Breaking News

ಧರ್ಮ ಸಾಂಸ್ಥಿಕರಣ ಮಠ ಪರಂಪರೆ ಬಸವ ತತ್ವಕ್ಕೆ ಮಾರಕ

The religious institutionalization of the Math tradition is fatal to the Basava principle

ಜಾಹೀರಾತು
ಜಾಹೀರಾತು


ಜಗವು ಕಂಡ ಸರ್ವ ಶ್ರೇಷ್ಠ ವಿಚಾರವಾದಿ ಬಂಡುಕೋರ ಚಿಂತಕ ಸಮಾಜವಾದಿ ಬಸವಣ್ಣನವರು ಸ್ಥಾಪಿಸಿದ ಸಾರ್ವಕಾಲಿಕ ಸಮತೆಯ ಶಾಂತಿ ಪ್ರೀತಿಯನ್ನು ಅನುಸರಿಸುವ ವರ್ಗರಹಿತ ವರ್ಣರಹಿತ ಲಿಂಗ ಭೇದ ರಹಿತ ಆಶ್ರಮ ಭೇದವಿರದ ಸಾಂಸ್ಥಿಕರಣವಲ್ಲದ ಜಗತ್ತಿನ ಏಕೈಕ ಧರ್ಮವಾಗಿದೆ .ಅನುಭವ ಮಂಟಪವು ಶರಣರು ಜಾಗತಿಕ ಪ್ರಜಾಪ್ರಭುತ್ವಕ್ಕೆ ಕೊಟ್ಟ ಅದ್ವಿತೀಯ ಕೊಡುಗೆಯಾಗಿದೆ . ಮ್ಯಾಗ್ನ ಕಾರ್ಟಕ್ಕಿಂತ ಶತಮಾನಕ್ಕೂ ಮುಂಚೆ ಬಸವಾದಿ ಪ್ರಮಥರು ಪ್ರಜಾಪ್ರಭುತ್ವವನ್ನು ಲೋಕಶಾಹಿ ಹೊಸ ರಾಜಕೀಯ ಸಾಮಾಜಿಕ ಸಾಹಿತಿಕ ಆರ್ಥಿಕ ನೈತಿಕ ಧಾರ್ಮಿಕ ಪರ್ಯಾಯ ವ್ಯವಸ್ಥೆಯನ್ನು ಹುಟ್ಟು ಹಾಕಿದರು .ಬಸವಣ್ಣ ಎಂದರೆ ಶತಮಾನಗಳಿಂದ ಸಾಗಿ ಬಂದಿದ್ದ ಮೌಢ್ಯ ಸಂಪ್ರದಾಯಗಳನ್ನುಮೆಟ್ಟಿ ನಿಂತು ನಿತ್ಯ ನೂತನ ತತ್ವ ಸಿದ್ಧಾಂತದ ಆಚರಣೆ ರಹಿತ ಸಂಪ್ರದಾಯಗಳಿಲ್ಲದ ಶ್ರೇಣೀಕೃತವಲ್ಲದ ಸಮಾಜವನ್ನು ಕಟ್ಟಿದನು .

ಇಂದು ಬಸವ ಪರಂಪರೆ ಅನೇಕ ಮಠಗಳು ಸ್ವಾಮಿ ಅಕ್ಕನವರು ಕರ್ಮಠರಾಗಿ ಬಸವ ತತ್ವವನ್ನು ವಿರೂಪಗೊಳಿಸಿದ್ದಾರೆ. ಲಾಂಛನಧಾರಿಗಳು ಲಿಂಗ ತತ್ವವನ್ನು ಅರಿತೋ ಅರಿಯದೋ ಹೀಗೆ ಹೊಸ ಹೊಸ ಆಚರಣೆಗಳನ್ನು ಹುಟ್ಟು ಹಾಕಿ ಸಮಾಜವಾದಿ ಬಸವಣ್ಣನವರ ಆಶಯಗಳಿಗೆ ಧಕ್ಕೆ ತಂದಿದ್ದಾರೆ ತರುತ್ತಿದ್ದಾರೆ .ಬಸವ ಭಕ್ತರ ಪ್ರಜ್ಞೆ ಇತ್ತಿಚೆಗೆ ಹೆಚ್ಚುತ್ತಿದ್ದು ಇಂತಹ ಕರ್ಮಠ ಮೌಡ್ಯಗಳನು ಧಿಕ್ಕರಿಸುವ ಪ್ರತಿಭಟಿಸುವ ತಿರಸ್ಕರಿಸುವ ಕಾಲ ದೂರ ಉಳಿದಿಲ್ಲ . ಬಸವ ತತ್ವವನ್ನು ಮೂಲಸ್ವರೂಪದಲ್ಲಿ ಆಚರಣೆಗೆ ತರದೇ ಹೋದರೆ ಅನೇಕ ಇತ್ತಂಡ ವಾದಕ್ಕೆ ಗುರಿಯಾಗಿ ಅಪಹಾಸ್ಯಕ್ಕೆ ಒಳಗಾಗುವುದು ಸತ್ಯ .ಲಾಂಛನಧಾರಿಗಳು ಬಸವ ಉದ್ಯಮಿಗಳು ಬಸವಣ್ಣನ ಭಾವ ಚಿತ್ರವನ್ನು ಇಟ್ಟು ಹಣ ಸುಲಿಗೆ ಮಾಡುವ ಸರಳ ಶ್ರಮವಿಲ್ಲದ ಪದ್ದತಿಯನ್ನು ಅಳವಡಿಸಿಕೊಡಿದ್ದಾರೆ .ಇವರನ್ನು ಹೊಗಳುತ್ತಾ ತಮ್ಮ ಗ್ರಂಥಗಳನ್ನು ಪ್ರಕಟಗೊಳಿಸಿಕೊಂಡು ವಾರ್ತೆ ಕೀರ್ತಿಯ ಪೀಡೆಗೆ ಒಳಗಾಗಿ ಸತ್ಯ ಗೊತ್ತಿದ್ದರೂ ಎದ್ದು ಹೊರಗೆ ಬರದೇ ಇಂತಹ ವ್ಯವಸ್ಥೆಯ ಜೊತೆಗೆ ರಾಜಿ ಮಾಡಿಕೊಂಡ ಮಾರಾಟಕ್ಕಿಟ್ಟ ಸಾಹಿತಿಗಳು ಅಧ್ಯಾಪಕರು ಸಂಶೋಧಕರು ಭಾಷಣಕಾರರು ಪ್ಯಾಕೇಟು ಪ್ರಿಯರು .

ಬಸವ ತತ್ವಗಳ ಮೇಲೆ ಪಂಚಪೀಠದ ಸೈದ್ಧಾಂತಿಕ ದಾಳಿ ,ಬಸವ ಪರಂಪರೆ ಎಂದು ಹೇಳಿಕೊಂಡು ವ್ಯವಹಾರ ಮಾಡುವ ನೂರಾರು ಕೋಟಿ ಆಸ್ತಿ ಹೊಂದಿರುವ ವಿರಕ್ತ ಪರಂಪರೆಯ ಅಣ್ಣ ಅಕ್ಕ ಸ್ವಾಮಿಗಳು ಬಸವ ತತ್ವವನ್ನು ಸಮಾಧಿ ಮಾಡುವ ಹುನ್ನಾರ ನಡೆಸಿದ್ದಾರೆ.ಇವರ ಮಧ್ಯೆ ಮೌನವಾದ ಬಸವ ಭಕ್ತರು .ಲಿಂಗಾಯತ ಧರ್ಮದ ಅಳಿವು ಉಳಿವಿನ ಪ್ರಶ್ನೆ ಈಗ ನಮ್ಮ ಮುಂದಿದೆ .ಇತ್ತೀಚಿಗೆ ಬಸವ ಪರಂಪರೆಯ ಉನ್ನತ ಮಠದ ಸ್ವಾಮಿಗಳು ಜಗದ್ಗುರುಗಳು ಬಸವಣ್ಣವರಿಗಿಂತ ಮೊದಲು ಜೇಡರ ದಾಸಿಮಯ್ಯನವರ ಕ್ರಾಂತಿ ಅಮೋಘವಾಗಿತ್ತು ಅದು ಮುಂದೆ ಬಸವಣ್ಣವರ ಅನುಭವ ಮಂಟಪಕ್ಕೆ ಮಾದರಿಯಾಯಿತು ಎಂದು ಹುಸಿ ಸುಳ್ಳು ಹೇಳಿ ನಾಡಿನ ಪ್ರತಿಷ್ಠಿತ ಪತ್ರಿಕೆಯಲ್ಲಿ ಪ್ರಕಟಗೊಳಿಸಿದ್ದಾರೆ ಯಾವೊಬ್ಬ ಮಠಾಧೀಶರು ಇದನ್ನು ಪ್ರಶ್ನಿಸಿಲ್ಲ .ಮುಂಬೈ ಬಸವ ಜಯಂತಿ ಕಾರ್ಯಕ್ರಮವೊಂದರಲ್ಲಿ ಸ್ವಾಮಿಗಳೊಬ್ಬರು ಭಾಗವಹಿಸಿ ಮಾತನಾಡಿ ಬಸವಣ್ಣ ಸಮಾನತೆಯ ಹರಿಕಾರ ಎಂದೆಲ್ಲಾ ಗುಣಗಾನ ಮಾಡಿ ಭಕ್ತರ ಮನೆಯಲ್ಲಿ ತಮಗೆ ವಿಶೇಷ ಬೆಳ್ಳಿಯ ತಾಟು ಲೋಟ ಚರಿಗೆ ಪೂಜಾ ಸಾಮಗ್ರಿಗಳು ವಿಶೇಷ ಪ್ರಸಾದದ ವ್ಯವಸ್ಥೆ . ಅಬ್ಬಬ್ಬಾ ಪಂಚ ಪೀಠದವರಿಗೆ ಇವರೇನೂ ಕಡಿಮೆ ಇಲ್ಲ ಎಂದೆನಿಸಿತು .ಜಂಗಮ ಶ್ರೇಷ್ಠತೆ ಜೇಷ್ಠತೆ ಹೋಗದ ಹೊರತು ಬಸವ ತತ್ವ ಬದುಕಲಾರದು .

ಬಸವ ಧರ್ಮದಲ್ಲಿ ದೇವರು ಸೃಷ್ಟಿಕರ್ತ ಪರಮಾತ್ಮ ಎಂಬ ಪದಗಳಿಗೆ ಅವಕಾಶವಿಲ್ಲ .ಪಂಚ ಮಹಾಭೂತಗಳಿಂದ ನಿರ್ಮಿತಗೊಂಡ ಈ ಕಾಯ ಶರೀರವು ಲಿಂಗಮಯವಾಗಿ ಜಂಗಮ ಚೈತನ್ಯವನ್ನು ಪಡೆದುಕೊಂಡು ವ್ಯಕ್ತಿಯೇ ದೇವರಾಗುವ ಸುಲಭ ಮಾರ್ಗವಾಗಿದೆ .ಅರಿವೇ ಗುರು ಆಚಾರವೇ ಲಿಂಗ ಅನುಭವವೇ ಜಂಗಮ ಪ್ರಸನ್ನತೆಯೇ ಪ್ರಸಾದ . ಎದೆಯ ಮೇಲೆ ಅರುಹಿನ ಕುರುಹಾದ ಲಿಂಗವಿರಲು .ಅರಿವಿನ ಅನುಸಂಧಾನವೇ ಯೋಗವಾಗಿರುವಾಗ ಪೂಜೆ ಪುನಸ್ಕಾರ ಎಲ್ಲಿಂದ ಹುಟ್ಟಿಕೊಂಡವು .ಬಸವ ಕಲ್ಯಾಣದಲ್ಲಿರುವ ಶರಣರ ಅರುಹಿನ ಮನೆಗಳಲ್ಲಿ ಈಗಲೂ ಕತ್ತಲಿದೆ ಸಮೆ ದೀಪ ಧೂಪ ಪತ್ರೆಗಳಿಂದ ಪೂಜೆ ಮಾಡುವ ಬಾಹ್ಯ ವ್ಯವಹಾರವು ಬಸವ ತತ್ವಕ್ಕೆ ಮಾಡುವ ದ್ರೋಹವಾಗಿದೆ .ಕಾರಣ ಬಸವ ಧರ್ಮವು ತನ್ನ ಮೂಲ ಸ್ವರೂಪದ ಆಶಯದಲ್ಲಿ ಪಸರಿಸಿ ವಿಶ್ವಕ್ಕೆ ಹರಡಲಿ. ಆಂತರಿಕ ಸ್ವಾತಂತ್ರ್ಯ ಮಾತು ಸೌಂದರ್ಯತೆಯನ್ನು ಹೆಚ್ಚಿಸಿ ಭಕ್ತನ ನಡೆ ನುಡಿಯಲಿ ಏಕತೆಯ ಶುಚಿತ್ವವನ್ನು ಕಾಣುವುದೇ ಶರಣ ಧರ್ಮ ಲಿಂಗಾಯತ ಧರ್ಮವಾಗಿದೆ . ಇಲ್ಲಿ ಸ್ವಾಮಿಗಳು ಲಾಂಛನಧಾರಿಗಳು ಭಕ್ತರಿಂದ ಕಾಲು ತೊಳೆಸಿಕೊಂಡು ಅದುವೇ ಪವಿತ್ರ ಪಾದೋದಕ ಎನ್ನುವುದು ದುರಂತದ ಸಂಗತಿಯಾಗಿದೆ .ಏಕೆ ಭಕ್ತರು ಸ್ವಾಮಿಗಳ ಅಕ್ಕನವರ ಕಾಲು ಮುಗಿಯಬೇಕು ? ಮಠಗಳ ಆಸ್ತಿ ವ್ಯವಹಾರಗಳ ಲೆಕ್ಕವನ್ನು ಯಾರು ಕೇಳುವರು?. ಮಠಗಳು ಆಶ್ರಮಗಳು ವಾಣಿಜ್ಯ ಮಳಿಗೆಗಳಾಗಿವೆ. ಇಂತಹ ಸಾಂಸ್ಥಿಕರಣಗೊಂಡ ವ್ಯವಸ್ಥೆಯೇ ಬಸವ ತತ್ವದ ಪ್ರಸಾರಕ್ಕೆ ಮಾರಕ

ಡಾ.ಶಶಿಕಾಂತ ರು ಪಟ್ಟಣ -ರಾಮದುರ್ಗ

About Mallikarjun

Check Also

ರೈತರ ಸಮಸ್ಯೆಗಳನ್ನು ಸಕಾಲದಲ್ಲಿಪರಿಹರಿಸಲು ರೈತಸಂಘಗಳುಪ್ರತಿಭಟನೆ

Farmers unions protest to solve the problems of farmers in time. ವರದಿ‌: ಬಂಗಾರಪ್ಪ .ಸಿ .ಹನೂರು: …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.