34,86,965 collected in Anjanadridevalaya’s offering Hundi
ಗಂಗಾವತಿ: ತಾಲೂಕಿನ ಆನೇಗುಂದಿ ಸಮೀಪವಿರುವ ಅಂಜನಾದ್ರಿ ದೇವಾಲಯದ ಕಾಣಿಕೆ ಹುಂಡಿ ಭರ್ತಿಯಾಗಿದ್ದು, ಬುಧವಾರ ತಾಲೂಕು ಆಡಳಿತದ ಅಧಿಕಾರಿಗಳು ಹುಂಡಿ ಎಣಿಕೆ ಮಾಡಿದ್ದು ಒಟ್ಟು 34,86,965 ರೂ ಸಂಗ್ರಹವಾಗಿದೆ.
ಜ.5 ರಿಂದ ಫೆ.21 ರ ವರೆಗಿನ 46 ದಿನದ ಹುಂಡಿ ಲೆಕ್ಕ ಮಾಡಲಾಗಿದೆ.ಇದರಲ್ಲಿ 2 ವಿದೇಶಿ ನೋಟು ಮತ್ತು 9 ವಿದೇಶಿ ನಾಣ್ಯ ಹುಂಡಿಯಲ್ಲಿ ಸಂಗ್ರಹವಾಗಿವೆ.ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ್ ಮಹಾಂತಗೌಡ ಪಾಟೀಲ್, ಶಿರಸ್ತೇದಾರಾದ ರವಿಕುಮಾರ್
ನಾಯಕವಾಡಿ ಅನಂತ ಜೋಶಿ ಮೈಬೂಬ ಅಲಿ, ಕೃಷ್ಣವೇಣಿ, ಕಂದಾಯ ನಿರೀಕ್ಷಕರಾದ ಮಂಜುನಾಥ ಹಿರೇಮಠ್ , ಶ್ರೀಕಂಠ, ಗುರುರಾಜ ಅನ್ನಪೂರ್ಣ ಪ್ರದಸ ಮಹ್ಮದ್ ರಫೀಕ್ , ಸುಧಾ, ಶ್ರಿರಾಮ ಜೋಷಿ ಗಾಯತ್ರಿ ಕವಿತಾ ಸೈಯ್ಯದ್ ಮುರ್ತುಜಾ ಸೌಭಾಗ್ಯ, ಕವಿತಾ ಕೆ ದ್ವಿ.ದ.ಸ, ಮಂಜುನಾಥ ದಮ್ಮಾಡಿ ಅಸ್ಲಾಂ ಪಟೇಲ್, ಮಹಾಲಕ್ಷ್ಮೀ ಪಿ, ದೇವಾಲಯ ಸಮಿತಿಯ ಅಧಿಕಾರಿಗಳು, ಪೊಲೀಸ್, ಬ್ಯಾಂಕ್ ಅಧಿಕಾರಿಗಳಿದ್ದರು.