
ಅನಧಿಕೃತ ರೆಸಾರ್ಟ್ ತೆರವುಗೊಳಿಸಿ ಹಾಗೂ ಆಮಿಷಗೆ ಮಣಿದು ರೆಸಾರ್ಟ್ ನಡೆಸಲು ಅವಕಾಶ ಕೊಟ್ಟ ಅಧಿಕಾರಿಗಳ ಯುರುದ್ದ ಕ್ರಮ ಕೈಗೊಳುವಂತೆ ಮ್ಯಾಗಳಮನಿ ಒತ್ತಾಯ
Magalamani demands action against officials who gave in to the lure and allowed the resort to be cleared of unauthorized resorts

ಗಂಗಾವತಿ :-28–ಗಂಗಾವ ತಿ ತಾಲ್ಲೂಕಿನ ಆನೆಗುಂದಿ ಭಾಗದ ಪ್ರದೇಶದಲ್ಲಿ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಬೇಕು ಹಾಗೂ ಅವುಗಳು ಯಾವಾಗ ನಿರ್ಮಾಣಗೊಂಡಿವೆ ಅಲ್ಲಿಂದ ಇಲ್ಲಿಯವರೆಗೆ ಕಾರ್ಯ ನಿರ್ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ಭಾಗವು ಐತಿಹಾಸಿಕ ಪ್ರದೇಶವಾಗಿರುವದರಿಂದ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರಿದೆ. ವಿದೇಶಿಗರು ಆಗಮಿಸುತ್ತಿದ್ದು ಅವರಿಗೆ ವಾಸ್ತವ್ಯ ಮಾಡುವ ನೆಪದಲ್ಲಿ ಸರಕಾರದ ಪರವಾನಿಗೆ ಇಲ್ಲದೆ ಫಲವತ್ತಾದ ಕೃಷಿ ಭೂಮಿಯಲ್ಲಿ ಹೋಮ್ ಸ್ಟೇ ಎಂಬ ಹೆಸರಿನಿಂದ ಕೃಷಿ ಭೂಮಿ ನಾಶ ಪಡಿಸಿರುವದಲ್ಲದೆ ಮಧ್ಯ, ಗಾಂಜಾ, ಅಫಿಮು ದಂದೆಯಿಂದ ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಆನೆಗುಂದಿ ಹಾಗೂ ಅಂಜನಾದ್ರಿಗೆ ಕಳಂಕ ತರುವ ಕೆಲಸ ನಡೆಸಿದ್ದಾರೆ.ಇಂತಹ ರೆಸಾರ್ಟ್ ಗಳು ಪ್ರಾರಂಭ ಮಾಡುವಾಗ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದರೋ? ಅಥವಾ ಹಣ ಪಡೆದುಕೊಂಡು ಮೌನ ವಹಿಸಿದ್ದರೋ ? ಎನ್ನುವದು ಯಕ್ಷ ಪ್ರಶ್ನೆ ಯಾಗಿದೆ. ಪ್ರಾಧಿಕಾರದ ಅಧಿಕಾರಿಗಳು, ತಾಲೂಕು ಆಡಳಿತ, ಗ್ರಾಮ ಪಂಚಾಯತ್ ಅಧಿಕಾರಿಗಳು ಅಥವಾ ಬೇರೆ ಯಾವ ಅಧಿಕಾರಿಗಳ ವ್ಯಾಪ್ತಿಗೆ ಸಂಬಂಧ ಪಡುತ್ತದೆಯೋ ಅಂತಹ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಬೇಕು.ಆಗ ಸುಮ್ಮನಿದ್ದು ಮಾಧ್ಯಮ ದಲ್ಲಿ ವರದಿ ಬಂದ ನಂತರ, ಸಂಘಟನೆಗಳ ಒತ್ತಾಯಕ್ಕೆ ತೆರವುಗೊಳಿಸುವ ನಾಟಕ ವಾಡಿ ಪುನಃ ಮೌನ ವಹಿಸುವ ಅಧಿಕಾರಿಗಳ ಲೋಪವು ಕಾರಣವಾಗಿದೆ.ಅವರ ಮೇಲೆ ಕ್ರಮ ಜರುಗಿಸವುದರ ಜೊತೆಗೆ ಅನಧಿಕೃತ ರೆಸಾರ್ಟ್ ಗಳನ್ನು ತೆರವುಗೊಳಿಸಬೇಕು. ವಿದೇಶಿಗರ ರಕ್ಷಣೆ ಹಾಗೂ ಅನುಕೂಲಕ್ಕಾಗಿ ಸರ್ಕಾರವೇ ಹೋಮ್ ಸ್ಟೇ ಅಥವಾ ವಿದೇಶಿಗರ ಯಾತ್ರಾ ನಿವಾಸ ನಿರ್ಮಿಸುವದರಿಂದ ಅಲ್ಲಿ ಮಧ್ಯ, ಗಾಂಜಾ, ಅಫಿಮಿನOತಹ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತೆ ಆಗುತ್ತೆದೆ ಮತ್ತು ನಮ್ಮ ಸಂಸ್ಕೃತಿಗೆ ಆದ್ಯತೆ ನೀಡಿದಂತೆಯಾಗುತ್ತದೆ.ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕೆಂದು ಮ್ಯಾಗಳಮನಿ ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಬಸವರಾಜ್ ನಾಯಕ,ದುರ್ಗೇಶ್ ಹೊಸಳ್ಳಿ, ರಾಮಣ್ಣ ರುದ್ರಾಕ್ಷಿ, ಮಂಜುನಾಥ್ ಚನ್ನಾದಾಸರ, ಬೋಗೇಶ್ ಆನೆಗುಂದಿ, ಪಂಪಾಪತಿ ಕುರಿ, ಅರವಿಂದ್ ಯೋಗಿ, ಮೇಘರಾಜ್, ಗಣೇಶ್,ಹನುಮಂತಪ್ಪ,ರವಿಕುಮಾರ್ ಮತ್ತಿತರರು ಇದ್ದರು.




