ಸ್ಮಾರ್ಟ್‌ ಸಿಟಿ ಅಭಿಯಾನದಡಿ ನಡೆದಿರುವ ಕಾಮಗಾರಿಗಳ ತನಿಖೆಗೆ ಸಚಿವ ಬೈರತಿ ಸುರೇಶ ಸೂಚನೆ:

Thousands of devotees witnessed the Rathotsava of Male Madappa which was held with great enthusiasm.

ಬೆಂಗಳೂರು:– 02 ಜನವರಿ 2025: ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿಯಲ್ಲಿ ರಾಜ್ಯದ 6 ಸ್ಮಾರ್ಟ್‌ ಸಿಟಿ (ಬೆಂಗಳೂರು ಹೊರತುಪಡಿಸಿ) ಯೋಜನೆಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಸಂಪೂರ್ಣ ತನಿಖೆಗೆ ನಡೆಸಿ ವರದಿ ನೀಡುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಶ್ರೀ ಬಿ. ಎಸ್.‌ ಸುರೇಶ (ಬೈರತಿ) ಸೂಚಿಸಿದ್ದಾರೆ.

ಸ್ಮಾರ್ಟ್‌ ಸಿಟಿ ಅಭಿಯಾನದಡಿ ರಾಜ್ಯ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಶಿವಮೊಗ್ಗ ಹಾಗೂ ತುಮಕೂರು ನಗರಗಳಲ್ಲಿ ನಡೆದಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಬೈರತಿ ಸುರೇಶ ರವರು ಇಂದು ವಿಧಾನಸೌಧದ ಕಚೇರಿಯಲ್ಲಿ ನಡೆಸಿದರು.

ಸ್ಮಾರ್ಟ್‌ ಸಿಟಿ ಅಭಿಯಾನ ಶೂರುವಾದಗಿನಿಂದ ಇಲ್ಲಿಯವರೆಗೂ ರಾಜ್ಯದ 7 ಸ್ಮಾರ್ಟ್‌ ಸಿಟಿಗಳಲ್ಲಿ ರೂ. 6415.51 ಕೋಟಿಗಳ ವೆಚ್ಚದ ಕಾಮಗಾರಿಗಳು ನಡೆದಿದ್ದು, ಪೂರ್ಣಗೊಂಡಿರುವ ಹಲವು ಕಾಮಗಾರಿಗಳು ಅಷ್ಟೊಂದು ತೃಪ್ತಿದಾಯಕವಾಗಿಲ್ಲವೆಂದು ತಿಳಿದು ಬಂದ ಕಾರಣ ಸಚಿವ ಬೈರತಿ ಸುರೇಶ ರವರು ಬೆಂಗಳೂರು ಹೊರತುಪಡಿಸಿ (ರೂ. 877.82 ಕೋಟಿ ರೂಪಾಯಿಗಳ ಕಾಮಗಾರಿ ಬೆಂಗಳೂರು ಸ್ಮಾರ್ಟ್‌ ಸಿಟಿಯಲ್ಲಿ ಪೂರ್ಣಗೊಂಡಿದ್ದು) ಇತರೆ 6 ಸ್ಮಾರ್ಟ್‌ ಸಿಟಿಗಳ ಯೋಜನೆಗಳ ಬಗ್ಗೆ ಸ್ವತಂತ್ರ ಸಂಸ್ಥೆ ಒಳಗೊಂಡಂತೆ ಸಮಿತಿ ರಚಿಸಿ ತನಿಖೆ ನಡೆಸಿ 3 ತಿಂಗಳ ಕಾಲಮಿತಿಯೊಳಗೆ ವರದಿಯನ್ನು ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರಿಗೆ ಸಚಿವ ಬೈರತಿ ಸುರೇಶ ರವರು ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ 50:50 ಅನುಪಾತದ ಅನುದಾನದಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದೆ. ನಡೆದಿರುವ ಕಾಮಗಾರಿಗಳಲ್ಲಿ ಬಹುತೇಕ ರಸ್ತೆ ನಿರ್ಮಾಣ, ಒಳಚರಂಡಿ, ಉದ್ಯಾನವನಗಳ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಗಳಿಗೆ ಅನುದಾನವನ್ನು ವೆಚ್ಚ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವ ಬೈರತಿ ಸುರೇಶ ರವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮಪಾಲು ಅನುದಾನ ಇದಾಗಿದ್ದು, ಇದನ್ನು ಹೆಚ್ಚಿನ ರೀತಿಯಲ್ಲಿ ಸ್ಮಾರ್ಟ್‌ ಶಾಲೆಗಳು, ಆಸ್ಪತ್ರೆ, ಗ್ರಂಥಾಲಯ, ಬಸ್‌ ನಿಲ್ದಾಣ ಸೇರಿದಂತೆ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿತ್ತು ಎಂದು ತಿಳಿಸಿದರು.

ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿಯಲ್ಲಿ ನಡೆದಿರುವ ಕಾಮಗಾರಿಗಳು ಸರ್ಕಾರದ ಆಸ್ತಿಗಳನ್ನು ವೃದ್ಧಿಸುವಂತೆ ಇರಬೇಕೆ ಹೊರತು ರಸ್ತೆ ನಿರ್ಮಾಣ, ಚರಂಡಿ ಹಾಗೂ ಇತರೆ ಕಾಮಗಾರಿಗಳಿಗೆ ಬಳಸಿರುವುದು ಸರಿಯಾದ ಮಾರ್ಗವಲ್ಲವೆಂದು 6 ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಸೂಚಿಸಿದರು.

ಪ್ರತಿ ಸ್ಮಾರ್ಟ್‌ ಸಿಟಿಗೂ ಅಂದಾಜು ರೂ. 990 ಕೋಟಿಗಳ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಶೈಕ್ಷಣಿಕ ಶೇ. 2 ರಷ್ಟು, ಇಂಧನ ಶೇ. 8 ರಷ್ಟು, ಆರೋಗ್ಯ ಶೇ. 2 ರಷ್ಟು, ಮಾಹಿತಿ ತಂತ್ರಜ್ಞಾನಕ್ಕೆ ಶೇ. 8 ರಷ್ಟು ಒಟ್ಟಾರೆಯಾಗಿ ಶೇ. 20 ರಷ್ಟು ಅನುದಾನವನ್ನು ಕೆರೆ ಮತ್ತು ಉದ್ಯಾನವನ ಶೇ. 9 ರಷ್ಟು, ಮಾರುಕಟ್ಟೆ ಶೇ. 5 ರಷ್ಟು, ರಸ್ತೆ ನಿರ್ಮಾಣ ಶೇ. 36 ರಷ್ಟು, ಕ್ರೀಡಾ ವಲಯಕ್ಕೆ ಶೇ. 5 ರಷ್ಟು, ಸಾರಿಗೆ ವ್ಯವಸ್ಥೆಗೆ ಶೇ. 8 ರಷ್ಟು, ಇತರೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಶೇ. 18 ರಷ್ಟು ಅನುದಾನ ಹಂಚಿಕೆಯಾಗಿದ್ದು, ಈ ವಲಯಗಳಲ್ಲಿ ನಡೆದಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಅವುಗಳಲ್ಲಿ ಕೆಲವು ಸಮರ್ಪಕವಾಗಿ ನಡೆದಿಲ್ಲ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರ ಗಮನಕ್ಕೆ ಬಂತು. ಈಗಾಗೀ ಒಟ್ಟಾರೆಯಾಗಿ ನಡೆದಿರುವ ಎಲ್ಲಾ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸ ಬೇಕಾಗುತ್ತದೆ ಎಂದು ಸಚಿವ ಬೈರತಿ ಸುರೇಶ ರವರು ಸಭೆಯಲ್ಲಿ ತಿಳಿಸಿದರು.

2025 ಮಾರ್ಚ್‌ ಅಂತ್ಯಕ್ಕೆ ಸ್ಮಾರ್ಟ್‌ ಸಿಟಿ ಅಭಿಯಾನ ಮುಗಿಯಲಿದ್ದು, ಬರಬೇಕಾಗಿರುವ ಉಳಿಕೆ ಮೊತ್ತ ಹಾಗೂ ಹಾಲಿ ಉಳಿದಿರುವ ಮೊತ್ತದಲ್ಲಿ ಆಧುನಿಕ ತಂತ್ರಜ್ಞಾನದ ಅಂತರ್‌ರಾಷ್ಟ್ರೀಯ ಮಟ್ಟದ ಸ್ಮಾರ್ಟ್‌ ಶಾಲೆಗಳ ನಿರ್ಮಾಣಕ್ಕೆ ವಿನೀಯೋಗಿಸ ಬೇಕು. ಇದರಿಂದಾಗಿ ನಮ್ಮ ಬಡ ಮಕ್ಕಳು ಸಹ ಕಲಿಕೆಯಲ್ಲಿ ಮುಂದುವರೆಯ ಬೇಕು. ಇದಕ್ಕಾಗಿ ಅತ್ಯಾಧುನಿಕ ಕಲಿಕ ಸಾಮಗ್ರಿಗಳು ಸ್ಮಾರ್ಟ್‌ ಶಾಲೆಗಳಲ್ಲಿ ಒಳಗೊಳ್ಳಬೇಕು ಎಂದು ಸಚಿವ ಬೈರತಿ ಸುರೇಶ ರವರು ಅಭಿಪ್ರಾಯಿಸಿದರು.

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಶಿವಮೊಗ್ಗ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳು ಅಸಮಾಧಾನವನ್ನು ವ್ಯಕ್ತಪಡಿಸಿ ನನಗೆ ನೇರವಾಗಿ ಹೇಳಿದ್ದಾರೆ ಎಂದು ಸಚಿವರು ಸಭೆಯಲ್ಲಿ ತಿಳಿಸುತ್ತಾ, ಮುಂದೆ ಈ ರೀತಿ ಆಗಬಾರದೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸ್ಮಾರ್ಟ್‌ ಸಿಟಿ ಅಭಿಯಾನದ ಅಡಿಯಲ್ಲಿ ರಾಜ್ಯದ 6 ಸ್ಮಾರ್ಟ್‌ ಸಿಟಿಗಳಲ್ಲಿ ಇಲ್ಲಿಯವರೆಗೂ ನಡೆದಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲು ಸಮಿತಿಯೊಂದನ್ನು ರಚಿಸಲು ಸಚಿವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸುತ್ತಾ, ತನಿಖಾ ಸಮಿತಿಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಅಭಿಯಂತರರು, ಲೋಕೋಪಯೋಗಿ ಇಲಾಖೆಯಿಂದ ಮುಖ್ಯ ಅಭಿಯಂತರ ದರ್ಜೆಯ ಒರ್ವ ಅಧಿಕಾರಿ ಹಾಗೂ ಆಯಾ ಸ್ಮಾರ್ಟ್‌ ಸಿಟಿ ವ್ಯಾಪ್ತಿಗಳಲ್ಲಿ ಬರುವ ವಿಶ್ವ ವಿದ್ಯಾನಿಲಯದ ತಾಂತ್ರಿಕ ಪರಿಣಿತರು ಮತ್ತು Indian Institute of Science ಸಂಸ್ಥೆಯಿಂದ ಒರ್ವ ಪರಿಣಿತಿ ತಜ್ಞರನ್ನು ಸಮಿತಿ ಒಳಗೊಳ್ಳಬೇಕು, ಅಗತ್ಯ ತನಿಖೆ ನಡೆಸಿ ಸಮಗ್ರವಾದ ವರದಿಯನ್ನು ಮೂರು ತಿಂಗಳ ಕಾಲಮಿತಿಯೊಳಗೆ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಚಿವರಾದ ಬಿ. ಎಸ್.‌ ಸುರೇಶ (ಬೈರತಿ) ಸೂಚಿಸಿದರು.

ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್‌, ಮುಖ್ಯ ಅಭಿಯಂತರ ನಂದೀಶ್‌, 6 ಸ್ಮಾರ್ಟ್‌ ಸಿಟಿಗಳ ವ್ಯವಸ್ಥಾಪಕ ನಿರ್ದೇಶಕರುಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಶ್ರೀರಾಮನಗರದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ರಥ ಸ್ವಾಗತಿಸಿದ ಜನತೆ

ಗಂಗಾವತಿ: ಜನೇವರಿ-೮ ರಂದು ನಡೆಯಲಿರುವ ಸಮಾರೋಪ ಸಮಾರಂಭದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಿರ್ಮಲ ತುಂಗಭದ್ರ ಅಭಿಯಾನದ ರಥ ಜ.೦೧ ರಂದು ಶ್ರೀರಾಮನಗರದಲ್ಲಿ ಚಾಲನೆಗೊಂಡಿತು. ಚಾಲನೆಯನ್ನು ಎಸ್.ಪಿ.ಎಸ್ ಬ್ಯಾಂಕ್ ಅಧ್ಯಕ್ಷ ಸಿ.ಹೆಚ್.ವಿ ರಾಮಕೃಷ್ಣ, ಮಾಜಿ ತಾಲೂಕ ಪಂಚಾಯತ ಆದ್ಯಕ್ಷ ಮಹಮ್ಮದ ರಫಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಣೇಶ್ರರಾವ್ ಮತ್ತು ರೆಡ್ಡಿ ವೀರರಾಜು ನೆರವೇರಿಸಿದರು.
ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕರಾದ ಬಾಲಕೃಷ್ಣ ನಾಯ್ಡು, ಡಾ|| ಶಿವಕುಮಾರ ಮಾಲಿಪಾಟೀಲ್, ಲೋಕೇಶ್ವರಪ್ಪ, ರಾಘವೇಂದ್ರ ತೂನ, ಮಂಜುನಾಥ್ ಗುಡ್ಲಾನೂರ ಜನಜಾಗೃತಿ, ಜಲಜಾಗೃತಿ ಮತ್ತು ಸಮಾರೋಪ ಕಾರ್ಯಕ್ಕೆ ಆಗಮಿಸಿ ಈ ಸ್ವಚ್ಛತಾ ಆಂದೋಲನಕ್ಕೆ ಕೈ ಜೋಡಿಸಿ ಎಂದು ಕರೆ ನೀಡಿದರು.
ಶ್ರೀ ರಾಮನಗರದಲ್ಲಿ ಪ್ರತಿ ಓಣಿಯಲ್ಲಿ ಜಾಗೃತಿಯ ರಥ ಸಂಚರಿಸಿ ಜಾಗೃತಿ ಮೂಡಿಸಿತು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಂತಪ್ಪ, ರಾಮಕೃಷ್ಣರಾಜು, ಜಿ. ರಾಮಕೃಷ್ಣ, ಕೆ. ವಿಜಯಭಾಸ್ಕರ್ ರೆಡ್ಡಿ, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಸರ್ವ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ನಾಗೇಶ ಕುರಡಿ, ಸಿಬ್ಬಂದಿ ಗಿರಿಧರ ಜೂರಟಗಿ, ಮುಖಂಡರಾದ ಶ್ರೀನಿವಾಸ ಬಿ., ರಮೇಶ ಕುಲಕರ್ಣಿ, ಸುಮಂಗಲಾ, ಪರಮೇಶಪ್ಪ, ತಾಯಪ್ಪ, ಯಲ್ಲಪ್ಪ, ಪರಮೇಶ್ವರಪ್ಪ, ಮಾರೆಪ್ಪ ಮುಂತಾದವರು ಇದ್ದರು.

ಬಿಜೆಪಿಯವರು ನಾಲಿಗೆಯ ಮೇಲೆ ಹಿಡಿತವಿಟ್ಟುಮಾತನಾಡುವುದನ್ನುಕಲಿಯಬೇಕಿದೆ : ಸಂಗಮೇಶ ಗುತ್ತಿ,,,

BJP needs to learn to hold its tongue: Sangamesh Gutti

ವರದಿ : ಪಂಚಯ್ಯ ಹಿರೇಮಠ.
ಕೊಪ್ಪಳ : ಬಿಜೆಪಿಯವರುನಾಲಿಗೆಗೆಎಲುಬಿಲ್ಲಾವೆಂದು ಬಾಯಿಗೆ ಬಂದಂತೆ ಮಾತನಾಡುವುದನ್ನು ಬೀಡಬೇಕು ಎಂದು ಕುಕನೂರು ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹೇಳಿದರು.

ಅವರು ಕುಕನೂರು ಪಟ್ಟಣದ ಎಪಿಎಂಸಿಯ ಗೊಡೌನ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೊನ್ನೆ ಡಿ.29ರಂದು ನಡೆದ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ರಾಜಕೀಯ ಪ್ರೇರಿತ ಚುನಾವಣೆಯಲ್ಲದಿದ್ದರೂ ಇದರಲ್ಲಿ ಬಿಜೆಪಿ ಪಕ್ಷದವರು ಗೊಂದಲ ಸೃಷ್ಠಿಸಿ ಮತ ಎಣಿಕೆಯಾಗದಂತೆ ಮಾಡಿದರು ಎಂದು ಆರೋಪಿಸಿದ ಅವರು, ಎರಡು ಬೂತ್ ನ ಮತಗಳನ್ನು ಎಣಿಕೆ ಮಾಡಲು ಸೂಚಿಸಿದರೇ ತಗಾದೇ ತೆಗೆದು ಪ್ರತಿಭಟನೆಗೆ ನಿಂತ ಬಿಜೆಪಿಗರು ಪ್ರತಿಭಟನೆ ನೆಪದಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಅಭಿವೃದ್ದಿ ಸಹಿಸದೇ ಬಾಯಿಗೆ ಬಂದಂತೆ ಮಾತನಾಡಿದರು. ಮೊದಲು ಮಾತನಾಡುವ ಸಂಸ್ಕೃತಿಯನ್ನು ಮಾಜಿ ಸಚಿವರು ಹಾಗೂ ಅವರ ಹಿಂಬಾಲಕರು ಕಲಿಯಬೇಕು ಎಂದು ಎಚ್ಚರಿಸಿದರು.

ಹುಬ್ಬಳ್ಳಿ ಈರಣ್ಣ ಎನ್ನುವ ಬಿಜೆಪಿ ಹಿರಿಯ ವಕ್ತಾರ ಎಲ್ಲಿ, ಯಾರಿಗೆ, ಹೇಗೆ ಮಾತನಾಡಬೇಕು ಎನ್ನುವುದನ್ನು ಕಲಿಯಬೇಕು, ತಾವು ತಮ್ಮ ಹಿರಿತನಕ್ಕೆ ತಕ್ಕಂತೆ ಸೌಜನ್ಯ ರೀತಿಯಲ್ಲಿ ಮಾತನಾಡದೇ ಸಭೆಯಲ್ಲಿ ಅವಾಚ್ಯ ಪದಗಳನ್ನು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಮಗೂ ಮಾತನಾಡಲು ಬರುತ್ತದೆ ನಾವು ಅಷ್ಟು ಕೀಳ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲಾ, ನಮಗೆ ನಮ್ಮ ಮನೆಯವರು ಹಾಗೂ ಪಕ್ಷದ ಹಿರಿಯರು ಮಾತಿನ ಸಂಸ್ಕೃತಿಯನ್ನು ಕಲಿಸಿದ್ದಾರೆ ಎಂದರು.

ನೀವು ಸಹ ಶಾಸಕ ಸಚಿವ ಸ್ಥಾನದಲ್ಲಿ ಮೂರು ಹುದ್ದೆಗಳನ್ನು ನಿಭಾಯಿಸಿ ಆಡಳಿತ ನಡೆಸಿದ್ದೀರಿ ನೀವು ಅಧಿಕಾರದಲ್ಲಿದ್ದಾಗ ತಾಲೂಕಿಗೆ ಏನು ಕಿತ್ತು ಗುಡ್ಡೆ ಹಾಕಿದ್ದಿರಿ, ತಾಲೂಕಿನಲ್ಲಿ ಏನು ಅಭಿವೃದ್ದಿ ಮಾಡಿದ್ದಿರಿ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹಾಲಪ್ಪ ಆಚಾರ್ ಗೆ ಸಂಗಮೆಶ ಗುತ್ತಿ ತಿರುಗೇಟು ನೀಡಿದರು.

ನಮ್ಮ ಶಾಸಕ ಬಸವರಾಜ ರಾಯರಡ್ಡಿ ಆಡಳಿತಾವಧಿಯಲ್ಲಿ ಮಾಡಿದ ಕೆಲಸಗಳನ್ನೇ ನಿಮಗೆ ಉಳಿಸಿ ಬೆಳಸಲಾಗಲಿಲ್ಲಾ ನಮ್ಮ ಶಾಸಕರು ಚಿಲ್ಲರೇ ಕೆಲಸ ಮಾಡವಷ್ಟು ಹೀನ ಪ್ರವೃತ್ತಿಯವರಲ್ಲಾ ಅವರು ತಾಲೂಕಿನಲ್ಲಿ ಮಾಡುತ್ತಿರುವ ಅಭಿವೃದ್ದಿ ನಿಮಗೆ ಸಹನೆ ಇಲ್ಲಾ ಅದಕ್ಕೆ ಮನ ಬಂದಂತೆ ನೀವು ನಿಮ್ಮ ಹಿಂಬಾಲಕರು ಭ್ರಮೆಗೊಂಡು ಮಾತನಾಡುತ್ತಿದ್ದಾರೆ ಎಂದರು.

ಶಾಸಕ ಬಸವರಾಜ ರಾಯರಡ್ಡಿ ನಲವತ್ತು ವರ್ಷ ಆಡಳಿತಾವಧಿಯಲ್ಲಿ ತಾಲೂಕಿಗೆ ಏನು ಕೊಡುಗೆ ನೀಡಿದ್ದಾರೆ, ನಮ್ಮ ತಾಲೂಕು ಯಾರಿಂದ ಅಭಿವೃದ್ದಿಯಾಗಿದೆ ಎನ್ನುವುದು ನಮ್ಮ ತಾಲೂಕಿನ ಮತದಾರರಷ್ಟೇ ಅಲ್ಲಾ ರಾಜ್ಯದ ಜನ ಹೇಳುತ್ತಿದ್ದಾರೆ. ಯಾರೋ ಏನೋ ಎಂದರು ಅಂದರೆ ನಮ್ಮದೇನು ಹಾಳಾಗುವುದಿಲ್ಲಾ, ಆನೆ ಹೋಗ್ತಿರುತ್ತೆ ಶ್ವಾನ ಬೋಗಳ್ತಿರುತ್ತೆ ಅಂತ ಆನೆ ತಲೆ ಕೆಡಸಿಕೊಳ್ಳೊದಿಲ್ಲಾ ಎಂದು ವ್ಯಂಗವಾಗಿ ತಿರುಗೇಟು ಟಾಂಗ್ ನೀಡಿದರು.

ಎಪಿಎಂಸಿ ಆವರಣದಲ್ಲಿ ಭಜನೆ ಮಾಡಿದವರು ಮುಂದೆಯು ಭಜನೆಯನ್ನೇ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿ ಅವರಿಗೆ ಕಾನೂನು, ಸಂವಿಧಾನ ಎಂದರೇ ಏನು ಎನ್ನುವುದು ಗೊತ್ತಿಲ್ಲಾ ಮತ್ತು ಇವರ ಬಿಜೆಪಿ ಹಿರಿಯ ಹಾಗೂ ಕೇಂದ್ರ ಮಂತ್ರಿ ಅಮಿತ್ ಶಾ ಅವರು ಕೂಡಾ ನಾಲಿಗೆ ಹಿಡಿತವಿಲ್ಲದವರು ಅವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಅವರು ಕೂಡಾ ಕ್ಷಮೆಯಾಚಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ನಂತರ ಸಿದ್ದಯ್ಯ ಕಳ್ಳಿಮಠ ಮಾತನಾಡಿ ಕೃಷಿ ಪತ್ತಿನ ಚುನಾವಣೆಯಲ್ಲಿ ಗೆದ್ದರೇ ನಮಗೇನು ಇಂದ್ರನ ಪದವಿ ದೊರೆಯುತ್ತದೆ ಎಂದು ನಾವು ಚುನಾವಣೆಗೆ ಸ್ಪರ್ಧಿಸಿಲ್ಲಾ, ಅಲ್ಲಿರುವ ಭ್ರಷ್ಟಾಚಾರವನ್ನು ಬಹಿರಂಗ ಪಡಿಸಲು ಚುನಾವಣೆಗೆ ಸ್ಪರ್ಧಿಸಿದ್ದೇವೆ, 1700 ಸದಸ್ಯರ ಮತದಾನ ಹಕ್ಕು ಇದ್ದದ್ದನ್ನು ಕೇವಲ 300 ಸದಸ್ಯರ ಮತದಾನ ಹಕ್ಕನ್ನು ಮಾಡಿಕೊಂಡವರು ತಮಗೆ ಬೇಕಾದವರಿಗೆ ಮಾತ್ರ ಮತದಾನ ನೀಡುತ್ತಿದ್ದರಿಂದ ನಾವು ಸಹ ಕಾನೂನು ಚೌಕಟ್ಟಿನಲ್ಲಿ ರೈತಪರ ಕಾಳಜಿಯಿಂದ ಸ್ಪರ್ಧೆಗೆ ಇಳಿದಿದ್ದೇವು.

ಆದರೆ ಯಲಬುರ್ಗಾ ಬಿಜೆಪಿ ವಕ್ತಾರ ಈರಣ್ಣ ಹುಬ್ಬಳ್ಳಿ ಶಾಸಕರಿಗೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಬಾಯಿಗೆ ಬಂದಂತೆ ಅವಾಚ್ಯ ಪದಗಳನ್ನಾಡಿದ್ದು ಅವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಅವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿ ಪಟ್ಟಣದ ಪೋಲಿಸ್ ಇಲಾಖೆಗೆ ತೆರಳಿ ಪಿಎಸ್ಐ ಟಿ. ಗುರುರಾಜ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುಧೀರ ಕೊರ್ಲಳ್ಳಿ, ಗಗನ್ ನೋಟಗಾರ, ಮುತ್ತು ವಾಲ್ಮೀಕಿ, ಯಮನೂರಪ್ಪ ಕಟ್ಟಿಮನಿ, ರಫಿ ಮಂಡಲಗಿರಿ, ಹಂಪಯ್ಯ ಹಿರೇಮಠ, ದಾನರಡ್ಡಿ, ರಾಮಣ್ಣ ಬಂಕದಮನಿ, ವೀರಯ್ಯ ತೋಂಟದಾರ್ಯಮಠ, ಕೆರಿಬಸಪ್ಪ ನಿಡಗುಂದಿ, ಶಿವಾನಂದ ಬಣಕಾರ, ಪ್ರಶಾಂತ ಆರಬೆರಳಿನ, ಅಶೋಕ ತೋಟದ, ದಸ್ತಗಿರಸಾಬ ರಾಜೂರ, ರಫಿ ಹಿರೇಹಾಳ, ನಿಂಗಪ್ಪ ಗೊರ್ಲೆಕೊಪ್ಪ ಇನ್ನಿತರರು ಇದ್ದರು.

ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

Students should take care of their health at home

ಗಂಗಾವತಿ,ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಾಗ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗಳಿಗಾಗಿ ಕಳುಹಿಸಿಕೊಡಬೇಕು ಎಂದು ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ರವರು ತಿಳಿಸಿದರು. ಅವರು ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕಾರ್ಯಾಲಯ, ಕೊಪ್ಪಳ, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ, ಉಪ ವಿಭಾಗ ಆಸ್ಪತ್ರೆ ಗಂಗಾವತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಗಾಪುರ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ 100 ದಿನಗಳ ಕ್ಷಯ ಮುಕ್ತ ಕೊಪ್ಪಳ ಅಭಿಯಾನ ದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಷ್ಟ್ರದಾದ್ಯಂತ ನಡೆಯುತ್ತಿರುವ 100 ದಿನಗಳ ಕ್ಷಯ ಮುಕ್ತ ಅಭಯಾನದ ಅಡಿಯಲ್ಲಿ ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ, ಕ್ಷಯ ರೋಗದ ಕುರಿತು ಸವಿಸ್ತಾರವಾಗಿ ತಮ್ಮ ವಿಚಾರಗಳನ್ನು ಮಂಡಿಸಿದರು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕ್ಷಯ ಘಟಕ ಗಂಗಾವತಿಯ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶ್ರೀ ಹುಸೇನ್ ಭಾಷಾ, ಕ್ಷಯ ರೋಗ ಆರೋಗ್ಯ ಪರಿವೀಕ್ಷಕ ಶ್ರೀ ಮಲ್ಲಿಕಾರ್ಜುನ್ ಇವರುಗಳು ಕ್ಷಯ ರೋಗದ ತೀವ್ರತೆ, ರೋಗ ಹರಡುವ ರೀತಿ, ಪರೀಕ್ಷಾ ವಿಧಾನಗಳು ಚಿಕಿತ್ಸಾ ಪದ್ಧತಿ ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮಲ್ಲಿಕಾ, ದ್ವಿತೀಯ ಬಹುಮಾನ ಗೋವಿಂದರಾಜು ಹಾಗೂ ತೃತೀಯ ಬಹುಮಾನ ಕಾವೇರಿ ಪಡೆದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ವೆಂಕಟೇಶ್ ಲಕ್ಷ್ಮಿ ಪ್ರಸನ್ನ ಸುನಿತಾ ಸೌಭಾಗ್ಯ ನಾಗವೇಣಿ ಹಾಗೂ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರಾದ ಶ್ರೀ ಮೈಲಾರಪ್ಪ ಶ್ರೀಮತಿ ಖುತಿಜ ಶ್ರೀ ಚಂದ್ರಶೇಖರ್ ಶ್ರೀ ರಮೇಶ್ ಬಂಡಿ ಶ್ರೀಮತಿ ಅಕ್ಕಮಹಾದೇವಿ ಕುಮಾರಿ ಕಾವ್ಯ ಶ್ರೀಮತಿ ಲಕ್ಷ್ಮಿ ಇದ್ದರು.

ದಮ್ಮೂರಿನಲ್ಲಿ ೩೬೯ ನೇ ಶಿವಾನುಭವ ಗೋಷ್ಠಿ

369th Shivanubhava Concert at Dammur




ಯಲಬುರ್ಗಾ : ಸಜ್ಜನರ ಸಂಗದಿಂದ ಹೆಜ್ಜೆನು ಸವಿಯಬಹುದು ,ಒಳ್ಳೆಯ ಆಚಾರ, ವಿಚಾರ ನಡೆ ನುಡಿಯಿಂದ ಪ್ರೀತಿ ಪ್ರೇಮದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯ ಎಂದು ಸ.ಪ್ರೌ.ಶಾಲೇಯ ಮು.ಗುರು ಎಫ್.ಎಂ.ಕಳ್ಳಿ ಅವರು ಮಾತನಾಡಿ ಸಜ್ಜನರ ಸಂಗದೋಡನೆ ಬೆರೆತಾಗ ಸಂಸ್ಕಾರ ಸಂಸ್ಕೃತಿಯನ್ನು ಪಡೆಯುವದಕ್ಕೆ ಸಾಧ್ಯವಾಗುತ್ತದೆ ಎಂದರು. ಮನುಷ್ಯ ಸಂಗಜೀವಿ ಅದರಂತೆ ಎಲ್ಲಾ ಪ್ರಾಣಿಗಳು ಸಹಿತ ಸಂಗ ಜೀವಿಗಳೆ, ಅದರಲ್ಲಿ ಮನುಷ್ಯ ಬುದ್ದಿಜೀವಿ ಈ ಮನುಷ್ಯ ಸಂಗ ಪರಿಹಾರವನ್ನು ಬಿಟ್ಟು ಸಮಾಜದಲ್ಲಿ ಬದುಕಲಾರ ಸುಖ ದುಃಖಗಳನ್ನು ಹಂಚಿಕೊಳ್ಳುವದಕ್ಕೆ ವ್ಯಕ್ತಿಗಳು ಬೇಕು ,ಸ್ನೇಹ ಪ್ರೀತಿಗಾಗಿ ಉತ್ತಮ ಸಂಗ ಬೇಕು ,ಉತ್ತಮರ ಸಂಗ ಹಾಲು ಜೇನು ಇದ್ದಂತೆ , ವ್ಯಕ್ತಿಗಳಿಗೆ ಉತ್ತಮ ಶಿಕ್ಷಣ ಕೊಟ್ಟಾಗ ಅವರು ಸಂಸ್ಕಾರ ಸಂಸ್ಕೃತಿಯನ್ನು ಜಿವನದಲ್ಲಿ ಅಳವಡಿಸಿಕೊಂಡು ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಸಹಕಾರ ನಿಡುವ ದಯ ಗುಣಗಳನ್ನು ಪಡೆದುಕೊಂಡು ಪರೋಪಕಾರಿ ಕಾರ್ಯಗಳನ್ನು ಮಾಡುವದಕ್ಕೆ ಸಾದ್ಯ ಎಂದುಮರಕಟ್ಟಿಯ ಶರಣ ಅಂಬರೇಷಪ್ಪ ಬಳ್ಳಾರಿ ಅವರು ಯಲಬುರ್ಗಾ ತಾಲೂಕಿನ ದಮ್ಮೂರ ಗ್ರಾಮದ ಶ್ರೀ ಭೀಮಾಂಬಿಕಾ ದೇವಿ ದೇವಸ್ಥಾನದಲ್ಲಿ ಚತುರ್ದಶಿ ಅಂಗವಾಗಿ ಹಮ್ಮಿಕೊಂಡಿರುವ ೩೬೯ ನೇ ಶಿವಾನುಭವಗೋಷ್ಠಿಯಲ್ಲಿ ಮಾತನಾಡಿದರು. ಚಿಂತನ ಗೋಷ್ಠಿಯಲ್ಲಿ , ಶ್ರೀ ಭೀಮಾಂಬಿಕಾ ದೇವಿ ಶಿವಾನುಭವ ಸೇವಾ ಸಮಿತಿ ಅಧ್ಯಕ್ಷ ಶರಣಬಸಪ್ಪ, ದಾನಕೈ ಅವರು ಅಧ್ಯಕ್ಷತೆ ವಹಿಸಿ ಸಜ್ಜನರ ಸಂಗದಿಂದ ಬದುಕು ಬಾಳು ಬಂಗಾರವಾಗುತ್ತದೆ ಹೂವಿನ ಜೋತೆ ದಾರ ಸಂಗ ಮಾಡಿದಾಗ ದೇವರ ಪೂಜೆಗೆ, ಗುರುವಿನ ಪಾದಕ್ಕೆ ಅರ್ಪಿತವಾಗುತ್ತದೆ ಇದರಿಂದ ಉತ್ತಮರಾಗಲು ಸಾದ್ಯ ಎಂದರು. ಧರ್ಮರಮಠದ ಹನುಮಂತಪ್ಪಜ್ಜ ಹಾಗೂ ಶರಣಯ್ಯ ಹಿರೇಮಠ , ಸಾನಿಧ್ಯ ವಹಿಸಿದ್ದರು. ಈ ವೇಳೆ ಸ.ಮಾ.ಹಿ.ಪ್ರಾ.ಶಾಲೆಯ ಮು.ಗುರು ಕನಕಪ್ಪ ಕಂಬಳಿ, ಕಲಾವಿದರ ಒಕ್ಕೂಟ ಸಂಘದ ಅಧ್ಯಕ್ಷ ಕಳಕಪ್ಪ ತೊಂಡಿಹಾಳ,ವಕೀಲರಾದ ಪ್ರಕಾಶ ಉಪ್ಪಾರ,ಮಲ್ಲನಗೌಡ ಪಾಟಲ, ಮುಖಂಡರಾದ ಹನುಮಗೌಡ್ರ ಬಳ್ಳಾರಿ ,ಹನುಮಂತಪ್ಪ ಹುಣಶ್ಯಾಳ,ಮಲ್ಲನಗೌಡ ನಿಡಗುಂದಿ,ಯಮನೂರಪ್ಪ ಚಿಕ್ಕಗೌಡ್ರ,ಭೀಮಣ್ಣ ಹವಳಿ,ಶೇಖರಗೌಡ ದ್ಯಾಮನಗೌಡ್ರ,ದುರಗೇಶ ಹರಿಜನ ,ಡಾ.ಪ್ರಕಾಶ ರಾವಣಕಿ, ನೀಲಕಂಠಪ್ಪ ರೋಡ್ಡರ, ಕಳಕಪ್ಪ ಹಡಪದ, ಯಮನೂರಪ್ಪ ಹಳ್ಳಿಕೇರಿ ಸಂಗೀತ ಸೇವೆ ನಿಡಿದರು. ಮರಕಟ್ಟ ಹಾಗು ದಮ್ಮೂರ ಸೇರಿದಂತೆ ಇತರ ಭಕ್ತರು ಇದ್ದರು.

ನೂತನ ವರ್ಷವನ್ನು ವಿನೂತನವಾಗಿ ಆಚರಿಸಿದ ಬೇವೂರ ಪೋಲಿಸ್ ಇಲಾಖೆ,,

Bevoor police department celebrated the new year in an innovative way.



ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಿಷೇಶ ವಾರ್ತೆ ಕೊಪ್ಪಳ.
ಕೊಪ್ಪಳ : ಪೋಲಿಸ್ ಎಂದರೇ ಭಯ, ಪೋಲಿಸ್ ಎಂದರೇ ಶಿಸ್ತಿನ ಸಿಫಾಯಿ, ಪೋಲಿಸ್ ಎಂದರೇ ಕಡಕ್ ಮಾತು ಅಷ್ಟೇ ಅಲ್ಲಾ ಪೋಲಿಸ್ ಖಾಕಿ ಸಮವಸ್ತ್ರವೆಂದರೇ ಭಯ ಮೂಡಿಸುವವರು ಎಂದು ತಿಳಿದ ಸಮಾಜದ ಮದ್ಯೆ ಇವರು ಪ್ರತಿನಿತ್ಯ ಬದುಕು ಸಾಗಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಹೌದು, ಪೋಲಿಸ್ ನವರನ್ನು ಕಂಡರೇ ಮಾತನಾಡುವವರು ಸುಮ್ಮನಾಗಿ ಬಿಡುತ್ತಾರೆ. ಯಾಕೆಂದರೇ ಅವರ ಕಡಕ್ ಮುಖ, ಗಂಭೀರ ನೋಟ, ಮೈಮೇಲೆ ಖಾಕಿ ಬಟ್ಟೆ ಇವೆಲ್ಲವನ್ನು ಕಂಡಾಕ್ಷಣ ಮಾತೇ ಗಫ್ ಚುಪ್ ಯಾಕೇ ಬೇಕಪ ಏನರ ಮಾತಾಡಕ ಹೋಗಿ ಏನಾರ ಆದ್ರ ಏನ ಫಜೀತಿ ಅಂತ ಮಾತೇ ನಿಲ್ಲಿಸಿದ ಪ್ರಸಂಗಗಳು ಹಲವಾರು.

ಇವರ ಮುಂದ ಒಂದ ತಪ್ಪು ಮಾತಾಡಿದ್ರು ಕಂಬಿ ಎಣಸಬಕಾಗತ್ತ ಅನ್ನುವ ಭಯ ಸಾರ್ವಜನಿಕ ವಲಯದಲ್ಲಿದೆ.

ಇದೆಲ್ಲವಕ್ಕೂ ತದ್ವಿರುದ್ದ ಎನ್ನುವಂತೆ ಹಲವಾರು ಠಾಣೆಗಳಲ್ಲಿ ಹಲವಾರು ಅಧಿಕಾರಿಗಳಿದ್ದರು, ಅವರ ಸಮವಸ್ತ್ರಕ್ಕೆ ತಕ್ಕಂತೆ ಅವರು ಖಡಕ್ ಆಗಿರುವುದು ಸಾಮಾನ್ಯ ಅವರು ಸಹ ಮಾನವೀಯತೆ ಬದುಕು ನಡೆಸುತ್ತಾ ಹಗಲಿರುಳು ಸಮಾಜದ ಒಳಿತಿಗೆ ಶ್ರಮವಹಿಸುತ್ತಾರೆ ಎನ್ನುವುದು ಗಮನಿಸಲೇಬೇಕು.

ಯಲಬುರ್ಗಾ ತಾಲೂಕಿನ ಬೇವೂರನ ಠಾಣೆಯಲ್ಲಿ ವಿಷೇಶ ವ್ಯಕ್ತಿತ್ವದ ವ್ಯಕ್ತಿಯೊಬ್ಬರಿದ್ದಾರೆ ಅವರ ಬಗ್ಗೆ ಹೇಳಲೇ ಬೇಕು ಅವರೇ ಬೇವೂರ ಪೋಲಿಸ್ ಠಾಣೆಯ ಪಿಎಸ್ಐ ಪ್ರಶಾಂತ ಅವರು ಹೆಸರಿಗೆ ತಕ್ಕಂತೆ ಪ್ರಶಾಂತ ಸ್ವಭಾವದವರು ಆದರೆ. ಮೈಮೇಲೆ ಖಾಕಿ ತೊಟ್ಟರೇ ಮಾತ್ರ ಇಲಾಖೆಯ ಖಡಕ್ ಪೋಲಿಸ್ ಅಧಿಕಾರಿ, ಇಂತಹ ಅಧಿಕಾರಿಯೊಬ್ಬರೂ ಈ ನೂತನ ವರ್ಷಾಚರಣೆ ವಿನೂತನವಾಗಿ ಆಚರಿಸಿಕೊಳ್ಳಲು ತಾವಷ್ಟೇ ಅಲ್ಲದೇ ತಮ್ಮ ಬೇವೂರ ಪೋಲಿಸ್ ಠಾಣಾ ಸಿಬ್ಬಂದಿಗೂ ಒಂದೇ ತರನಾದ ಕಲರ್ ಫುಲ್ ಸಫಾರಿ ಬಟ್ಟೆ ಹಾಕಿಸಿ ನೂತನ ವರ್ಷವನ್ನು ವಿನೂತನವಾಗಿ ಆಚರಿಸಿದರು.

ಈ ಒಂದು ದಿನವಾದರು ತಮ್ಮೆಲ್ಲ ಸಿಬ್ಬಂದಿಗಳು ಅಧಿಕಾರದ ಬಿಂಕ, ಬಿಗುಮಾನ ಬಿಟ್ಟು ಸೌಹಾರ್ದಯುತವಾಗಿ ಒಂದೇ ಬಟ್ಟೆಯನ್ನುಟ್ಟು ನೂತನ ವರ್ಷವನ್ನು ಆಚರಿಸಬೇಕು, ಪ್ರತಿನಿತ್ಯ ನಮ್ಮ ಬಗ್ಗೆ ಇರುವ ಗೌರವದ ಜೊತೆಗೆ ಸ್ನೇಹಮಯವಾಗಿ, ಸಂತೋಷದಿಂದ ಈ ಹೊಸ ವರ್ಷ ಆಚರಿಸೋಣವೆಂದು ಸಂಭ್ರಮದಿಂದ ನೂತನ ವರ್ಷ ಆಚರಿಸಿ ಸಂಭ್ರಮಿಸಿದರು.

ಅಮರಶಿಲ್ಪಿಜಕಣಾಚಾರಿಸಂಸ್ಕಾರಣಾದಿನಾಚರಣೆ :ಜಿಲ್ಲಾಡಳಿತದಿಂದ ಪುಷ್ಪ ನಮನ ಸಲ್ಲಿಕೆ

Amarashilpijakanachari Funeral Day Celebration: Floral Tribute by District Administration

ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕೊಪ್ಪಳ : ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಕಾರಣಾ ದಿನಾಚರಣೆ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ವಿಶ್ವ ವಿಖ್ಯಾತ ಅಮರ ಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ಜನವರಿ 1 ರಂದು ಪುಷ್ಪ ನಮನ ಸಲ್ಲಿಸಲಾಯಿತು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಕಾರಣಾ ದಿನಾಚರಣೆಯನ್ನು ಜಿಲ್ಲಾಡಳಿತ ಕಛೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರು ವಿಶ್ವ ವಿಖ್ಯಾತ ಅಮರ ಶಿಲ್ಪಿ ಜಕಣಾಚಾರಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಚುನಾವಣಾ ಶಾಖೆಯ ತಹಶೀಲ್ದಾರ ರವಿ ವಸ್ತçದ್, ವಿಶ್ವಕರ್ಮ ಸಮಾಜದ ಮುಖಂಡರಾದ ದೇವೆಂದ್ರಪ್ಪ ಬಡಿಗೇರ, ಈಶಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ದೇವಪ್ಪ ಬಡಿಗೇರ, ಕಲ್ಲಪ್ಪ ಬಡಿಗೇರ, ನಿಂಗಪ್ಪ ಬಡಿಗೇರ, ನಿಂಗಪ್ಪ ಬಡಿಗೇರ ಹಾಗೂ ಮತ್ತಿತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಗಂಗಾವತಿ ನಗರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತಯ,! ವಿದ್ಯುತ್ ಯಾವುದೇ ಕಾರ್ಯ ಮಾಡದಂತೆ ಜೆಸ್ಕಾಂ ಸೂಚನೆ,,

Power outage in Gangavati city and surrounding villages! JESCOM instructs not to do any electrical work.

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಗಂಗಾವತಿ : ಜನೇವರಿ 02ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಕೈಗೊಳ್ಳುತ್ತಿರುವ ಪ್ರಯುಕ್ತ 110/11ಕೆವಿ ವಿದ್ಯುತ್ ವಿತರಣಾ ಉಪ-ಕೇಂದ್ರ ಗಂಗಾವತಿಯಿಂದ ಸರಬರಾಜಾಗುವ ಎಲ್ಲಾ ಫೀಡರ್ ನ ವಿದ್ಯುತ್‌ನಲ್ಲಿ ವ್ಯತ್ಯಯವಾಗುವುದರಿಂದ ಗಂಗಾವತಿ ನಗರ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಆದ್ದರಿಂದ ಸಾರ್ವಜನಿಕರು ಮತ್ತು ರೈತರು ಸಹಕರಿಸಬೇಕೆಂದು ಹಾಗೂ ಈ ದಿನದಂದು ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕಾರ್ಯ ಪೂರ್ವಾನುಮತಿ ಇಲ್ಲದೆ ಮಾಡಬಾರದು ಒಂದು ವೇಳೆ ವಿದ್ಯುತ್ ಅಪಘಾತ ಸಂಭವಿಸಿದ್ದಲ್ಲಿ ಜೆಸ್ಕಾಂ ಕಂಪನಿ ಜವಬ್ದಾರಿಯಾಗಿರುವುದಿಲ್ಲಾ ಎಂದು ಈ ಮೂಲಕ ತಿಳಿಸಲಾಗಿದೆ.

ಹೆದ್ದಾರಿಯಲ್ಲಿ ಪಥ ಬಿಟ್ಟು ಚಲಿಸುವ ವಾಹನಗಳನ್ನು ನಿಯಂತ್ರಿಸಲು ಆಗ್ರಹ.

Demand to control the vehicles that leave the lane on the highway.

ಗಂಗಾವತಿ,ದೇಶದ ಬಹುತೇಕ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರಿ ಗಾತ್ರದ ವಾಹನಗಳು ಪಥ ಬಿಟ್ಟು ಸಂಚರಿಸುತ್ತಿರುವುದರಿಂದ ಅಫ಼ಘಾತಗಳು ಸಂಭವಿಸುತ್ತಿವೆ.ಇತ್ತೀಚಿಗೆ ಭಾರಿ ವಾಹನವೊಂದು ರಸ್ತೆಯ ಬಲ ಭಾಗದಲ್ಲಿ ಸಂಚರಿಸಿದ್ದರಿಂದ ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿ ವೋಲ್ವಾ ಕಾರ್ ಒಂದರ ಮೇಲೆ ಲಾರಿ ಮಗುಚಿಬಿದ್ದು ಆರು ಜನ ಮೃತರಾಗಿದ್ದು ವಿಷಾದಕರ ಸಂಗತಿಯಾಗಿದೆ.

ಲಾರಿ ಮತ್ತು ಕಾರು ಬೇರೆ ಬೇರೆ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಈ ಅಫ಼ಘಾತ ಸಂಭವಿಸಲು ಲಾರಿಯು ರಸ್ತೆಯ ಎಡ ಭಾಗದಲ್ಲಿ ಸಂಚರಿಸುವ ಬದಲು, ಬಲ ಭಾಗದಲ್ಲಿ ಸಂಚರಿಸಿದ್ದೇ ಕಾರಣ.
ಲಾರಿ,ಬಸ್,ಟ್ರ್ಯಾಕ್ಟರ್,ಎತ್ತಿನ ಬಂಡಿ ಮುಂತಾದವುಗಳು ಹಿಂಬಾದಲ್ಲಿ ಯಾವುದೇ ರೇಡಿಯಮ್ ಸ್ಟಿಕ್ಕರ್ ಗಳನ್ನು ಅಳವಡಿಸಿ ಕೊಂಡಿರುವುದಿಲ್ಲ.ಬ್ರೆಕ್ ಲೈಟ್ ಹಾಗೂ ಇಂಡಿಕೇಟರ್ ಸಿಗ್ನಲ್ ಗಳು ಕೆಲಸ ನಿರ್ವಹಿಸುತ್ತಿರುವುದಿಲ್ಲ.ಎಲ್ಲಾ ರಸ್ತೆಗಳಲ್ಲಿಯೂ ಸಂಚರಿಸುವ ಉಸುಕು, ಬಿಂಚಿ ಕಲ್ಲುಗಳು, ಹೊತ್ತ ಲಾರಿ ಮತ್ತು ಟ್ರ್ಯಾಕ್ಟರ್ ಗಳು ಟ್ರಾಲಿಯ ಮೇಲೆ ಯಾವುದೇ ಹೊದಿಕೆಯನ್ನು ಹೊದ್ದಿರುವುದಿಲ್ಲ.ಇದರಿಂದ ಸಾಕಷ್ಟು ಸಣ್ಣ-ಪುಟ್ಟ ವಾಹನಗಳ ಮುಂದಿನ ಗ್ಲಾಸ್ ಗಳು ಒಡೆದ ಉದಾಹರಣೆಗಳು ಸಾಕಷ್ಟಿವೆ.

ಕಬ್ಬಿಣದ ರಾಡ್ ಹೊತ್ತ ಲಾರಿ,ಟ್ರ್ಯಾಕ್ಟರ್ ಗಳು ಮುಂಜಾಗ್ರತೆಯ ನಿಯಮಗಳನ್ನು ಪಾಲಿಸದೇ ಸಂಚರಿಸುತ್ತಿವೆ,ಎತ್ತರದ ರಸ್ತೆಯಲ್ಲಿ ಇಂತಹ ವಾಹನಗಳು ಸಂಚರಿಸುವಾಗ ಹಿಂಬದಿಯ ವಾಹನಗಳ ಮೇಲೆ ಕಬ್ಬಿಣದ ವಸ್ತುಗಳು ನೇರವಾಗಿ ಹಿಂದೆ ಸಂಚರಿಸುವ ವಾಹನಗಳ ಮೇಲೆ ಬಿದ್ದು ,ಸಾವು-ನೋವುಗಳು ಸಂಭವಿಸಿದ ಘಟನೆಗಳು ಸಹ ವರದಿಯಾಗಿವೆ.(ಹಳೇ ಟಯರ್ ಅಥವಾ ರಬ್ಬರ್ ಪಟ್ಟಿಗಳನ್ನು ಕಟ್ಟಿಕೊಂಡು ಸಂಚರಿಸುವುದು ವಾಡಿಕೆ)

ಬೆಂಗಳೂರಿನ ರಾಜಾಜಿನಗರದ ಪ್ಲೈ ಓವರ್ ಮೇಲೆ ದಿನಾಂಕ:30-12-2024 ರಂದು ಸಾಯಂಕಾಲ 7 ಗಂಟೆಯ ಸಮಯದಲ್ಲಿ ಯಾವುದೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸದೆ,ಕಬ್ಬಿಣದ ರಾಡ್ ಗಳನ್ನು ಹೊತ್ತ ಲಾರಿ ಸಂಚರಿಸುತ್ತಿರುವುದು ಕಂಡಿತು.ಇದೇ ರೀತಿ ಉಸುಕು,ಬೆಣಚಿ ಕಲ್ಲು ಹೊತ್ತ ಹಲವಾರು ಲಾರಿಗಳು, ಮೇಲೆ ಹೊದಿಕೆ ಇಲ್ಲದೆ ಸಂಚರಿಸುತ್ತಿರುವುದು ಕಂಡು ಬಂತು.ರಸ್ತೆಯಲ್ಲಿನ ಸಿ.ಸಿ.ಕ್ಯಾಮೆರಾಗಳ ಮೂಲಕ ಇವುಗಳನ್ನು ಖಚಿತ ಪಡಿಸಿಕೊಳ್ಳಬಹುದು.

ಹೈವೇ ಪೆಟ್ರೊಲಿಂಗ್ ವಾಹನಗಳು ಮತ್ತು ಆರ್.ಟಿ.ಓ ಅಧಿಕಾರಿಗಳು ಇವೆಲ್ಲವುಗಳನ್ನು ಕಂಡು ಕಾಣದಂತೆ ಕಾರ್ಯ ನಿರ್ವಹಿಸುತ್ತಿರುವುದು ವಿಷಾದಕರ.
ಅವೈಜ್ಞಾನಿಕವಾಗಿ ಬಾಡಿ ಕಟ್ಟಿಸಿ ಕೊಂಡು ಸಂಚರಿಸುವ ಭಾರಿ ಗಾತ್ರದ ವಾಹನಗಳನ್ನು ತಡೆಯಬೇಕು. ಬೆಂಗಳೂರಿನ ನೆಲಮಂಗಲ ಹೈವೇ ದಲ್ಲಿ ಇಂತಹ ಅವೈಜ್ಞಾನಿಕ ಬಾಡಿ ಕಟ್ಟಿಕೊಂಡ ಲಾರಿಯಿಂದಲೇ ಮೇಲೆ ತಿಳಿಸಿದ ಅಫ಼ಘಾತ ಸಂಭವಿಸಿರುವುದು ಇಲ್ಲಿ ಉಲ್ಲೇಖಾರ್ಹ.

ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರಗಳು,ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಹೈವೇ ಪೆಟ್ರೊಲಿಂಗ್ ಹಾಗೂ ಪೋಲಿಸ್ ಅಧಿಕಾರಿಗಳು ಇಂತಹ ವಾಹನಗಳ ಓಡಾಟ ತಡೆಯುವುದು ಅಗತ್ಯ.
ಈ ನಿಟ್ಟಿನಲ್ಲಿ ಮೇಲ್ಕಾಣಿಸಿದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ,ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ ನಿಕಟ ಪೂರ್ವ ನಿರ್ದೇಶಕ ಅಶೋಸ್ವಾಮಿ ಹೇರೂರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಇಮೇಲ್ ಮೂಲಕ ಪತ್ರ ಬರೆದು ಒತ್ತಾಯಿಸಿದ್ದಾರೆ.

ಗಂಗಾವತಿಯಲ್ಲಿ ಯಶಸ್ವಿ೪ನೇವರ್ಷದಗರ್ಭಧಾರಣೆ ಸಮಸ್ಯೆ ಮತ್ತು ಬಂಜೆತನ ನಿವಾರಣೆಯ ಉಚಿತ ಶಿಬಿರ

Successful 4th year free camp on pregnancy problem and infertility treatment at Gangavati

ಗಂಗಾವತಿ: ಜೀನಿಯ ಫರ್ಟಿಲಿಟಿ ಸೆಂಟರ್ ಹಾಗೂ ಯಶೋಧ ಆಸ್ಪತ್ರೆ ಗಂಗಾವತಿ ಸಹಯೋಗದಲ್ಲಿ ಜನವರಿ-೩ ಶುಕ್ರವಾರ ಬೆಳಿಗ್ಗೆ ೧೦:೦೦ ಗಂಟೆಯಿAದ ಮದ್ಯಾಹ್ನ ೪:೦೦ ರವರೆಗೆ ಗರ್ಭಧಾರಣೆ ಸಮಸ್ಯೆ ಮತ್ತು ಬಂಜೆತನ ನಿವಾರಣೆ ಬಗ್ಗೆ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಖ್ಯಾತ ವೈದ್ಯರಾದ ಡಾ|| ಸತೀಶ ರಾಯಕರ್ ಪ್ರಕಟಣೆಯಲ್ಲಿ ತಿಳಿಸಿದರು.
ಹೊಸವರ್ಷದ ಪ್ರಯುಕ್ತ ಈ ಉಚಿತ ಶಿಬಿರದಲ್ಲಿ ಮಕ್ಕಳಿಲ್ಲದ ೭೫ ದಂಪತಿಗಳಿಗೆ ಉಚಿತ ಬಂಜೆತನ ನಿವಾರಣಾ ಶಿಬಿರ, ಉಚಿತ ಸಮಾಲೋಚನೆ, ಉಚಿತ ಸ್ಕಾö್ಯನ್, ಉಚಿತ ವೀರ್ಯಾಣು ಪರೀಕ್ಷೆ, ಉಚಿತ ತಪಾಸಣೆ, ಉಚಿತ ಸಲಹೆಗಳನ್ನು ನೀಡಲಾಗುತ್ತದೆ.
ಈ ಶಿಬಿರದಲ್ಲಿ ಡಾ|| ದಿವ್ಯಶ್ರೀ ಪಿ. ಯೆಸ್ ಹಾಗೂ ಡಾ|| ಪ್ರಭಾ ರಾಯಕರ್ ತಪಾಸಣೆ ಮಾಡಲಿದ್ದಾರೆ,
ಮಕ್ಕಳಾಗುವ ಅವಕಾಶವಿದ್ದರೂ ಸಹ ಸೂಕ್ತ ಸಲಹೆ, ಸೂಚನೆ, ಚಿಕಿತ್ಸೆಗಳಿಲ್ಲದೆ ಸಂತಾನಕ್ಕಾಗಿ ಹಂಬಲಿಸುತ್ತಿರುವ ದಂಪತಿಗಳಿಗಾಗಿಯೇ ಈ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ದಂಪತಿಗಳ ಬಂಜೆತನ ಪರಿಹಾರಕ್ಕಾಗಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ಕೋರಿದ್ದಾರೆ.
ಈ ಉಚಿತ ಶಿಬಿರದ ನೋಂದಣಿಗಾಗಿ ಮೊಬೈಲ್ ಸಂಖ್ಯೆ ೮೯೭೦೪೯೦೧೦೮ ಸಂಪರ್ಕಿಸಲು ತಿಳಿಸಲಾಗಿದೆ.