗುಡ್ಡ ಕೆರೆಗೆ ನದಿ ನೀರು ಹರಿಸುವ ಮಹತ್ವಾಕಾಂಕ್ಷಿ ಯೋಜನೆ ಕಾರ್ಯಕ್ಕೆ ಚಾಲನೆ ನೀಡಿ ಕಾಲುವೆಗಳನ್ನು ದುರಸ್ತಿ ಪಡಿಸಲಾಗುತ್ತಿದೆ ರೈತರು ಇದಕ್ಕೆ ಸಹಕಾರ ನೀಡುವಂತೆ ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರ.

ಹನೂರು ಪಟ್ಟಣದ   ರಾಮನಗುಡ್ಡ ಕೆರೆಗೆ ನದಿಯಿಂದ ನೀರು ಬರುವ ನಾಲೆಯನ್ನು ಕಾಲುವೆ ಮಾದರಿ ದುರಸ್ತಿ ಪಡಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಭೂಮಿ ಪೂಜೆಯನ್ನು ಸಲ್ಲಿಸಿದ ನಂತರ ಮಾತನಡಿದ ಅವರು
ಮುಂಗಾರು ಮಳೆ ಸಂಪೂರ್ಣವಾಗಿ ದುರ್ಬಲ  ಹೀಗಾಗಿ ಹನೂರು ಪಟ್ಟಣ ಸೇರಿದಂತೆ ರಾಮನಗುಡ್ಡ ಕೆರೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಾಗೂ ವಿವಿಧ ಗ್ರಾಮಗಳಿಗೆ ನೀರಿನ ಮೂಲ ಕಾವೇರಿ ನದಿಯಿಂದ ಪೈಪ್ಲೈನ್ ಅಳವಡಿಸಲಾಗಿದ್ದು ಒಂದು ಕಿಲೋಮೀಟರ್ ದೂರದಲ್ಲಿರುವ ಪೈಪ್ಲೈನ್ ತಳದಿಂದ ತಾತ್ಕಾಲಿಕವಾಗಿ ಕಾಲುವೆ ಮಾಡಿ 15 ದಿನಗಳ ಒಳಗೆ ನೀರನ್ನು ಕೆರೆಗೆ ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾಲುವೆ ಕಾಮಗಾರಿಗೆ ರೈತರು ಸಹಕರಿಸಬೇಕು ಈಗಾಗಲೇ ಕಾಮಗಾರಿಗೆ ಹಿಟಾಚಿ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ, ಹೀಗಾಗಿ ರೈತರು ರಾಮನಗುಡ್ಡ ಕೆರೆಗೆ ನೀರು ಬರುವ ಮೂಲ ಕಾಲುವೆಯನ್ನು ತಾತ್ಕಾಲಿಕವಾಗಿ ರೈತರ ಜಮೀನುಗಳ ಬಳಿ ಗಿಡಗಂಟಿ  ರಾಡಿಯನ್ನು ತೆಗೆಯಲಾಗುತ್ತಿದ್ದು ರೈತರು ಸಹಾಯಕ್ಕೆ ಪೂರಕವಾಗಿ ಜೊತೆಯಲ್ಲಿದ್ದು ಸಂಪೂರ್ಣ ಸಹಕಾರ ನೀಡಿದರೆ ಆದಷ್ಟು ಬೇಗ ನೀರನ್ನು ಹರಿಸಲು ಅನುಕೂಲವಾಗುತ್ತದೆ ಎಂದರು.
ಕೆರೆ ಒತ್ತುವರಿ ತೆರವಿಗೆ ಕ್ರಮ : ರಾಮನ ಗುಡ್ಡ ಕೆರೆ ನೀರಿನ ಮೂಲವಾಗಿದ್ದು 98 ಎಕರೆ ಸ್ಥಳ ಇರುವುದನ್ನು ನೀರಾವರಿ ಇಲಾಖೆ ಅಧಿಕಾರಿಗಳು ಗುರುತು ಮಾಡಿ ಚೆಕ್ ಬಂದ್ ಗುರುತು ನಿರ್ಮಾಣ  ಮಾಡಲಾಗುತ್ತದೆ ಹೀಗಾಗಿ ಅಧಿಕಾರಿಗಳಿಗೂ ಸಹ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಮಹತ್ವ ಕಛೇಯ ನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಲಾಗಿದ್ದು ಈ ಭಾಗದ ರೈತರು ಸದ್ಬಳಕೆ ಮಾಡಿಕೊಂಡು ರಾಮನ ಗುಡ್ಡ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲು ಈ ನಿಟ್ಟಿನಲ್ಲಿ ರೈತರು ಮುಂದಾಗಬೇಕು ಎಂದು ತಿಳಿಸಿದರು .

ಇದೇ ಸಂದರ್ಭದಲ್ಲಿ ಮುಖಂಡರಾದ ಗುರುಮಲ್ಲಪ್ಪ , ನಟರಾಜು,ರಾಜುನಾಯ್ಡು,
ಡಿ ಆರ್ ಹಾರ್ಡ್ವೇರ್ ಸೀನ ,ರೈತ್ಯ ಮುಖಂಡರಾದ ಚಂಗಡಿ ಕರಿಯಪ್ಪ,ಮಿತ್ರ,
ಅಮೋಘ, ಮಲ್ಲಣ್ಣ,ವಿಜಯ್ ಕುಮಾರ್,ಪಟ್ಟಣ ರಾಮನಗುಡ್ಡ ತೋಟದ ಜಮೀನಿನ ರೈತರು ಚಿಂಚಳ್ಳಿ ವಿವಿಧ ಗ್ರಾಮಗಳಿಂದ ನೂರಾರು ರೈತರು ಸೇರಿದಂತೆ ಹಲವಾರು ಹಾಜರಿದ್ದರು .

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.