
ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹಗಲು ರಾತ್ರಿ ಎನ್ನದೆ ಅಕ್ರಮವಾಗಿ ಮರಮ ಮತ್ತು ಮರಳು ಮಾಫಿಯಾ ನಡೆಯುತ್ತಿದ್ದು ಕಂಡು ಕಾಣದ ಹಾಗೆ ಕುಳಿತಿರುವ ಸಂಬಂಧ ಪಟ್ಟ ಇಲಾಖೆಗಳು ಎಂದು ಅಜಯ್ ಕುಮಾರ್ ಚಲುವಾದಿ ಅವರು ಆರೋಪಿಸಿದ್ದಾರೆ
ತಾಲೂಕಿನಾದ್ಯಾಂತ ಹಗಲು ರಾತ್ರಿ ಎನ್ನದೆ ಅಕ್ರಮ ಮರಮ, ಮರಳು ಹಗಲು ರಾತ್ರಿ ಎನ್ನದೆ ಅಕ್ರಮ ಧಂದೆ ಕಂಣ್ಣು ಮುಚ್ಚಿ ಕುಳಿತ ಅಧಿಕಾರಿಗಳು
Illegal mining and sand mining are taking place day and night throughout the taluk, with officials turning a blind eye to the illegal business.

ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಮರಮ ಮತ್ತು ಮರಳು ಮಾಫಿಯಾ ವಿರುದ್ಧ ಅನೇಕ ಬಾರಿ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡಿದರು ಯಾವುದೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಗಂಗಾವತಿಯಲ್ಲಿ ಹಗಲು ರಾತ್ರಿ ಎನ್ನದೆ ಟ್ರ್ಯಾಕ್ಟರ್ ಮುಖಾಂತರ ಮತ್ತು ಟಿಪ್ಪರ್ ಮುಖಾಂತರ ರಾಜಾರೋಷವಾಗಿ ಯಾವುದೇ ಅಧಿಕಾರಿಗಳ ಭಯವಿಲ್ಲದೆ ಮರುಮ ಮತ್ತು ಮರಳು ಟಿಪ್ಪರಗಳು ಓಡಾಡುತ್ತಿವೆ ಆದರೆ ಇಲ್ಲಿನ ಅಧಿಕಾರಿಗಳು ಕಂಡು ಕಾಣದ ಹಾಗೆ ಕುಳಿತಿರುವುದು ಮರಳು ಮಾಫಿಯ ಮಾಡುವವರ ಜೊತೆಯಲ್ಲಿ ಅಧಿಕಾರಿಗಳು ಶಾಮೀಲಾಗಿದಾರೋ ಏನೋ ಎಂಬ ಸಂಶಯ ಉಂಟಾಗಿದೆ ಅತಿ ಹೆಚ್ಚು ಭಾರವಿರುವ ಟಿಪ್ಪರ್ ಗಳ ಓಡಾಟದಿಂದ ಅತಿಯಾದ ದೂಳು ವಾತಾವರಣದಿಂದ ಜನರಿಗೆ ತೊಂದರೆಯನ್ನು ಉಂಟುಮಾಡಿ ನಾನಾ ರೋಗಗಳಿಗೆ ಆವಾಹನ ನೀಡುತ್ತಿದ್ದಾರೆ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಮರಮು ಮತ್ತು ಮರಳು ಮಾಫಿಯಾ ನಡೆಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಒಂದು ವೇಳೆ ಈ ಮಾಫಿಯಾ ವಿರುದ್ಧ ತಾವುಗಳು ಯಾವುದೇ ಕ್ರಮವನ್ನು ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನ ನಮ್ಮ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ವತಿಯಿಂದ ಗಂಗಾವತಿಯಲ್ಲಿ ಬೃಹತ್ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುವದು ಎಂದರು



