Mass wedding event in Sriramnagar on the occasion of Dussehra

ಗಂಗಾವತಿ: ಕೊಪ್ಪಳ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜನಾಂಗಗಳ ಕಲ್ಯಾಣಕ್ಕೋಸ್ಕರ ಸಾಮೂಹಿಕ ವಿವಾಹಗಳನ್ನು ಅಕ್ಟೋಬರ್-೧೨ ಶನಿವಾರದಂದು ಮದ್ಯಾಹ್ನ ೧೧:೩೦ ರಿಂದ ೧೨:೩೦ ನಿ.ಕ್ಕೆ ಶ್ರೀರಾಮಗನರದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಿರ್ವಹಿಸಲು ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಘ ತೀರ್ಮಾನಿಸಿದೆ ಎಂದು ಸಂಘದ ಅಧ್ಯಕ್ಷರಾದ ಕನ್ನಡಪ್ರೇಮಿ ಲಯನ್ ಜಿ. ರಾಮಕೃಷ್ಣರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಾಮೂಹಿಕ ವಿವಾಹಕ್ಕೆ ನೋಂದಾಯಿಸುವ ವಧು ೧೮ ವರ್ಷ, ವರನಿಗೆ ೨೧ ವರ್ಷ ತುಂಬಿದ ಬಗ್ಗೆ ವಯಸ್ಸಿನ ಶಾಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಮತ್ತು ಈ ಸಾಮೂಹಿಕ ವಿವಾಹದಲ್ಲಿ ಯಾವುದೇ ಅಂತರ್ಜಾತಿ ವಿವಾಹ, ಪ್ರೇಮವಿವಾಹ, ಮರುವಿವಾಹಗಳಿಗೆ ಪ್ರವೇಶ ಇರುವುದಿಲ್ಲ.
ಸದರಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ವಧುವರರಿಗೆ ೨ ತಾಳಿ (ಮಾಂಗಲ್ಯ), ಮೂಗುತಿ, ಬಾಸಿಂಗ, ಕಾಲುಂಗುರ, ನೂತನ ವಸ್ತçಗಳನ್ನು ಕೊಡಲಾಗುವುದು ಹಾಗೂ ವಧು-ವರರ ಪರವಾಗಿ ಬರುವ ಬಂಧು ಬಳಗದವರಿಗೆ ಬೆಳಿಗ್ಗೆ ಟಿ ಮತ್ತು ಟಿಫಿನ್ ಹಾಗೂ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
ಈ ಸಾಮೂಹಿಕ ವಿವಾಹಕ್ಕೆ ದಿನಾಂಕ: ೦೮.೧೦.೨೦೨೪ ರ ಒಳಗಾಗಿ ಶ್ರೀರಾಮನಗರದ ಕೆನರಾ ಬ್ಯಾಂಕ್ ಹತ್ತಿರವಿರುವ ನವತಾ ಟ್ರಾನ್ಸ್ಪೋರ್ಟ್ ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಲು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸ್ವಾಮಿ ವಿವೇಕಾನಂದ ಸೇವಾ ಸಂಘ ಶ್ರೀರಾನಗರದ ಅಧ್ಯಕ್ಷರಾದ ಜಿ. ರಾಮಕೃಷ್ಣರವರನ್ನು (೯೪೪೮೨೨೮೭೩೮, ೯೫೩೮೪೩೦೯೮೯) ಸಂಪರ್ಕಿಸಲು ಕೋರಿದೆ.
Kalyanasiri Kannada News Live 24×7 | News Karnataka
