Breaking News

ರೈತಸಂಘದರಾಜ್ಯಾಧ್ಯಕ್ಷ ಮೇಟಿಯವರ ಅಣತಿಯಂತೆ,,! ರೈತ ಸಂಘಟನೆಬಲಿಷ್ಠಗೊಳಿಸಲಾಗುವುದು : ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ,,

Like Meti, the state president of the farmers’ association,! Farmers’ organizations will be strengthened: District President Mudiappa Nayaka.

ಜಾಹೀರಾತು
IMG 20241221 WA0236

ವರದಿ : ಪಂಚಯ್ಯ ಹಿರೇಮಠ ಕೊಪ್ಪಳ.

ಕುಕನೂರು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿಯವರ ಅಣತಿಯಂತೆ ಕೊಪ್ಪಳ ಜಿಲ್ಲೆಯಲ್ಲಿ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ನಮ್ಮ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಹೇಳಿದರು.

ಅವರು ಶನಿವಾರದಂದು ಕುಕನೂರು ನಿರೀಕ್ಷಣಾ ಮಂದಿರದಲ್ಲಿ ನೂತನ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ನಮ್ಮ ರೈತ ಸಂಘಟನೆಯನ್ನು ಜಿಲ್ಲಾಯಾದ್ಯಂತ ಸಂಘಟಿಸುತ್ತಿದ್ದು, ಹಂತ ಹಂತವಾಗಿ ವಿವಿಧ ತಾಲೂಕು ಹಾಗೂ ಹೋಬಳಿಗಳಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ರೈತ ಪರ ಗುರುತರ ಜವಾಬ್ದಾರಿಗಳನ್ನು ನೀಡುವ ಜೊತೆಗೆ ಸಂಘಟನೆಯನ್ನು ಬಲಿಷ್ಠಗೊಳಿಸಲಾಗುವುದು ಎಂದು ಹೇಳಿದರು.

ನಂತರದಲ್ಲಿ ರೈತ ಸಂಘದ ರಾಜ್ಯ ಸದಸ್ಯ ಶರಣಪ್ಪ ಸೋಮಸಾಗರ ಮಾತನಾಡಿ ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಡಿ. 09ರಂದು ಸುವರ್ಣ ಸೌಧದಲ್ಲಿ ನಡೆದ ಚಳಿಗಾಲ ಅಧಿವೇಶನದಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡ ಸಂದರ್ಭದಲ್ಲಿ, ಪ್ರತಿಭಟನಾ ಸ್ಥಳಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಅವರು ಆಗಮಿಸಿ ನಮ್ಮ ಮನವಿಯನ್ನು ಸ್ವೀಕರಿಸಿ ಮಾತನಾಡಿ ಸಿಎಂ ಅವರ ಗಮನಕ್ಕೆ ತರುವ ಮೂಲಕ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದಿದ್ದರು ಅದರಂತೆ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಧಾನ ಸೌಧದ ಮುಂದೆಯು ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಹೇಳಿದರು.

ನಂತರದಲ್ಲಿ ಕುಕನೂರು ತಾಲೂಕಾಧ್ಯಕ್ಷ ಪರಶುರಾಮ ಪೂಜಾರ ಮಾತನಾಡಿದರು.

ಈ ವೇಳೆ ಕೊಪ್ಪಳ ಜಿಲ್ಲಾ ಸಲಹೆಗಾರರನ್ನಾಗಿ ಸುಭಾಸ ನವಲಗುಂದ, ಯಲಬುರ್ಗಾ ತಾಲೂಕಾಧ್ಯಕ್ಷರನ್ನಾಗಿ ಶರಣಬಸಪ್ಪ ದಾನ ಕೈ, ಯಲಬುರ್ಗಾ ತಾಲೂಕ ಮಹಿಳಾ ಅಧ್ಯಕ್ಷರನ್ನಾಗಿ ರೇಣುಕಾ ಮೇಟಿ ಹಾಗೂ ಸದಸ್ಯರನ್ನಾಗಿ ಮಲ್ಲಿಕಾರ್ಜುನಯ್ಯ ಕೋಡಗಾನೂರಮಠ, ಸದಸ್ಯರನ್ನಾಗಿ ಜುಬೇದಾ ನವಲಗುಂದ, ಶಾರದಾ ಕೊಣ್ಣೂರ ಇವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕೊಪ್ಪಳ ಜಿಲ್ಲಾಧ್ಯಕ್ಷೆ ಹುಲಿಗೆಮ್ಮ ನಾಯಕ ಹಾಗೂ ಕುಕನೂರು ತಾಲೂಕಾಧ್ಯಕ್ಷೆ ನೀಲಮ್ಮ ನಿಂಗಾಪೂರ ಇವರು ಹಸಿರು ಶಾಲು ಹಾಕುವ ಮೂಲಕ ಆದೇಶ ಪ್ರತಿ ನೀಡಿದರು.

About Mallikarjun

Check Also

img202510021202142.jpg

ಸ್ವಾಭಿಮಾನಿ ಕಲ್ಯಾಣ ಪರ್ವ 12ನೇ ಶತಮಾನದ ಶರಣರ ಸ್ವಾಭಿಮಾನದ ಪ್ರತೀಕ

Swabhimani Kalyana Parva is a symbol of the self-respect of the 12th century Sharanas. ಹನ್ನೆರಡನೇ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.