ಮನೆ ಮುಂದೆಮೂತ್ರವಿಸರ್ಜನೆ ಮಾಡಿದನೆನ್ನಲಾದ ಜಮೀರ್ ಸೇರಿ ಇತರ ರನ್ನುಬಂಧಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಪರಣ್ಣಮುನವಳ್ಳಿ ನೇತೃತ್ವದಲ್ಲಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

Protest led by former MLA Munavalli in front of the police station demanding the arrest of Jameer and others for urinating in front of the house





ಮನೆ ಮುಂದೆಮೂತ್ರವಿಸರ್ಜನೆ ಮಾಡಿದನೆನ್ನಲಾದ ಜಮೀರ್ ಸೇರಿ ಇತರರನ್ನು
ಬಂಧಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ಪರಣ್ಣಮುನವಳ್ಳಿ ನೇತೃತ್ವದಲ್ಲಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆನಡೆಸಿದರು.

ಜಾಹೀರಾತು

ನ್ಯಾಯವಾದಿಮನೆಯ ಮುಂದೆ ಮೂತ್ರವಿಸರ್ಜನೆ ,ಪ್ರಶ್ನಿಸಿದ್ದಕ್ಕೆ ನ್ಯಾಯವಾದಿ ಹಾಗೂ , ಪತ್ನಿಯ ಮೇಲೆ ಹಲ್ಲೆ

ಮೂತ್ರ ವಿಸರ್ಜನೆ ಮಾಡಿ ರದ್ದಾಂತಕ್ಕೆ ಕಾರಣನಾದ ಜಮೀರ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತಿದ್ದಾರೆ.



ಗಂಗಾವತಿ: ಮನೆಯ ಮುಂದೆ ಮೂತ್ರ ಮಾಡಿದ ವಿಷಯಕ್ಕೆ ಸಂಬಂಧಪಟ್ಟಂತೆ ಜಮೀರ್ ಹಾಗೂ ಐವತ್ತು ಹೆಚ್ಚು ಜನರು ಸೇರಿ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ಮಾಡಿದ ಘಟನೆ ಬಸವೇಶ್ವರ ಕಾಲೋನಿ(ಬಂಬೂ ಬಜಾರ್)ಯಲ್ಲಿ ಮಂಗಳವಾರ ಸಂಜೆ ಜರುಗಿದ್ದು ಹಲ್ಲೆ ಮಾಡಿದವರು ಕೂಡಲೇ ಬಂಧಿಸುವಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ,ಮಾಜಿ ಸಂಸದ ಶಿವರಾಮ ಗೌಡ,
ನೇತೃತ್ವದಲ್ಲಿ ನ್ಯಾಯವಾದಿ ಪ್ರಭಾಕರ್ ಆಪ್ತರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಗಂಗಾವತಿಯಲ್ಲಿ ಇಂಥ ಘಟನೆಗಳು ಪದೇಪದೇ ನಡೆಯುತ್ತಿದ್ದು ಪೊಲೀಸ್ ವೈಫಲ್ಯ ಕಾರಣವಾಗಿದೆ. ಕೆಲ ವ್ಯಕ್ತಿಗಳ ಕುಮ್ಮಕ್ಕಿನಿಂದ ನಗರದಲ್ಲಿ ಪದೇ ಪದೇ ಹಲ್ಲೆ, ದೌರ್ಜನ್ಯ, ಗೂಂಡಾಗಿರಿಯಂತಹ ಕೃತ್ಯಗಳು ನಡೆಯುತ್ತಿವೆ. ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಬೇಕೆಂದರು.
ಡಿಎಸ್ಪಿ ಜೆ.ಎಸ್.ನ್ಯಾಮಗೌಡ ಮಾತನಾಡಿ, ದೌರ್ಜನ್ಯ ಗುಂಡಾಗಿರಿ ಹಲ್ಲೆ ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಯಾರನ್ನು ಬಿಡುವ ಪ್ರಶ್ನೆ ಇಲ್ಲ ಅವರನ್ನು ಕೂಡಲೇ ಬಂಧಿಸಿ ಶಿಕ್ಷಿಸಲಾಗುತ್ತದೆ. ಎಲ್ಲರೂ ಸಹಕಾರ ನೀಡುವ ಮೂಲಕ ಗಂಗಾವತಿಯಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕು. ಈಗಾಗಲೇ ಗಂಗಾವತಿ ನಗರದಾದ್ಯಂತ ಸಿಸಿ ಕ್ಯಾಮರಗಳನ್ನು ಅಳವಡಿಸಿ ಕಣ್ಗಾವಲು ಇಡಲಾಗಿದೆ ಅವರ ಹಿಂದೆ ಇರುವವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ಹೇಳಿದರು.


ವಕೀಲರ ಸಂಘದ ಅಧ್ಯಕ್ಷರು,ಕಾರ್ಯದರ್ಶಿ,ಪದಾಧಿಕಾರಿಗಳು ಬಿಜೆಪಿ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿದ್ದರು.
ಚಿಕಿತ್ಸೆ: ಮೂತ್ರ ವಿಸರ್ಜನೆ ಘಟನೆಯಲ್ಲಿ ಅಸ್ವಸ್ಥಗೊಂಡ ನ್ಯಾಯವಾದಿ ಎಚ್.ಪ್ರಭಾಕರ್ ಹಾಗೂ ಅವರ ಪತ್ನಿ ಅನಸೂಯಾ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Total Views: 0
Share This Article