Breaking News

ಗಂಗಾವತಿ-ಕಲಬುರ್ಗಿ ರೋಡ್ ಹಂಪ್ಸ್ ತೆರುವಿಗೆ ಪಾದೇಶಿಕ ಆಯುಕ್ತರ ಸೂಚನೆ.

Notice of Regional Commissioner for removal of Gangavati-Kalaburgi road humps.

ಜಾಹೀರಾತು
Screenshot 2024 01 19 15 32 22 91 6012fa4d4ddec268fc5c7112cbb265e7 229x300

ಗಂಗಾವತಿ: ಗಂಗಾವತಿ-ಕಲಬುರ್ಗಿ ರಾಜ್ಯ ಹೆದ್ದಾರಿಯಲ್ಲಿ ಕನಕಗಿರಿ-ತಾವರಗೇರಾ-ಮುದಗಲ್-ಲಿಂಗ್ಸೂರ್-ತಿಂತಿಣಿ ಬ್ರಿಡ್ಜ್ ಮಾರ್ಗದಲ್ಲಿ ವಿಪರಿತವಾಗಿ ನಿರ್ಮಿಸಲಾಗಿರುವ ರೋಡ್ ಹಂಪ್ಸ್ ಗಳ ತೆರುವಿಗೆ ಕ್ರಮಕೈಗೊಳ್ಳುವಂತೆ ಕಲಬುರ್ಗಿಯ ವಿಭಾಗೀಯ ಪ್ರಾದೇಶಿಕ ಆಯುಕ್ತರು ಆದೇಶಿದ್ದಾರೆ.

ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಈ ಬಗ್ಗೆ ಬರೆದಿರುವ ಪತ್ರವನ್ನು ಉಲ್ಲೇಖಿಸಿ, ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು, ಈಶಾನ್ಯ ವಲಯ,ಲೋಕೋಪಯೋಗಿ ಭವನ,ಕಲಬುರ್ಗಿ ಇವರಿಗೆ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ.

ಈ ಬಗ್ಗೆ ಕ್ರಮ ಕೈಗೊಂಡು,ವಾಣಿಜ್ಯೊಧ್ಯಮ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರಿಗೆ ಮಾಹಿತಿ ನೀಡಬೇಕೆಂದು ಪ್ರಾದೇಶಿಕ ಆಯುಕ್ತರು, ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಈ ರಸ್ತೆಯಲ್ಲಿ ಟೋಲ್ ಸಂಗ್ರಹಿಸುತ್ತಿದ್ದು ,ಸಹಸ್ರಾರು ರೋಡ ಹಂಪ್ಸ್ ಗಳನ್ನು ನಿರ್ಮಿಸಲಾಗಿದೆ,ಇದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಅಶೋಕಸ್ವಾಮಿ ಹೇರೂರ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.