ನಗರಸಭೆ ಪೌರಾಯುಕ್ತರಿಗಲ್ಲದೆ ಕುಟುಂಬದವರ ಮೇಲು ಅವ್ಯಚ್ಚ ಶಬ್ದಗಳಿಂದ ನಿಂದನೆ ಮಾಡಿದ ಸಂದೀಪ್, ಇವರ ವರ್ತನೆ ಖಂಡಿಸಿ ನಗರಸಭೆ ಸಿಬ್ಬಂದಿಗಳು ಪೌರಾಯುಕ್ತರಿಗೆ ಬೆಂಬಲವನ್ನು ಸೂಚಿಸಿ ಸಂದೀಪ ಭಂಧನ ಆಗುವ ವರೆಗೂ ಯಾವ ಒಬ್ಬ ಪೌರ ಕಾರ್ಮಿಕನಾಗಲಿ ಸಿಬ್ಬಂದಿಗಳಾಗಲಿ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಧಿಡೀರ್ ಪ್ರತಿಭಟನೆಗೆ ಇಳಿದರು,
ಲನಗರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇಡೀ ನಗರದ ಜವಾಬ್ದಾರಿ ಒಂದು ಕಡೆ ಇದ್ದರೆ ಮಾಜಿ ಅಧ್ಯಕ್ಷೆ ಮಾಲಾಶ್ರೀ ಇವರ ಪತಿಯ ಕಿರಿಕಿರಿ ಇನ್ನೊಂದು ಕಡೆ ಇರೋದು ಬೇಸರದ ಸಂಗತಿಯಾಗಿದೆ,
ಕೆಲವು ವರ್ಷಗಳ ಹಿಂದೆ ನಗರಸಭೆಯ ಸಿಬ್ಬಂದಿ ಸಾಧಿಕ ಇವರ ಮೇಲೆ ಸಂದೀಪ್ ಸಣ್ಣ ಸಣ್ಣ ವಿಚಾರವಾಗಿ ಮೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾದರೂ ನಗರಸಭೆ ಸದಸ್ಯರ ಹಾಗು ಇನ್ನುಳಿದ ಸಿಬ್ಬಂದಿಗಳ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡಿತ್ತು,
ಆದರೆ ಇತ್ತೀಚಿನ ದಿನಗಳಲ್ಲಿ ಸಂದೀಪ ಇವರ ಈ ದುರ್ನಡತೆಯನ್ನು ಬೇಸೆತ್ತ ನಗರಸಭೆ ಪೌರಾಯುಕ್ತರು ನಗರ ಸಭೆ ಸದಸ್ಯರು ಹಾಗು ಸಿಬ್ಬಂದಿಗಳು ಇರುವ ವಾಟ್ಸಾಪ್ ಗ್ರೂಪ್ ನಿಂದ ರಿಮುವ್ ಮಾಡಿದ್ದರು, ಈ ವಿಚಾರವಾಗಿ ಸಂದೀಪ್ ಗುರುವಾರ ರಾತ್ರಿ 10 ಗಂಟೆಯ ಸುಮಾರಿಗೆ ನಮ್ಮ ನಗರಸಭೆ ಎನ್ನುವ ಇನ್ನೊಂದು ವಾಟ್ಸಾಪ್ ಗ್ರೂಪನಲ್ಲಿ ವಾಯ್ಸ್ ಮೆಸೇಜ್ ಮಾಡಿದ್ದು ಆ ವಾಯ್ಸ್ ಮೆಸೇಜ್ ನಲ್ಲಿ ಪೌರಾಯುಕ್ತರಿಗೆ ಹಾಗು ಅವರ ಕುಟುಂಬದ ಹೆಂಗಸರ ಮೇಲೆ ಥರ್ಡ್ ಕ್ಲಾಸ್ ಶಬ್ದಗಳಿಂದ ಬೈದು ಮಾನಸಿಕ ಕಿರುಕುಳವನ್ನು ಕೊಟ್ಟಿರುತ್ತಾನೆ,
ವಾಯ್ಸ್ ರೆಕಾರ್ಡಿಂಗ್ ನಲ್ಲಿ ಆ ಶಬ್ದವನ್ನು ಕೇಳುವವರಿಗೂ ಅಸಹ್ಯ ಪಡುವಂತಾದ್ದಾಗಿದ್ದು ಈ ವಿಚಾರವಾಗಿ ಪಕ್ಷಾತೀತವಾಗಿ ನಗರಸಭೆಯ ಸದಸ್ಯರು ಹಾಗು ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರು ಹಾಗು ಪೌರ ಕಾರ್ಮಿಕರ ಅಧ್ಯಕ್ಷರಾದ ವಹಿದ್ ಖಾನ್ ಎಲ್ಲರೂನಗರಸಭೆಯ ಪೌರಾಯುಕ್ತರಿಗೆ ಬೆಂಬಲವನ್ನು ಸೂಚಿಸಿ ಸಂದೀಪ ಭಂಧನ ಆಗುವ ವರೆಗೂ ಯಾವ ಒಬ್ಬ ಪೌರ ಕಾರ್ಮಿಕನಾಗಲಿ ಸಿಬ್ಬಂದಿಗಳಾಗಲಿ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಧಿಡೀರ್ ಪ್ರತಿಭಟನೆ ನಡೆಸಿದರು.