ವೇಗ ಕಡಿಮೆ ಮಾಡಿ ಜೀವ ಉಳಿಸಿಕೊಳ್ಳಿ: ಪಿಎಸ್ಐ ಪುಂಡಪ್ಪ ಜಾದವ್

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಬಂದಿದೆ ಹೊಸ ಹೈಟೆಕ್ ಕ್ಯಾಮೆರಾ ನಿಯಮ..! 

ಜಾಹೀರಾತು

ಗಂಗಾವತಿ: ನಗರದಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಅತ್ಯಂತ ವೇಗವಾಗಿ ಚಲಿಸುವ ವಾಹನಗಳನ್ನು ನಿಯಂತ್ರಿಸಲು ಸರಕಾರ ಆದೇಶಿಸಿದ್ದು, ಅದರಂತೆ ಲೇಜರ್ ಕ್ಯಾಮೆರಾಕ್ಕೆ ಚಾಲನೆ ನೀಡಿದ ಗ್ರಾಮೀಣ ಪೊಲೀಸ ಠಾಣೆ ಪಿಎಸ್ಐ ಪುಂಡಪ್ಪ ಜಾದವ್ ಮಾತನಾಡುತ್ತಾ, 

 ದಿನದಿಂದ ದಿನಕ್ಕೆ ಗಂಗಾವತಿ ನಗರ ಬೆಳೆಯುತ್ತಿದೆ, ನಗರದಲ್ಲಿ ವಾಹನಗಳ ಸಂಚಾರ ಹೆಚ್ಚುತ್ತಿದ್ದು.  ಗ್ರಾಮೀಣ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ವಾಹನ ಚಾಲಕರಿಗೆ ಸಂಚಾರಿ ನಿಯಮಗಳ ಮಾಹಿತಿ ನೀಡುತ್ತಿದ್ದಾರೆ, ಆದರೂ ಕೂಡ ವಾಹನ ಚಾಲಕರು ಅತಿ ವೇಗವಾಗಿ ವಾಹನಗಳನ್ನು ಚಾಲನೆ ಮಾಡುವವರ ಮೇಲೆ ಗ್ರಾಮೀಣ ಭಾಗದ ಪೊಲೀಸ್ ಇಲಾಖೆ ನಿಗಾ ವಹಿಸಿ ಇಂದು ಲೇಜರ್ ಕ್ಯಾಮೆರಾಕ್ಕೆ     ಚಾಲನೆ ನೀಡಲಾಯಿತು.

ನಂತರ ಗಂಗಾವತಿಯ ಕೊಪ್ಪಳ ರಸ್ತೆಯಲ್ಲಿ ಲೇಸರ್ ಕ್ಯಾಮೆರಾ ಅಳವಡಿಸುವ ಮೂಲಕ ವೇಗವಾಗಿ ಚಲಿಸುವಂತಹ ವಾಹನಗಳ ಚಾಲಕರಿಗೆ ಸರ್ಕಾರದ ಆದೇಶದಂತೆ ದಂಡ ವಿಧಿಸಲಾಯಿತು.

ಈ ಸಂದರ್ಭದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಎ.ಎಸ್.ಐ   ಮಂಜುನಾಥ ಹುಲ್ಲೂರು,ಸಿಬ್ಬಂದಿಗಳಾದ ದೇವರಾಜ,ಕನಕಪ್ಪ ಸೇರಿದಂತೆ ಇತರರು ಇದ್ದರು

Total Views: 0
Share This Article