
ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ನಡೆಯೋದಿಲ್ಲ : ಮಹಿಳೆಯರ ಆಕ್ರೋಶ
Today's governments are not trying to push our children into ignorance: Women's outrage

ಕೊಪ್ಪಳ:ಬ್ರಿಟಿಷರು ನಮ್ಮ ದೇಶದ ಜನರನ್ನ ಅಜ್ಞಾನದಲ್ಲಿರಿಸಿ ದಬ್ಬಾಳಿಕೆಯಿಂದ ಆಳ್ವಿಕೆ ಮಾಡಿದಂತೆ, ಕೆಪಿಎಸ್ ಮಾಗ್ನೆಟ್ ಶಾಲೆ ತೆರದು ನಮ್ಮ ಶಾಲೆಯನ್ನು ಮುಚ್ಚಿ ಬ್ರಿಟಿಷರಂತೆ ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ಈಗ ನಡೆಯೋದಿಲ್ಲ ನಾವೆಲ್ಲ ಎಚ್ಚರವಾಗಿದ್ದೇವೆ. – ಕುಣಿಕೇರಿ ಶಾಲೆಯನ್ನು ಮುಚ್ಚುವುದನ್ನ ವಿರೋಧಿಸಿ ಊರಿನ ಮಹಿಳೆಯ ಆಕ್ರೋಶ
ಗುರುವಾರ ಸಂಜೆ ಕೆಪಿಎಸ್ ಮಾಗ್ನೆಟ್ ಹೆಸರಲ್ಲಿ ಕೊಪ್ಪಳ ತಾಲ್ಲೂಕಿನ ಕುಣಿಕೇರಿ ಗ್ರಾಮದ ಸರಕಾರಿ ಶಾಲೆಯನ್ನು ಮುಚ್ಚುವುದನ್ನ ಖಂಡಿಸಿ AIDSO ಮತ್ತು ಕುಣಿಕೇರಿಯ ಸಾರ್ವಜನಿಕ ಶಿಕ್ಷಣ ಸಮಿತಿ ನೇತೃತ್ವದಲ್ಲಿ ಮಾರುತೇಶ್ವರ ಗುಡಿ ಹತ್ತಿರ ಊರಿನ ಸಾರ್ವಜನಿಕರ ಪ್ರತಿಭಟನಾ ಸಭೆ ನಡೆಸಿ ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ AIDYO ಯುವಜನ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ ಕೊಪ್ಪಳ ಇಂದು ಭೀಕರ ಪರಿಸ್ಥಿಯಲ್ಲಿದೆ. ಒಂದ್ ಕಡೆ ಬೇಡದೆ ಇರುವ ಮಾಲಿನ್ಯ ಕಾರಕ ಕಾರ್ಖಾನೆಗಳನ್ನು ತೊಲಗಿಸುವ ಹೋರಾಟ ನಡೆಯುತ್ತಿದೆ. ಇಂತಹ ಬಿಕ್ಕಟ್ಟಿನಲ್ಲಿ ರಾಜ್ಯ ಸರಕಾರ ತಂದಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ನಮ್ಮ ಮಾನ್ಯ ಶಾಸಕರು ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆಯ ಕಾಮಗಾರಿ ನಡೆಸುತ್ತಿದ್ದಾರೆ. ಕೊಪ್ಪಳದಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಿ ಸುತ್ತಲು ಬರುವ ಅನೇಕ ಶಾಲೆಗಳನ್ನು ಮುಚ್ಚುವ ಈ ಬಡವರ ವಿರೋಧಿ ಯೋಜನೆಯನ್ನು ವಿರೋಧಿಸಿ ಕೊಪ್ಪಳದ ಜನರಾದ ನಾವು ಒಗ್ಗಟ್ಟಿನಿಂದ ಈ ಹೋರಾಟವನ್ನು ಬೆಳೆಸುವ ಅವಶ್ಯಕತೆಯಿದೆ ಎಂದರು.
ಜಾಗತೀಕರಣ ಉದಾರೀಕರಣ ಖಾಸಗೀಕರಣದ ನೀತಿಗಳ ಅನುಷ್ಠಾನವೇ ಈ ಕೆಪಿಎಸ್ ಮ್ಯಾಗ್ನೆಟ್ ADB ಬ್ಯಾಂಕ್ ನಿಂದ ಸಾಲ ತಂದು ಈ ಯೋಜನೆ ತರುತ್ತಿದ್ದಾರೆ. ಹಾಗೆ ನಮ್ಮ ಕಲ್ಯಾಣ ಕರ್ನಾಟಕ ಜನರ ಅಭಿವೃದ್ಧಿಗಾಗಿ ಮೀಸಲಿರುವ
ಕೆ.ಕೆ ಆರ್.ಡಿ.ಬಿ ಹಣವನ್ನು ನಮ್ಮ ಭಾಗದ ಶಾಲೆಗಳನ್ನು ಮುಚ್ಚುವುದಕ್ಕೆ ಬಳಸುತ್ತಿರುವುದು ನೋವಿನ ಸಂಗತಿಯಾಗಿದೆ. ಇದನ್ನು ವಿರೋಧಿಸಿ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶದ ಮೂಲಕ ಪ್ರತಿರೋಧವನ್ನು ಬೆಳೆಸೋಣ ಎಂದರು.
ಕುಣಿಕೇರಿ ಶಾಲೆಯನ್ನು ಮುಚ್ಚುವುದನ್ನ ವಿರೋಧಿಸಿ ಊರಿನ ಮಹಿಳೆಯೊಬ್ಬರು ಮಾತನಾಡಿ ಬ್ರಿಟಿಷರು ನಮ್ಮ ದೇಶದ ಜನರನ್ನ ಅಜ್ಞಾನದಲ್ಲಿರಿಸಿ ದಬ್ಬಾಳಿಕೆಯಿಂದ ಆಳ್ವಿಕೆ ಮಾಡಿದಂತೆ, ಕೆಪಿಎಸ್ ಮಾಗ್ನೆಟ್ ಶಾಲೆ ತೆರದು ನಮ್ಮ ಶಾಲೆಯನ್ನು ಮುಚ್ಚಿ ಬ್ರಿಟಿಷರಂತೆ ಇಂದಿನ ಸರಕಾರಗಳು ನಮ್ಮ ಮಕ್ಕಳನ್ನ ಅಜ್ಞಾನಕ್ಕೆ ತಳ್ಳುವ ಹುನ್ನಾರ ನಡೆಸುತ್ತಿದ್ದಾರೆ ಇದು ನಡೆಯೋದಿಲ್ಲ ನಾವೆಲ್ಲ ಎಚ್ಚರವಾಗಿದ್ದೇವೆ, ನಮ್ಮ ಶಾಲೆ ನಮ್ಮ ಹಕ್ಕು, ನಮ್ಮೂರಲ್ಲೇ ನಾವು ನಮ್ಮ ಮಕ್ಕಳನ್ನ ಓಡಿಸೋದು ಎಂದ್ರು ಆಕ್ರೋಶ ವ್ಯಕ್ತಪಡಿಸಿದರು.
AIDSO ವಿದ್ಯಾರ್ಥಿ ಸಂಘಟನೆ ರಾಜ್ಯ ಮುಖಂಡರಾದ ಸಿಂಧು ಕೌದಿ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಾರ್ಚ್ 14 ರಂದು ಕಲುಬುರ್ಗಿಯಲ್ಲಿ ನಡೆಯುತ್ತಿರುವ ಪ್ರತಿರೋಧ ಸಮಾವೇಶದಲ್ಲಿ ಕೊಪ್ಪಳದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ AIDSO ಸಂಘಟನಾಕಾರರಾದ ಪ್ರದ್ದೀಪ್, AIDYO ಸದಸ್ಯರಾದ ಸುಭಾನ್, AIMSS ಕಾರ್ಯದರ್ಶಿ ಶಾರದಾ ಗಡ್ಡಿ, ಕುಣಿಕೇರಿಯ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರಾದ ಚೆನ್ನವೀರಯ್ಯ ದಮ್ಮೂರು, ಉಪಾಧ್ಯಕ್ಷರಾದ – ಮಾರಿತೇಶ್ವರ ಕುರುಬರ ಸದಸ್ಯರುಗಳಾದ ರಾಮಣ್ಣ ಬೆಳಿವಿನಾಳ, ಗವಿಸಿದ್ದಪ್ಪ ಹಲಗಿ, ಶರಣಪ್ಪ ಮಡಿವಾಳ, ಯಮನೂರಪ್ಪ ಹಳ್ಳಿಕೇರಿ, ಗವಿಸಿದಪ್ಪ ಕುರುಬರ ಸಂಜೀವಪ್ಪ ಚೌದ್ರಿ, ಪವಿತ್ರ ಬೆಳವಿನಾಳ್, ರುದ್ರಮ್ಮ, ಲಲಿತವ್ವ ಗಡಿಗಿ, ನಿರ್ಮಲ ಹಿರೇಮಠ, ನಿರ್ಮಲ ಸೋಂಪುರ, ಜ್ಯೋತಿ ಮುತ್ತಾಳ್ ಸೇರಿದಂತೆ ಮುಂತಾದ ಊರಿನ ಹಿರಿಯರು, ಪೋಷಕರು, ಮಹಿಳೆಯರು ಹಾಗೂ ರೈತ ಮುಖಂಡರು ಸೇರಿ 400ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.




