371 -(J) Vaijinath Patil and Mallikarjun Kharge are most remembered for their implementation. Dr. Manjunath Hosamani




ಗಂಗಾವತಿ.. ಭಾರತದ ಸ್ವಾತಂತ್ರ್ಯಕ್ಕಿಂತ ಪೂರ್ವದಲ್ಲಿ ನಿಜಾಮರ ಆಳ್ವಿಕೆಗೆ ಒಳಪಟ್ಟ ಹೈದರಾಬಾದ್ ಕರ್ನಾಟಕ ಪ್ರಾಂತಗಳು ನಿಜಾಮರು ಸುಖದ ಸಂಪತ್ತಿಗೆ ಹೊಂದಿದ್ದರೆ ಈ ಭಾಗದ ಜನರು ಶಿಕ್ಷಣ ಉದ್ಯೋಗ ಇವುಗಳಿಂದ ವಂಚಿತರಾಗಿ ಅಜ್ಞಾನ ಅಂದಕಾರ ಮೂಢನಂಬಿಕೆಗಳಿಂದ ತತ್ತರಿಸಿದ್ದು ಹಿಂದುಳಿದ ಪ್ರದೇಶವಾಗಿ ಗುರುತಿಸಿಕೊಂಡಿವೆ ಸ್ವಾತಂತ್ರದ ಬಳಿಕ ಬಹು ವರ್ಷಗಳ ಬೇಡಿಕೆ ಈ ಪ್ರಾರ್ಥಗಳ ಸರ್ವತೋಮುಖ ಅಭಿವೃದ್ಧಿಗಾಗಿ 371. ಜೆ ಅನುಷ್ಠಾನಗೊಳಿಸುವಂತೆ ಧ್ವನಿ ಎತ್ತಿದ ವೈಜಿನಾಥ ಪಾಟೀಲ್ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಅವರು ಅತ್ಯಂತ ಸ್ಮರಣೀಯರಾಗಿದ್ದಾರೆ ಎಂದು ಸಹಾಯಕ ಪ್ರಾಧ್ಯಾಪಕ ಡಾಕ್ಟರ್ ಮಂಜುನಾಥ್ ಹೊಸಮನಿ ಹೇಳಿದರು. ಅವರು ಶನಿವಾರದಂದು ಸರ್ವಾಂಗೀನ ಅಭಿವೃದ್ಧಿ ಹೋರಾಟ ಸಮಿತಿ ಗಂಗಾವತಿ ಜಿಲ್ಲಾ ಘಟಕ ಬಾಲಕಿಯರ ಸರ್ಕಾರಿ ಮಾದರಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ವಿಚಾರ ಸಂಕೀರ್ಣ 371 ಜೆ ಸಾಧಕ ಭಾದಕಗಳ ಕುರಿತು ಮಾತನಾಡಿದರು. ಇದರ ಫಲವಾಗಿ ಪ್ರಸ್ತುತ ಈಗಿನ ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಶೇಕಡ 50ರಷ್ಟು ಉದ್ಯೋಗ ಹಾಗೂ ಉನ್ನತ ಭಟ್ಟದ ಶಿಕ್ಷಣ ಪಡೆಯಲು ಅವಕಾಶ ಕಾಳಬಹುದಾಗಿದೆ. ಇನ್ನೂ 30,000 ಹುದ್ದೆಗಳು ಈ ಪ್ರಾಂತಕ್ಕೆ ಅವಶ್ಯಕತೆ ಇದ್ದು ಈ ಭಾಗದ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕುವುದರ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಲು ಮುಂದಾಗ ಬೇಕಿದೆ ಎಂದು ಸಮಗ್ರ ಮಾಹಿತಿ ನೀಡಿದರು. ದಂತ ವೈದ್ಯ ಪಾಟೀಲ್ ಆರೋಗ್ಯ ಮತ್ತು ಪರಿಸರಕ್ಕೆ ಕುರಿತು ಮಾತನಡಿ ದರು.. ಪ್ಲಾಸ್ಟಿಕ್ ಮುಕ್ತ ಭಾರತ ಅಡಿಯಲ್ಲಿ ಮಾಜಿ ಸಂಸದ ಹೆಚ್ಜಿ ರಾಮಲು ರವರ ಸಹಕಾರದಿಂದ 26,000
ವೆಚ್ಚದ. ಕೈಚೀಲಗಳನ್ನು ಲೋಕಾರ್ಪಣೆ ಗೊಳಿಸ ಲಾಯಿತು. ವಾಕಿಂಗ್ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭವನ್ನು ನಗರಸಭಾ ಸದಸ್ಯ ನವೀನ್ ಮಾಲಿ ಪಾಟೀಲ್. ಹಾಗೂ ವೇದಿಕೆಯಲ್ಲಿರುವ ಗಣ್ಯರು ಉದ್ಘಾಟಿಸಿದರು. ನಾಗರಾಜ್ ಗುತ್ತೇದಾ ರ್ ಅಧ್ಯಕ್ಷತೆ ವಹಿಸಿದರು. ಪತ್ರಕರ್ತನನ್ನು ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ. ಶಿಕ್ಷಣ ಸಂಯೋಜನ ರಾಘವೇಂದ್ರ ಮಂಜುನಾಥ್ ಹನುಮಂತಪ್ಪ ಐಹೊಳೆ ಜಡಿಯಪ್ಪ ಹಂಚಿನಾಳ ಇತರರು ಉಪಸ್ಥಿತರಿದ್ದರು