Breaking News

ಹನುಮನ ಭಂಟ ವಿದ್ಯಾದಾಸ್‌ಬಾಬಾಗೆ ತಪ್ಪದಕಿರುಕುಳನ್ಯಾಯಕ್ಕಾಗಿ ಮತ್ತೆ ಧಾರವಾಡ ಪೀಠಕ್ಕೆ ಮೊರೆಹೋದ ಬಾಬಾ

Baba again approaches Dharwad bench for justice for harassment of Hanuman devotee Vidyadas Baba

ಜಾಹೀರಾತು


ಗಂಗಾವತಿ, ಜೂ.೨೩: ಸಮೀಪದ ಐತಿಹಾಸಿಕ ರಾಮಭಂಟ ಹನುಮ ಅಂಜನಾದ್ರಿಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಕುರಿತಂತೆ ಗೊಂದಲಗಳು ದಿನೆದಿನಕ್ಕೆ ಹೆಚ್ಚಾಗುತ್ತಿದೆ. ಇದು ಸ್ಥಳೀಯರು ಹಾಗೂ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಅಂಜನಾದ್ರಿ ಬೆಟ್ಟದ ವಿವಾದವನ್ನು ಶಾಂತಗೊಳಿಸುವುದು ಬಿಟ್ಟು ಜಿಲ್ಲಾಡಳಿತವೂ ಕೂಡ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಸ್ವತಂತ್ರವಾಗಿದ್ದ ಅಂಜನಾದ್ರಿ ಬೆಟ್ಟವು ವಿದ್ಯಾದಾಸ್ ಬಾಬಾನ ನೇತೃತ್ವದಲ್ಲಿ ಪೂಜಾ ಧಾರ್ಮಿಕ ಕಾರ್ಯಗಳು, ಹನುಮಾನ್ ಚಾಲೀಸಾ ಹಾಗೂ ಸಂಸ್ಕೃತ ವೇದ ಪಠಣಗಳ ಮೂಲಕ ನೆಮ್ಮದಿಯಾಗಿ ಭಕ್ತರ ಆಶಯಗಳನ್ನು ಈಡೇರಿಸುವ ಧಾರ್ಮಿಕ ತಾಣವಾಗಿ ಮುನ್ನೆಡೆದಿತ್ತು. ಆದರೆ, ಯಾವಾಗ ಅಂಜನಾದ್ರಿಯ ಖ್ಯಾತಿ ರಾಷ್ಟçದಾದ್ಯಂತ ಹರಡಿತೋ ಆಗ ಭಕ್ತರ ಸಂಖ್ಯೆಯು ಸಾಗರೋಪಾದಿಯಲ್ಲಿ ಸೇರತೊಡಗಿತು. ಸಹಜವಾಗಿಯೇ ಅಂಜನಾದ್ರಿ ದೇವಾಲಯಕ್ಕೆ ಹಣದ ಹರಿವು ಆರಂಭವಾಯಿತು. ಅಲ್ಲಿಂದಲೇ ಅಂಜನಾದ್ರಿಯ ಬೆಟ್ಟದಲ್ಲಿ ಗೊಂದಲಗಳು ಆರಂಭವಾದವು. ಷಡ್ಯಂತ್ರ, ತಂತ್ರ, ಕುತಂತ್ರಗಳ ಮೂಲಕ ಅಂಜನಾದ್ರಿಯ ಮೂಲ ಅರ್ಚಕರಾದ ವಿದ್ಯದಾಸ್ ಬಾಬಾರವರನ್ನು ಬೆಟ್ಟದ ಮೇಲಿಂದ ತೊಲಗಿಸುವ ಹುನ್ನಾರುಗಳು ಕೂಡ ನಡೆದವು. ಕುತಂತ್ರಿಗಳ ಹುನ್ನಾರದ ಫಲವಾಗಿ ವಿದ್ಯಾದಾಸ್‌ಬಾಬಾ ಅಂಜನಾದ್ರಿ ದೇವಸ್ಥಾನದ ಪೂಜಾ ವಿದಿ-ವಿಧಾನಗಳಿಂದ ವಿಮುಖರಾಗಿ ಬೆಟ್ಟ ಇಳಿದು ಹೋಗಬೇಕಾಯಿತು.
ನಂತರ ಮಾನಸಿಕವಾಗಿ ಸಾಕಷ್ಟು ನೊಂದಿದ್ದ ವಿದ್ಯಾದಾಸ್‌ಬಾಬಾ ನ್ಯಾಯಕ್ಕಾಗಿ ಹೈಕೋರ್ಟ್ ಮೊರೆ ಹೋದರು. ಅಂಜನಾದ್ರಿ ದೇವಸ್ಥಾನದ ಪೂಜಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬAಧಿಸಿದAತೆ ಎಲ್ಲಾ ಹಕ್ಕುಗಳನ್ನು ತನಗೆ ಬಿಟ್ಟುಕೊಡುವಂತೆ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಕೂಡ ಇವರ ಅಹವಾಲು ಆಲಿಸಿ ದಾಖಲೆಗಳನ್ನು ಪರಿಶೀಲಿಸಿ ವಿದ್ಯಾದಾಸ್‌ಬಾಬಾ ಪರವಾಗಿ ತೀರ್ಪು ನೀಡಿ ಪೂಜಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿತು. ಅಷ್ಟರಲ್ಲಾಗಲೇ ಧಾರ್ಮಿಕ ದತ್ತಿ ಇಲಾಖೆ, ತಾಲೂಕು ಆಡಳಿತ, ಜಿಲ್ಲಾಡಳಿತಗಳು ಅಂಜನಾದ್ರಿ ಬೆಟ್ಟವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದವು. ಹೈಕೋರ್ಟ್ ತೀರ್ಪನ್ನು ಗೌರವಿಸಿದಂತೆ ನಾಟಕವಾಡಿದ ಅಧಿಕಾರಿಗಳು ಕೆಲವು ದಿನ ಪೂಜಾ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿದಂತೆ ಮಾಡಿ ಮತ್ತೆ ಸ್ಥಳೀಯ ಕೆಲ ಮುಖಂಡರನ್ನು ಮುಂದಿಟ್ಟುಕೊAಡು ಬಾಬಾರನ್ನು ಎರಡನೇ ಬಾರಿಗೆ ದೇವಸ್ಥಾನದಿಂದ ಹೊರಹಾಕಲಾಯಿತು. ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋದ ವಿದ್ಯಾದಾಸ್‌ಬಾಬಾ ಅವರು ಸುದೀರ್ಘ ಕಾನೂನು ಹೋರಾಟದ ನಂತರ ಅಂಜನಾದ್ರಿಯ ಪೂಜಾ ಆರತಿಯ ಹಕ್ಕು ಸ್ವಾಮ್ಯತೆಯನ್ನು ಪಡೆದರು. ನಂತರ ಕೆಲ ದಿನಗಳ ಡೊಂಬರಾಟ ಮುಂದುವರೆಯಿತು. ಮತ್ತೆ ವಿದ್ಯಾದಾಸ್‌ಬಾಬಾರ ವಿರುದ್ಧ ಕುತಂತ್ರಗಳು ಮುಂದುವರೆದವು. ಮತ್ತೆ ವಿದ್ಯಾದಾಸ್‌ಬಾಬಾರಿಗೆ ಕಿರುಕುಳ ಆರಂಭವಾಯಿತು. ಅದೆಷ್ಟರ ಮಟ್ಟಿಗೆ ಬಾಬಾರವರಿಗೆ ಕಿರುಕುಳ ನೀಡಲಾಯಿತೆಂದರೆ ನೆಮ್ಮದಿಯಾಗಿ ಮಂತ್ರಘೋಷಣೆಯೊAದಿಗೆ ಆಂಜನೇಯ ಸ್ವಾಮಿಗೆ ಆರತಿಯನ್ನು ಬೆಳಗಲು ಅವಕಾಶ ನೀಡದಂತಾಯಿತು. ಸುಪ್ರೀಂಕೋರ್ಟ್ನ ಆದೇಶಕ್ಕೆ ಜಿಲ್ಲಾಡಳಿತವಾಗಲೀ, ತಾಲೂಕು ಆಡಳಿತವಾಗಲೀ, ಧಾರ್ಮಿಕ ದತ್ತಿ ಇಲಾಖೆಯಾಗಲೀ ಕವಡೆ ಕಾಸೀನ ಕಿಮ್ಮತ್ತು ನೀಡಲಿಲ್ಲ. ಇದರಿಂದ ನೊಂದ ವಿದ್ಯಾದಾಸ್‌ಬಾಬಾ ಧಾರವಾಡ ಪೀಠಕ್ಕೆ ಮೊರೆಹೋಗಿದ್ದಾರೆ.
ವಿದ್ಯಾದಾಸ್ ಬಾಬಾರ ವಿರುದ್ಧ ಸಾಕಷ್ಟು ತಂಡಗಳು ಷಡ್ಯಂತ್ರ ರೂಪಿಸಿ ಕಾರ್ಯನಿರ್ವಹಿಸುತ್ತಿದೆ. ಅಂಜನಾದ್ರಿ ಬೆಟ್ಟದ ಧಾರ್ಮಿಕ ದತ್ತಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಹೆಚ್.ಪ್ರಕಾಶ್‌ರಾವ್ ಅವರೂ ಕೂಡ ಕೆಲ ಮಾಧ್ಯಮದವರಿಗೆ ಸ್ವತಃ ತಾವೇ ಕರೆ ಮಾಡಿ ಹತ್ತಿರದ ಸುಕ್ಷೇತ್ರ ಹುಲಿಗಿಗೆ ಕರೆಯಿಸಿ ಅವರಿಗೆ ಸನ್ಮಾನಿಸಿ ಕೈತುಂಬ ದಕ್ಷಣೆ ನೀಡಿ ಬಾಬಾನ ವಿರುದ್ಧ ವರದಿ ಮಾಡುವಂತೆ ಪ್ರಚೋದಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಅದಕ್ಕೆ ಸಾಕ್ಷಿ ಎಂಬAತೆ ಸಾಕಷ್ಟು ವರದಿಗಳೂ ಕೂಡ ಪ್ರಸಾರವಾಗಿವೆ. ವಿದ್ಯಾದಾಸ್‌ಬಾಬಾ ವಿರುದ್ಧ ಎಂ.ಹೆಚ್.ಪ್ರಕಾಶರಾವ್ ಅವರಿಗೆ ರಾಜಮನೆತನದ ಪ್ರಮುಖರೊಬ್ಬರು ಸುಫಾರಿ ನೀಡಿದ್ದಾರೆ ಎಂಬ ಆರೋಪಗಳು ಗಟ್ಟಿಯಾಗಿ ಕೇಳಿಬರುತ್ತಿದೆ. ಸದ್ಯಕ್ಕೆ ಸುಕ್ಷೇತ್ರ ಹುಲಿಗಿ, ಅಂಜನಾದ್ರಿ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಹೆಚ್.ಪ್ರಕಾಶರಾವ್ ಅವರ ಕುತಂತ್ರವೂ ಕೂಡ ಇಲ್ಲಿ ಕೆಲಸ ಮಾಡಿದೆ. ಯಾವುದೇ ಕಾರಣಕ್ಕೂ ಹಠ ಬಿಡದ ಯೋಗಿಯಂತೆ ಹೋರಾಟ ನಡೆಸಿರುವ ವಿದ್ಯಾದಾಸ್‌ಬಾಬಾ ಅವರಿಗೆ ನ್ಯಾಯಾಲಯವೂ ಕೂಡ ನ್ಯಾಯಸಮ್ಮತವಾದ ಆದೇಶವನ್ನೇ ನೀಡಿದೆ. ಆದರೆ, ನ್ಯಾಯಾಲಯಗಳ ಆದೇಶವನ್ನು ಉಲ್ಲಂಘಿಸುವ ಮೂಲಕ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಈ ಕುರಿತಂತೆ ಧಾರವಾಡದ ನ್ಯಾಯಪೀಠಕ್ಕೆ ವಿದ್ಯಾದಾಸ್‌ಬಾಬಾ ಮೊರೆ ಹೋಗಿದ್ದಾರೆ. ಹಾಗೇನಾದರೂ ಪಾರದರ್ಶಕ ತನಿಖೆ ನಡೆದು ತೀರ್ಪು ಹೊರಬಿದ್ದರೆ ತಾಲೂಕಾಡಳಿತ, ಜಿಲ್ಲಾಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ತಲೆದಂಡವಾಗುವುದು ಖಚಿತ. ಆ ದಿನಗಳು ದೂರವಿಲ್ಲ. ಸ್ಥಳೀಯರು ಹಾಗೂ ಅಂಜನಾದ್ರಿ ಬೆಟ್ಟದ ಭಕ್ತಸಮೂಹ ರೊಚ್ಚಿಗೆದ್ದು ಪ್ರತಿಭಟಿಸುವ ಮುನ್ನವೇ ಸಂಬAಧಿಸಿದ ಅಧಿಕಾರಿಗಳು ಎಚ್ಚರಗೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ಪಶ್ಚತಾಪ ಪಡಬೇಕಾದ ದಿನಗಳು ದೂರವಿಲ್ಲ.
ಕೋಟ್
ಅಂಜನಾದ್ರಿ ಬೆಟ್ಟದಲ್ಲಿ ಆಂತರಿಕ ಕಲಹಗಳು ಮಿತಿಮೀರಿದ್ದು, ಭಕ್ತರ ನೆಮ್ಮದಿಗೆ ಭಂಗ ತರುತ್ತಿದೆ. ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಉಲ್ಲಂಘಿಸುವ ಮೂಲಕ ಉದ್ಧಟತನ ತೋರುತ್ತಿದೆ. ಕೇವಲ ಆದಾಯ ಮೂಲವನ್ನೇ ಮಾತ್ರ ನೋಡುತ್ತಿರುವ ಅಧಿಕಾರಿಗಳು, ಅಂಜನಾದ್ರಿ ಸರ್ವಾಂಗೀಣ ಅಭಿವೃದ್ಧಿಯನ್ನು ಮರೆತಿದ್ದಾರೆ. ಈ ನಿಟ್ಟಿನಲ್ಲಿ ಭಕ್ತರ ಸಹನೆ ಕಟ್ಟೆ ಹೊಡೆಯುವ ಮುನ್ನ ಸಂಬAಧಿಸಿದವರು ಜಾಗೃತರಾಗಲಿ.
ಕಾವ್ಯಾಂಜಲಿ, ರೈತ ಹೋರಾಟಗಾರ್ತಿ.

About Mallikarjun

Check Also

ಇ.ಎಸ್.ಐ ಆಸ್ಪತ್ರೆ ಆವರಣದಲ್ಲಿ ವಿಶ್ವ ತೊನ್ನುರೋಗ ದಿನದ ಅಂಗವಾಗಿಜನ ಜಾಗೃತಿ

Public awareness campaign on World Tuberculosis Day at ESI Hospital premises ಬೆಂಗಳೂರು,ಜೂ.25: ವಿಶ್ವ ತೊನ್ನು ರೋಗ …

Leave a Reply

Your email address will not be published. Required fields are marked *