Breaking News

ಶಿಕ್ಷಣದಿಂದ ಜೀವನ ಶಿಕ್ಷಣದಿಂದ ಜೀವನ ಬದಲಾವಣೆ ಸಾಧ್ಯ: ಡಾ. ಜಯದೇವಿ ಗಾಯಕವಾಡ ಸಾಧ್ಯ: ಡಾ. ಜಯದೇವಿ ಗಾಯಕವಾಡ

IMG 20240530 WA0214 300x225

ಬಸವಕಲ್ಯಾಣ: ಬುದ್ಧನ ಶಾಂತಿ ಮತ್ತು ಅಹಿಂಸೆ, ಬಸವಣ್ಣನವರ ಸಮಾನತೆ,ಅಂಬೇಡ್ಕರ್ ಅವರ ಸ್ವಾಭಿಮಾನ ಮತ್ತು ಶಿಕ್ಷಣ ಈ ಮೂರು ಅಂಶಗಳನ್ನು ಬುದ್ಧ ಬಸವ ಅಂಬೇಡ್ಕರ್ ಅವರ ತತ್ತ್ವ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಜ ಜೀವನದಲ್ಲಿ ಶಿಕ್ಷಣವನ್ನು ಪಡೆದಾಗ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಅಭಿಪ್ರಾಯಪಟ್ಟರು. ಸರ್ವೋದಯ ಕಾಲೋನಿಯಲ್ಲಿ ಸಿದ್ದಾರ್ಥ ಯುಥ್ ಕ್ಲಬ್ ಮತ್ತು ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ ಹಾಗೂ ಎಸ್. ಎಸ್. ಎಲ್. ಸಿ ಮತ್ತು ಪಿ.ಯು.ಸಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು. ಭಾರತ ದೇಶದಲ್ಲಿ ವರ್ಣ ವ್ಯವಸ್ಥೆಯನ್ನು ಜಾತಿ ವ್ಯವಸ್ಥೆಯನ್ನು ವರ್ಗ ವ್ಯವಸ್ಥೆಯನ್ನು ಮೀರಿ ಸಾಮಾಜಿಕ ಸುಧಾರಣೆಯನ್ನು ತಂದ ಈ ಮಹಾತ್ಮರ ಜೀವನ ಸಾಧನೆ ಅವರ ತತ್ವ ಸಿದ್ಧಾಂತಗಳು ಅನುಕರಣೀಯ ಎಂದು ನುಡಿದರು.

ಜಾಹೀರಾತು

ನಗರ ಸಭೆ ಎಇಇ ಮನೋಜಕುಮಾರ ಕಾಂಬಳೆ,ನಾಗನಾಥ ವಾಡೇಕರ್,ಕಲ್ಯಾಣರಾವ್ ರಾಮಬಾಣ,ಸಂಜು ಲಾಡೆ ,ಯುವ ನಾಯಕ ಸುರೇಶ ಮೊರೆ ಉಪಸ್ಥಿತರಿದ್ದರು. ಮನೋಹರ ಹೊಳ್ಕರ್ ಸ್ವಾಗತಿಸಿದರು. ಈಶ್ವರ ಹೆಬ್ಬಾಳ್ಕರ ಪ್ರಾಸ್ತಾ ವಿಕ ಮಾತನಾಡಿದರು.ಸಂಜೀವಕುಮಾರ ನಡುಕರ ನಿರೂಪಿಸಿದರು.ಶ್ರೀಮತಿ ಸುರೇಖಾ ವಂದಿಸಿದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.