Breaking News

2026ರೊಳಗೆ ನೂತನ ಅನುಭವ ಮಂಟಪ ಲೋಕಾರ್ಪಣೆಗೆ ಸಿದ್ಧವಾಗಲಿದೆ.-ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ.

The new Anubhav Mantapa will be ready for public inauguration by 2026. - District In-charge Minister Ishwar Khandre.
Screenshot 2025 07 08 10 33 41 96 6012fa4d4ddec268fc5c7112cbb265e74330871135810118958 1024x688

ಜಗತ್ತಿಗೆ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮಾರ್ಗ ತೋರಿದ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ಈಶ್ವರ ಖಂಡ್ರೆ ಅವರ ಕನಸಿನ ಯೋಜನೆಯಾದ “ನೂತನ ಅನುಭವ ಮಂಟಪ” ನಿರ್ಮಾಣ ಕಾರ್ಯ ವೇಗವಾಗಿ ಸಾಗುತ್ತಿದೆ.

ಜಾಹೀರಾತು

ಸಚಿವ ಈಶ್ವರ ಖಂಡ್ರೆ ಅವರು ಇಂದು ಸಂಬಂಧಿತ ಇಲಾಖಾಧಿಕಾರಿಗಳು ಹಾಗೂ ನಿರ್ಮಾಣ ಹೊಣೆ ಹೊತ್ತಿರುವ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಕಾಮಗಾರಿ ಪ್ರಗತಿಯನ್ನು ಪರಿಶೀಲಿಸಿದರು.ಈಗಾಗಲೇ 60% ಕೆಲಸ ಮುಕ್ತಾಯಗೊಂಡಿದ್ದು, ಉಳಿದ ಕಾಮಗಾರಿ 2026ರೊಳಗೆ ಪೂರ್ಣಗೊಳ್ಳಲಿದೆ. ಅಗತ್ಯ ಅನುದಾನವನ್ನೂ ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಐಐಟಿ ವಿಜ್ಞಾನಿಗಳ ಸಹಕಾರದಿಂದ ಈ ಮಂಟಪದಲ್ಲಿ ಧ್ಯಾನ, ವಚನ ಪಠಣ ಇತ್ಯಾದಿಯಿಂದ ಮೆದುಳಿನ ಬದಲಾವಣೆಗಳ ಅಧ್ಯಯನ ನಡೆಯಲಿದೆ. ತಂತ್ರಜ್ಞಾನ ಮತ್ತು ಅಧ್ಯಾತ್ಮದ ಸಮನ್ವಯದ ಜಾಗತಿಕ ಮಾದರಿಯಾಗಿ ಈ ಮಂಟಪ ರೂಪುಗೊಳ್ಳಲಿದೆ.

ಬಸವಣ್ಣನವರ ದರ್ಶನ, ವಚನ ಮತ್ತು ಶರಣ ಸಂಸ್ಕೃತಿಯ ಸಾರವನ್ನು ಮುಂದಿನ ಪೀಳಿಗೆಗೆ ಪೂರೈಸುವ ನಿಜವಾದ ಜ್ಞಾನಮಂದಿರವೆಂದು ಇದು ಪರಿಗಣಿಸಲಿದೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.