Breaking News

ಶ್ರೀರಾಮನಗರದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದ ರಥ ಸ್ವಾಗತಿಸಿದ ಜನತೆ

ಗಂಗಾವತಿ: ಜನೇವರಿ-೮ ರಂದು ನಡೆಯಲಿರುವ ಸಮಾರೋಪ ಸಮಾರಂಭದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಿರ್ಮಲ ತುಂಗಭದ್ರ ಅಭಿಯಾನದ ರಥ ಜ.೦೧ ರಂದು ಶ್ರೀರಾಮನಗರದಲ್ಲಿ ಚಾಲನೆಗೊಂಡಿತು. ಚಾಲನೆಯನ್ನು ಎಸ್.ಪಿ.ಎಸ್ ಬ್ಯಾಂಕ್ ಅಧ್ಯಕ್ಷ ಸಿ.ಹೆಚ್.ವಿ ರಾಮಕೃಷ್ಣ, ಮಾಜಿ ತಾಲೂಕ ಪಂಚಾಯತ ಆದ್ಯಕ್ಷ ಮಹಮ್ಮದ ರಫಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಣೇಶ್ರರಾವ್ ಮತ್ತು ರೆಡ್ಡಿ ವೀರರಾಜು ನೆರವೇರಿಸಿದರು.
ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕರಾದ ಬಾಲಕೃಷ್ಣ ನಾಯ್ಡು, ಡಾ|| ಶಿವಕುಮಾರ ಮಾಲಿಪಾಟೀಲ್, ಲೋಕೇಶ್ವರಪ್ಪ, ರಾಘವೇಂದ್ರ ತೂನ, ಮಂಜುನಾಥ್ ಗುಡ್ಲಾನೂರ ಜನಜಾಗೃತಿ, ಜಲಜಾಗೃತಿ ಮತ್ತು ಸಮಾರೋಪ ಕಾರ್ಯಕ್ಕೆ ಆಗಮಿಸಿ ಈ ಸ್ವಚ್ಛತಾ ಆಂದೋಲನಕ್ಕೆ ಕೈ ಜೋಡಿಸಿ ಎಂದು ಕರೆ ನೀಡಿದರು.
ಶ್ರೀ ರಾಮನಗರದಲ್ಲಿ ಪ್ರತಿ ಓಣಿಯಲ್ಲಿ ಜಾಗೃತಿಯ ರಥ ಸಂಚರಿಸಿ ಜಾಗೃತಿ ಮೂಡಿಸಿತು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಶಾಂತಪ್ಪ, ರಾಮಕೃಷ್ಣರಾಜು, ಜಿ. ರಾಮಕೃಷ್ಣ, ಕೆ. ವಿಜಯಭಾಸ್ಕರ್ ರೆಡ್ಡಿ, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಸರ್ವ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ನಾಗೇಶ ಕುರಡಿ, ಸಿಬ್ಬಂದಿ ಗಿರಿಧರ ಜೂರಟಗಿ, ಮುಖಂಡರಾದ ಶ್ರೀನಿವಾಸ ಬಿ., ರಮೇಶ ಕುಲಕರ್ಣಿ, ಸುಮಂಗಲಾ, ಪರಮೇಶಪ್ಪ, ತಾಯಪ್ಪ, ಯಲ್ಲಪ್ಪ, ಪರಮೇಶ್ವರಪ್ಪ, ಮಾರೆಪ್ಪ ಮುಂತಾದವರು ಇದ್ದರು.

ಜಾಹೀರಾತು

About Mallikarjun

Check Also

ಉಳೆನೂರು ಗ್ರಾಮದ ಬಸ್ ನಿಲ್ದಾಣದ ಬಳಿ ಎಐಡಿಎಸ್ಓ ನೇತೃತ್ವದಲ್ಲಿ ಸಹಿ ಸಂಗ್ರಹ ಅಭಿಯಾನ.

Signature collection campaign led by AIDSSO near the bus stand in Ulenur village. ಸಂಯೋಜನೆ ಹೆಸರಿನಲ್ಲಿ …

Leave a Reply

Your email address will not be published. Required fields are marked *