
Siddaramaiah Swami V. Hiremath Somanala selected for Katha Kirtana ceremony at Kanakagiri Festival

ಕನಕಗಿರಿ ಉತ್ಸವದಲ್ಲಿ ಕಥಾ ಕೀರ್ತನ ಸಮಾರಂಭಕ್ಕೆ
ಸಿದ್ದರಾಮಯ್ಯ ಸ್ವಾಮಿ ವಿ.ಹಿರೇಮಠ ಸೋಮನಾಳ ಆಯ್ಕೆ

ಗಂಗಾವತಿ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾಡಳಿತ ಕೊಪ್ಪಳ ಸಹಯೋಗದಲ್ಲಿ 2026 ನೇ ಮೇ 16, ಮತ್ತು 17 ರಂದು ನೆಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ಜಯತೀರ್ಥ ರಾಜಪುರೋಹಿತರ ವೇದಿಕೆಯಲ್ಲಿ ಕಥಾ ಕಿರ್ತನ ಕಾರ್ಯಕ್ರಮಕ್ಕೆ ಕಾರಟಗಿ ತಾಲೂಕು ಮೈಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೋಮನಾಳ ಗ್ರಾಮದ ಶ್ರೀ ಸಿದ್ದರಾಮಯ್ಯ ವೀ ಹಿರೇಮಠ ಅವರು ಆಯ್ಕೆ.
ಶ್ರೀಯುತರು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪರಮ ಪೂಜ್ಯರಾದ ಶ್ರೀ ಪಂ.ಕಲ್ಲಯ್ಯಜ್ಜನವರ ಶಿಷ್ಯರಾಗಿ ನಾಡಿನೆಲ್ಲೆಡೆ ತಮ್ಮ ಪ್ರವಚನದ ಪ್ರತಿಭೆಯ ಮೂಲಕ ಜನಮಾನಸರಾಗಿದ್ದಾರೆ. ಸಾಹಿತ್ಯ, ಸಂಗೀತದಿಂದ ಕನ್ನಡ ಭಾಷಾಭೀಮಾನ ಬೆಳೆಸುವ ಪರಿ ಅನಂತ ಕಾಲದಿಂದಲೂ ಕರಗತ ಮಾಡಿಕೊಂಡು ಬಂದಿದ್ದಾರೆ, ಶ್ರೀಯುತರಿಗೆ ಸೋಮನಾಳ ಗ್ರಾಮದ ಅಭಿಮಾನಿಗಳು, ಸಾಹಿತ್ಯ ಸಂಗೀತ ಬಳಗದ ಸರ್ವ ಕಲಾವಿದರು ಹೃದಯ ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ,
