Gangavathi: Appeal to the civic commissioner demanding that cows be sent to a cowshed to prevent public nuisance on city roads

ಗಂಗಾವತಿ ನಗರದಲ್ಲಿ ಹಸುಗಳು (ಗೋವುಗಳು )ಅಧಿಕ ಸಂಖ್ಯೆಯಲ್ಲಿ ಅನಾಥವಾಗಿದ್ದು, ಅವು ಹಗಲಿನ ಸಮಯದಲ್ಲಿ ನಗರದ ಬೀದಿ ಬೀದಿಗಳಲ್ಲಿ ತಿರುಗಾಡಿ ಯಾವ ಆಹಾರ ತಿನ್ನುತ್ತಾವೇಯೋ ಅಥವಾ ಪ್ಲಾಸ್ಟಿಕ್, ಮತ್ತು ಕಸ ಕಡ್ಡಿ ತಿನ್ನುತ್ತಾವೇಯೋ ತಿಳಿಯದು. ಉಪವಾಸ ದಿಂದಲೂ ಇರಬಹುದು.ರಾತ್ರಿ ಯಾಗುತ್ತಲೇ ಅವುಗಳಿಗೆ ರಸ್ತೆಗಳು ಹಾಗೂ ಸರಕಾರಿ ಪದವಿ ಪೂರ್ವಕಾಲೇಜು ಮೈದಾನ ಮತ್ತು ಇತರೇ ಸ್ಥಳಗಳು ತಂಗು ದಾಣ ಗಳಾಗಿವೆ. ಹಸುಗಳು ಮೈದಾನದಲ್ಲಿ ಸಗಣಿ ಹಾಕುವದರಿಂದ ಬೆಳಿಗ್ಗೆ ವಾಕಿಂಗ್ ಮಾಡುವವರಿಗೆ ಹಾಗೂ ಆಟ ಆಡುವವರಿಗೆ ತೊಂದರೆಯಾಗಿರುತ್ತದೆ.ಹಿಂದೂಗಳು ಗೋವುಗಳನ್ನ ದೇವತಾ ರೂಪದಲ್ಲಿ ಪೂಜೆ ಮಾಡುವ ಪದ್ಧತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಅವುಗಳ ಜೀವನ ಬಹಳ ಕಷ್ಟಮಯದಿಂದ ಕೂಡಿದೆ.ಇವುಗಳ ಪಾಲನೆ ಪೋಷಣೆ ಎಲ್ಲರ ಜವಾಬ್ದಾರಿಯಾಗಿರುತ್ತದೆ. ಅದರಲ್ಲೂ ನಗರಸಭೆಯ ಜವಾಬ್ದಾರಿ ಬಹಳ ಮುಖ್ಯವಾಗಿರುತ್ತದೆ. ನಗರಸಭೆ ತಮ್ಮ ಕಸದ ವಾಹನಗಳ ಮೂಲಕ ಹಸುಗಳ ಮಾಲಿಕರಿದ್ದಲ್ಲಿ ಅವುಗಳನ್ನು ತೆಗೆದುಕೊಂಡು ಹೋಗುವಂತೆ ಪ್ರಚಾರ ಮಾಡಬೇಕು. ಯಾರೂ ತೆಗೆದುಕೊಂಡು ಹೋಗದಿದ್ದರೆ ಅವುಗಳನ್ನು ಗೋಶಾಲೆಗೆ ಸೇರಿಸಬೇಕು. ಇದರಿಂದ ಅವುಗಳ ರಕ್ಷಣೆ ಮಾಡಿದಂತಾಗುತ್ತದೆ. ಇಂದಿನಿಂದ ಒಂದು ತಿಂಗಳ ಸಮಯದ ಗಡುವು ತಮಗೆ ನೀಡುತ್ತಿದ್ದೇವೆ.ಈ ನಮ್ಮ ಮನವಿಗೆ ಸ್ಪಂದಿಸುವ ಕೆಲಸ ಮಾಡದೇ ನಿರ್ಲಕ್ಷ ಮಾಡಿದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಅಂದರೆ ದಿನಾಂಕ 14-8-2025 ರಂದು ರಾತ್ರಿ ಎಂಟು ಗಂಟೆಗೆ ಹಸುಗಳನ್ನು ನಮ್ಮ ಸಂಘದ ಪದಾಧಿಕಾರಿಗಳು ನಗರಸಭೆಯ ಆವರಣದಲ್ಲಿ ತಂದು ಬಿಡಲಾಗುವದು. ನಮ್ಮ ಮೇಲೆ ಏನೇ ಕ್ರಮಕ್ಕೆ ಮುಂದಾದರೂ ನಮ್ಮ ಹೋರಾಟ ಬಿಡುವದಿಲ್ಲ. ಮರುದಿನ ಸ್ವಾತಂತ್ರ್ಯ ದಿನಾಚರಣೆಗೆ ತೊಂದರೆಯದಲ್ಲಿ ನಗರಸಭೆ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಒಂದು ತಿಂಗಳ ಮುಂಚೆಯೇ ಮನವಿ ಸಲ್ಲಿಸಲಾಗಿದೆ. ಕೂಡಲೇ ಹಸುಗಳ ರಕ್ಷಣೆಗೆ ಮುಂದಾಗಬೇಕೆಂದು ಹೊರಾಟಮಾಡಲು ಅವಕಾಶ ಕೊಡಬೇಡಿಎಂದು ಒತ್ತಾಯಿಸಿ ಕೊಪ್ಪಳ ಜಿಲ್ಲಾಸರ್ವಾಂಗೀಣಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳ ಮನಿ ಪೌರಾಯುಕ್ತರಿಗೆ ಇಂದು ಮನವಿಸಲ್ಲಿಸಿದರು.