Breaking News
ಕಾರ್ಮಿಕ ಇಲಾಖೆಯಿಂದ ಮಂಜುರಾ ತಿ ಗೊಂಡ ಒಂದುವರೆ ಲಕ್ಷದ ವಿವಿಧಕಿಟ್ ವಿತರಣೆ. ಪಾಂಡು.ನಾ ಯ್ಕ್.
Distribution of various kits worth one and a half lakh to Manjura Thi Gond from Labor Department. Pandu.na yk.

ಕಾರ್ಮಿಕ ಇಲಾಖೆಯಿಂದ ಮಂಜುರಾ ತಿ ಗೊಂಡ ಒಂದುವರೆ ಲಕ್ಷದ ವಿವಿಧಕಿಟ್ ವಿತರಣೆ. ಪಾಂಡು.ನಾ ಯ್ಕ್.


ಗಂಗಾವತಿ. ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ವತಿಯಿಂದ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘಕ್ಕೆ ಮಂಜೂರಾತಿ ಗೊಂಡ ಅಂದಾಜು ಒಂದುವರೆ ಲಕ್ಷ ದ ವಿವಿಧ ಕಿಟ್ ಗಳನ್ನು ರವಿವಾರದಂದು ವಿರುಪಾಪುರ ತಾಂಡದಲ್ಲಿ ವಿತರಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಾಂಡು.ನಾಯ್ಕ್ ಸಂಘದ ಫಲಾನುಭವಿಗಳಿಗೆ ಕಿಟ್ಟ ಗಳನ್ನು ವಿತರಿಸುವುದರ ಮೂಲಕ ಮಾತನಾಡಿ ಕಾರ್ಮಿಕ ಇಲಾಖೆ ವಿದ್ಯುತ್ ಬುನಾದಿ. ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಅಗತ್ಯ ಮೂರು ಹಂತದ ಪರಿಕರಗಳನ್ನು ಕಲ್ಪಿಸಲಾಗಿದ್ದು ನೀಡಲಾಗಿರುವ ಕಿಟ್ಟುಗಳಲ್ಲಿ ಮತ್ತಷ್ಟು ಗುಣಮಟ್ಟದ ಪರಿಕರಗಳನ್ನು ಕಲ್ಪಿಸುವ ಅವಶ್ಯಕತೆ ಇತ್ತು ಎಂದು ತಿಳಿಸಿದವರು ಕಳೆದ ಮೂರು ವರ್ಷದಿಂದ ಅಸ್ತಿತ್ವಕ್ಕೆ ಬಂದ ಸಂಗವು ಈಗಾಗಲೇ ಕಾರ್ಮಿಕರ ಸದಸ್ಯರುಗಳಿಗಾಗಿ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ. ವಿಶೇಷವಾಗಿ ಕಾರ್ಮಿಕರ ಇಲಾಖೆ ಮಕ್ಕಳ ಶೈಕ್ಷಣಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಿಟ್ಟುಗಳನ್ನು ಕಲ್ಪಿಸಬೇಕಾಗಿದೆ ಯಾವುದೇ ವಿದ್ಯಾರ್ಥಿ ಶಿಕ್ಷಣ ಸೌಲಭ್ಯದಿಂದ ವಂಚಿತರಾಗಬಾರದು ಜೊತೆಗೆ ವಿದ್ಯಾರ್ಥಿ ವೇತನ ರಕ್ಷಿಸುವಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುನ್ನೂರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಂತಹ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕರ ಸಂಘ ಮುಂದಿನ ದಿನಗಳಲ್ಲಿ ಸಂಗಾಪೂರ ತಾಂಡ. ಸೂರ್ಯನಾಯಕತಾಂಡ ಭಾಗದಲ್ಲಿ ಗ್ರಾಮ ಘಟಕಗಳನ್ನು ಸ್ಥಾಪಿಸುವುದರ ಮೂಲಕ ಕಾರ್ಮಿಕ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ಕಲ್ಪಿಸುವ ಸದುದ್ದೇಶ ತಾವು ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವಪ್ಪ ನಾಯ್ಕ್. ಉಪಾಧ್ಯಕ್ಷ ಬಾಲಾಜಿ ಮೇಸ್ತ್ರಿ ಹನುಮಂತಪ್ಪ ಮೇಸ್ತ್ರಿ ಖಜಾಂಚಿ ರವಿಚಂದ್ರ ಸದಸ್ಯರುಗಳಾದ ಕೃಷ್ಣ ಭೋಜ ರವಿ ನಾಯ್ಕ್. ಸೇರಿದಂತೆ ಫಲಾನುಭವಿಗಳು ಪಾಲುಗೊಂಡಿದ್ದರು.

ಪುಸ್ತಕಗಳ ಅಧ್ಯಯನ ಹಾಗೂ ಜೀವನದ ಅನುಭವಗಳ ಸಾರದಿಂದ ಮಾತ್ರ ಉತ್ತಮ ಕವಿಯಾಗಲು ಸಾಧ್ಯ- ಎಸ್ ವಿ ಪಾಟೀಲ್ ಗುಂಡೂರ.
One can become a good poet only through the study of books and the essence of life experiences-S. V. Patil Gundura.

ಪುಸ್ತಕಗಳ ಅಧ್ಯಯನ ಹಾಗೂ ಜೀವನದ ಅನುಭವಗಳ ಸಾರದಿಂದ ಮಾತ್ರ ಉತ್ತಮ ಕವಿಯಾಗಲು ಸಾಧ್ಯ- ಎಸ್ ವಿ ಪಾಟೀಲ್ ಗುಂಡೂರ.


ಗಂಗಾವತಿ. ಬರೆದದ್ದು ಗೀಚಿದ್ದು ಕವನವಲ್ಲ ಒಬ್ಬ ಉತ್ತಮ ಕವಿಯಾಗಲು ಹೆಚ್ಚು ಅಧ್ಯಯನ ಶೀಲತೆಯನ್ನು ಹಾಗೂ ಜೀವನದ ಅನುಭವಗಳನ್ನು ಹಂಚಿಕೊಂಡಾಗ ಮಾತ್ರ ಅತ್ಯುತ್ತಮವಾದ ಕವಿಯಾಗಲು ಸಾಧ್ಯ ಎಂಬ ಅಭಿಪ್ರಾಯವನ್ನು ಸಾಹಿತ್ಯ ಹಾಗೂ ನಾಟಕ ರಚನೆಕಾರ ಎಸ್ ವಿ ಪಾಟೀಲ್ ಗುಂಡೂರ್ ಹೇಳಿದರು.
ಅವರು ಶನಿವಾರದಂದು ಕನ್ನಡ ಜಾಗೃತಿ ಭವನ ದಲ್ಲಿ ತಾಲೂಕ ಚುಟುಕು ಸಾಹಿತ್ಯ ಪರಿಷತ್ ಗಂಗಾವತಿ ಶ್ರೀ ರಾಜರಾಜೇಶ್ವರಿ ಜನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ ಅರಳಹಳ್ಳಿ ಇವರ ನೇತೃತ್ವದಲ್ಲಿ ಆಯೋಜಿಸಿದ ಡಾಕ್ಟರ್ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಕವಿಗೋಷ್ಠಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಭತ್ತದ ಕಣಜ ಎನಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರ ಭಾಗದಲ್ಲಿ ದಿನದಿಂದ ದಿನಕ್ಕೆ ಕವಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಪ್ರಶಂಶಿಯ ಕಾರ್ಯವಾಗಿದೆ. ಕವಿಗೋಷ್ಠಿಯಲ್ಲಿ ಸುಮಾರು 24 ಅಧಿಕ ಕವಿಗಳು ತಮ್ಮದೇ ಆದಂತಹ ಕವನಗಳನ್ನು ರಚಿಸಿ ವಾಚನ ಮಾಡಿರುವುದು ಅದರಲ್ಲಿ ಹೊಸದಾಗಿ ಸೇರ್ಪಡೆಗೊಂಡ ಕವಿಗಳು ಸ್ವಲ್ಪ ಪ್ರಾಸಗಳನ್ನು ರಚಿಸಲು ಹೋಗಿ ತ್ರಾಸು ಅನುಭವಿಸಿದ್ದು ಕಾಣಬಹುದಾಗಿದೆ ಉಳಿದಂತೆ ಕವನಗಳನ್ನು ಗಮನಿಸಿದಾಗ ನೋವು ನಲಿವು ಪ್ರೀತಿ ಭಾಷಾಭಿಮಾನ ಇತರೆ ಅಂಶಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ದಂತ ವೈದ್ಯ ಡಾ. ಶಿವಕುಮಾರ್ ಮಾಲಿ ಪಾಟೀಲ್. ಪಂಪಣ್ಣ ನಾಯಕ್. ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ ವೆಂಕಟೇಶ್ ದರೋಜಿ ಎಸ್ ಬಿ ಹಿರೇಮಠ್ kfಮುದ್ದಾಬಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ತಡವಾಗಿ ಆಗಮಿಸಿದ ಬಿಚಿ. ಬಿ ಪ್ರಾಣೇಶ್ ಹಾಸ್ಯ ಚಟಾಕಿಗಳನ್ನು ಹಾರಿಸಿದರು ತಾಲೂಕ ಅಧ್ಯಕ್ಷ ಅಶೋಕ ಗುಡಿ ಕೋಟೆ ಅಧ್ಯಕ್ಷತೆಯಲ್ಲಿ ಜರುಗಿದ ಕವಿಗೋಷ್ಠಿ ಕಾರ್ಯಕ್ರಮದ ಉದ್ಘಾಟನೆಯನ್ನು ರುದ್ರಪ್ಪ ಭಂಡಾರಿ ಜಿಲ್ಲಾಧ್ಯಕ್ಷರು ವಹಿಸಿದ್ದರು ದಿವ್ಯ ಸಾನಿಧ್ಯವನ್ನು ಅರಳಿಹಳ್ಳಿ ಶರಣಬಸವ ದೇವರು ಮಹಾಸ್ವಾಮಿಗಳು ವಹಿಸಿದ್ದರು…

ರಾತ್ರೋರಾತ್ರಿ ಅನಧಿಕೃತ ಚರ್ಚ್ ನಿರ್ಮಿಸಲು ಮುಂದಾದ ಪ್ರಭಾವಿಗಳು
Influential people who set out to build an unauthorized church overnight

ರಾತ್ರೋರಾತ್ರಿ ಅನಧಿಕೃತ ಚರ್ಚ್ ನಿರ್ಮಿಸಲು ಮುಂದಾದ ಪ್ರಭಾವಿಗಳು

ಕಾಮಗಾರಿ ತಡೆದು ನೋಟಿಸ್ ನೀಡಿದ ಗ್ರಾಮಪಂಚಾಯತ್ ಪಿಡಿಓ

ಗಂಗಾವತಿ ; ತಾಲೂಕಿನ ಮರಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಪ್ರಗತಿನಗರ ಗ್ರಾಮದ 4 ನೇ ವಾರ್ಡಿನಲ್ಲಿ ರಾತ್ರೋರಾತ್ರಿ ಅನಧಿಕೃತವಾಗಿ ಚರ್ಚ್ ನಿರ್ಮಿಸಲು ಮಹಿಳೆ ಸೇರಿದಂತೆ ಕೆಲ ಜನ್ರು ಮುಂದಾದ ಘಟನೆ ಕಳೆದ ಎರಡನೇ ತಾರೀಖನಂದು ನಡೆದಿದೆ.
ಅನಧಿಕೃತ ಚರ್ಚ್ ನಿರ್ಮಾಣ ಸೇರಿದಂತೆ ಗ್ರಾಮದಲ್ಲಿ ಒತ್ತಡಡ ಮತಾಂತರ ಬಗ್ಗೆ ಪ್ರಗತಿನಗರ ಗ್ರಾಮದ ಜನ್ರು ಲಿಖಿತ ರೂಪದಲ್ಲಿ ಗ್ರಾಮಪಂಚಾಯತ್ , ತಾಲೂಕ ಪಂಚಾಯತ, ತಹಶಿಲ್ದಾರ್ ಕಚೇರಿಗೆ ಪತ್ರ ಬರೆದು ತಕ್ಷಣವೇ ಚರ್ಚ್ ನಿರ್ಮಾಣ ತಡೆಹಿಡಿಯುವಂತೆ ಮನವಿ ಸಲ್ಲಿಸಿದ್ದಾರೆ.

ಪ್ರಗತಿನಗರ ಗ್ರಾಮದ ಎಂ.ಸುಶೀಲಾ ಕೃಷ್ಣರಾವ್ ಎನ್ನುವವರು ಖಾಸಗಿ ನಿವೇಶನದಲ್ಲಿ ಯಾವುದೇ ಪರವಾನಗಿ ಪಡೆಯದೇ ಈ ಮಹಿಳೆ ಕೆಲ ಪ್ರಭಾವಿಗಳ ಕರೆತಂದು ಚರ್ಚ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಇನ್ನೂ ಯಾವುದೇ ಪರವಾನಿಗೆ ಪಡೆಯದೇ ಡಿಜೆ ಸೌಂಡ್ ಸಿಸ್ಟಮ್ ಬಳಸಿ ಹಾಡು ಹಾಕುವುದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಕಾಮಗಾರಿ ನಡೆಸುತ್ತಿರೋದು ಬೆಳಕಿಗೆ ಬಂದಿದೆ.

ಈ ಎಲ್ಲಾ ಚಟುವಟಿಕೆಗಳು ಸ್ಥಳೀಯವಾಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣ ವಾಗಿದ್ದು, ಅನಧಿಕೃತ ಚರ್ಚ್ ಕಾಮಗಾರಿ ನಿಲ್ಲಿಸುವಂತೆ ಹಾಗೂ ನಮ್ಮಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಮತಾಂತರವನ್ನು ತಡೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಇಷ್ಟಾದ್ರೂ ಅನಧಿಕೃತ ಚರ್ಚ್ ನಿರ್ಮಾಣಕ್ಕೆ ರಾಜಕೀಯ ವ್ಯಕ್ತಿಗಳ ಸಪೋರ್ಟ್ ಇದೆ.

ನಾನು ಅನಧಿಕೃತವಾಗಿ ಚರ್ಚ್ ನಿರ್ಮಾಣ ಮಾಡ್ತೇನೆ ಎಂದು ರಾತ್ರೋರಾತ್ರಿ ಕಳೆದ ಮಾರ್ಚ್ ಎರಡರಂದು ಹೊರ ಜಿಲ್ಲೆಯ ಜನ್ರನ್ನು ಕರೆತಂದು ಈ ಮಹಿಳೆ ಕಾಮಗಾರಿ ಮುಗಿಸಲು ಮುಂದಾಗಿದ್ರು. ಇದನ್ನು ಮನಗಂಡ ಗ್ರಾಮಸ್ಥರು ತಹಶಿಲ್ದಾರ್, ತಾಲೂಕಪಂಚಾಯತ್ ಇಓ, ಪಿಡಿಓಗೆ ಕರೆ ಮಾಡಿ ಕಾಮಗಾರಿ ನಿಲ್ಲಿಸಿ ಇಲ್ಲವಾದಲ್ಲಿ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ರು. ಇದನ್ನು ಅರಿತ ಪಿಡಿಓ ಇದೀಗ ಕಾಮಗಾರಿ ನಿಲ್ಲಿಸಿ ಕಾನೂನು ಪರಿಪಾಲನೆ ಮಾಡಿದ್ದಾರೆ.

         __________________

ಕಾಮಗಾರಿ ನಿಲ್ಲಿಸಿದ ಬಳಿಕ ಮತ್ತೆ ಪ್ರಭಾವ ಬೀರಿ ಆ ಮಹಿಳೆ ಚರ್ಚ್ ನಿರ್ಮಾಣ ಮಾಡಲು ಸಚಿವರ ಹೆಸರು ಬಳಸಿಕೊಂಡು ಕೆಲ‌ ಮುಖಂಡರಿಂದ ಕಾಮಗಾರಿ ಪ್ರಾರಂಭಿಸೋಕೆ ಸಿದ್ದತೆ ಮಾಡಿಕೊಂಡಿದ್ದಾಳಂತೆ. ಇದ್ರಿಂದ ಗ್ರಾಮಸ್ಥರ ಆಕ್ರೋಶ ಹೊರಹಾಕಿದ್ದು, ಸಚಿವರು ಈ ರೀತಿ ಅನಧಿಕೃತ ಕಾರ್ಯಕ್ಕೆ ಒಪ್ಪಿಗೆ ನಿಡೋದಿಲ್ಲ. ನೀನು ಸಚಿವರ ಹೆಸರು ಹೇಳಿ, ಸಚಿವರ ಹೆಸರು ಬಳಕೆ ಮಾಡಿಕೊಳ್ಳಬೇಡ.. ಇದನ್ನು ನಾವೇ ಸಚಿವರ ಗಮನಕ್ಕೆ ತರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರಂತೆ

             _________   _________

ಎಮ್ ಸುಶೀಲಾ ಕೃಷ್ಣರಾವ್ ಅವರ ಖಾಸಗಿ ನಿವೇಶನದಲ್ಲಿ ಯಾವುದೇ ಪರವಾನಗಿ ಇಲ್ಲದೆ ಚರ್ಚ್ ನಿರ್ಮಾಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ‌. ವಸತಿ ಉದ್ದೇಶದ ನಿವೇಶನದಲ್ಲಿ ಚರ್ಚ್ ಮಾಡಲು ಬರೋದಿಲ್ಲ. ಇದರ ಪರವಾನಿಗೆ ನೀಡೋದು ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರ್ ಗೆ ಇರುತ್ತದೆ .ನಾವು ಈಗಾಗಲೇ ಕಾಮಗಾರಿ ಸ್ಥಗಿತಕ್ಕೆ ನೋಟೀಸ್ ನೀಡಿದ್ದೇವೆ. ಕಾಮಗಾರಿ ಪ್ರಾರಂಭಿಸಿದ್ರೆ, ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುವುದು

ಬಸವರಾಜ ,ಪಿಡಿಓ ಮರಳಿ ಗ್ರಾಮಪಂಚಾಯತ್

ಅನಿಲ ಸಿಲಿಂಡರ್ ದರ ಏರಿಕೆ ತಕ್ಷಣ ವಾಪಸ್ ಪಡೆಯಲಿ: ಎಸ್‌ಯುಸಿಐ(ಸಿ) ಆಗ್ರಹ
Immediately roll back the gas cylinder price hike: SUCI(C) demands

ಅನಿಲ ಸಿಲಿಂಡರ್ ದರ ಏರಿಕೆ ತಕ್ಷಣ ವಾಪಸ್ ಪಡೆಯಲಿ: ಎಸ್‌ಯುಸಿಐ(ಸಿ) ಆಗ್ರಹ

  ಕೊಪ್ಪಳ:ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಗೆ ಖಂಡನೆ

ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗೃಹಬಳಕೆಯ ಅನಿಲ ಸಿಲಿಂಡರ್‌ಗೆ ರೂ.60 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ ರೂ.114 ಹೆಚ್ಚಳ ಮಾಡಿರುವ ಕ್ರಮವನ್ನು ಎಸ್‌ಯುಸಿಐ(ಸಿ) ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶ್ರೀಮತಿ ಕೆ. ಉಮಾ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಅಮೆರಿಕಾ–ಇಸ್ರೇಲ್ ರಾಷ್ಟ್ರಗಳು ಇರಾನ್ ಮೇಲೆ ದಾಳಿ ನಡೆಸಿದ ಪರಿಣಾಮವಾಗಿ ಭಾರತಕ್ಕೆ ಕಚ್ಚಾತೈಲ ಮತ್ತು ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಿ ಈ ಬೆಲೆ ಏರಿಕೆಯನ್ನು ಸಮರ್ಥಿಸಲಾಗುತ್ತಿದೆ. ಆದರೆ ಈ ಕುರಿತು ಕೇಂದ್ರ ಬಿಜೆಪಿ ಸರ್ಕಾರವು ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾತೈಲ ಖರೀದಿಸುತ್ತಿದ್ದಾಗ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ ಏಕೆ? ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಅಮೆರಿಕಾ ಹಾಕಿದ ಒತ್ತಡಕ್ಕೆ ಮಣಿದಿರುವುದು ಯಾರ ಹಿತಾಸಕ್ತಿಗಾಗಿ? ಇನ್ನೂ 50 ದಿನಗಳಿಗೆ ಬೇಕಾದಷ್ಟು ಕಚ್ಚಾತೈಲ ಸಂಗ್ರಹವಿದೆ ಎಂಬ ವರದಿಗಳು ಇದ್ದಾಗಲೇ ಹಳೆಯ ದರದಲ್ಲಿ ಖರೀದಿಸಿದ ತೈಲದ ಬೆಲೆ ಹೆಚ್ಚಿಸುವುದು ಯಾಕೆ ಎಂಬ ಪ್ರಶ್ನೆ ಎದುರಾಗುತ್ತದೆ.

ಈಗಾಗಲೇ ಜನರ ಜೀವನ ವೆಚ್ಚ ಭಾರೀ ಏರಿಕೆಯಾಗಿದೆ. ಆದರೆ ಅದಕ್ಕೆ ಅನುಗುಣವಾಗಿ ವೇತನ ಹೆಚ್ಚಳವಾಗಿಲ್ಲ, ಉದ್ಯೋಗ ಸೃಷ್ಟಿಯೂ ಆಗಿಲ್ಲ. ದುಡಿಯುವ ಜನರು ಸಾಲ ಮಾಡಿಕೊಂಡೇ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಇಂಧನ ದರ ಏರಿಕೆ ಮತ್ತಷ್ಟು ಹಣದುಬ್ಬರಕ್ಕೆ ಕಾರಣವಾಗಲಿದೆ.

ಯುದ್ಧದ ಸಂಕಷ್ಟದ ಸಂದರ್ಭದಲ್ಲಿಯೂ ಜನರನ್ನು ದೋಚುವ ಕೇಂದ್ರ ಸರ್ಕಾರದ ಈ ಅಮಾನವೀಯ ಧೋರಣೆಯನ್ನು ಎಸ್‌ಯುಸಿಐ(ಸಿ) ಕಟುವಾಗಿ ವಿರೋಧಿಸುತ್ತದೆ. ತಕ್ಷಣವೇ ಅನಿಲ ಸಿಲಿಂಡರ್ ದರ ಏರಿಕೆಯನ್ನು ವಾಪಸ್ ಪಡೆಯಬೇಕು. ಜೊತೆಗೆ ಕಚ್ಚಾತೈಲ ಖರೀದಿಗೆ ಪರ್ಯಾಯ ಮೂಲಗಳನ್ನು ಕಂಡುಹಿಡಿಯುವಲ್ಲಿ ದೇಶದ ಸಾರ್ವಭೌಮತ್ವವನ್ನು ಸರ್ಕಾರ ಕಾಪಾಡಬೇಕು ಎಂದು ಒತ್ತಾಯಿಸಲಾಗಿದೆ.

ವಿದ್ಯಾರ್ಥಿಗಳು ಹೊಸತನವನ್ನು ಕಲಿಯಬೇಕುಸದಾಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು: ಎಸ್.ವಿ ಪಾಟೀಲ್ ಗುಂಡೂರು

Students should learn new things and always be active in activities: S.V. Patil Gundur

ವಿದ್ಯಾರ್ಥಿಗಳು ಹೊಸತನವನ್ನು ಕಲಿಯಬೇಕು ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು: ಎಸ್.ವಿ ಪಾಟೀಲ್ ಗುಂಡೂರು

ಗಂಗಾವತಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಕವಿಗಳು, ರಂಗ ನಿರ್ದೇಶಕರು, ಚಲನಚಿತ್ರ ನಿರ್ದೇಶಕರು

ಆದ ಶ್ರೀ ಎಸ್.ವಿ. ಪಾಟೀಲ್ ಗುಂಡೂರು ರವರು ಮಾರ್ಚ್-6 ರಂದು ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿರುವ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಶ್ರೀ ರಾಜರಾಜೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಸಾಪಟ್ಟಣ ಶಾಲೆಯಲ್ಲಿ ಏಳನೇ ಮತ್ತು ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾ ಡಿದ ಅವರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯು 2002 ರಲ್ಲಿ ಸರ್ವ ಶಿಕ್ಷಣ ಅಭಿಯಾನದ ಸಹಾಯ ಅನುದಾನದ ಅಡಿಯಲ್ಲಿ ಕುಗ್ರಾಮದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಕಲಿಕಾ ಕೇಂದ್ರಗಳನ್ನು ಆರಂಭಿಸಿದ ಶ್ರೇಯಸ್ಸು ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ.ಸಣ್ಣೆಪ್ಪರವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು. ಎಸ್.ವಿ. ಪಾಟೀಲ್ ಗುಂಡೂರು ರವರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಹೊಸತನ್ನು ಕಲಿಯಬೇಕು ಎನ್ನುವ ದೆಸೆಯಲ್ಲಿ ತಾವು ಪ್ರೌಢ ಶಿಕ್ಷಣವನ್ನು ಪಡೆಯುತ್ತಿರುವಾಗ ‘ಯಕ್ಷ ಪ್ರಶ್ನೆ” ಎನ್ನುವ ಪಾಠವನ್ನು ನಾಟಕವನ್ನಾಗಿ ಬರೆದು ನಿರ್ದೇಶಿಸಿ, ಅಭಿನಯಿಸಿದ ಪ್ರಸಂಗವನ್ನು ಮಕ್ಕಳ ಮುಂದೆ ಸ್ಮರಿಸಿಕೊಂಡರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದಲ್ಲಿ ಹೊಸತನವನ್ನು ಕಲಿಯಬೇಕು, ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರಬೇಕು, ಗುರು ಹಿರಿಯರಿಗೆ, ಗೌರವ ನೀಡಬೇಕು, ಹೆತ್ತ ತಂದೆ ತಾಯಿಗಳಿಗೆ ಗೌರವ ಕೊಡುವುದಷ್ಟೇ ಅಲ್ಲ ಅವರನ್ನು ಗೌರವದಿಂದ ನೋಡಿಕೊಳ್ಳುವುದು ಆಗಿದೆ. ಇಂದಿನ ದೃಶ್ಯ ಮಾಧ್ಯಮ ಡಿಜಿಟಲ್ ಮಾಧ್ಯಮದಿಂದ ಅವಶ್ಯವಾದುದನ್ನು ಬಳಸಿಕೊಂಡು ಪ್ರಗತಿಯಡೆಗೆ ಮುನ್ನಡೆಯಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಈ ಸಮಾರಂಭದಲ್ಲಿ ಎಸ್.ವಿ. ಪಾಟೀ ಲ್ ಗುಂಡೂರು ಇವರನ್ನು ಸಂಸ್ಥೆವತಿಯಿಂದ ಸನ್ಮಾನಿಸಲಾಯಿತು

ಈ ಶುಭ ಸಮಾರಂಭದಲ್ಲಿ ಅಧ್ಯಕ್ಷರಾದ ಸಣ್ಣೆಪ್ಪ ವಿಠಲಾಪುರ, ಕಾರ್ಯದರ್ಶಿಗಳಾದ ರುದ್ರೇಶ್ ಡ್ಯಾಗಿ, ಶಾಲೆಯ ಮುಖ್ಯಗುರು ಗಳಾದ ನಿಂಗಪ್ಪ ಗುಂಡೂರು, ಹಿರಿಯ ಶಿಕ್ಷಕರಾದ ಪ್ರವೀಣ್ ಕುಮಾರ್, ಶಾಲಾ ಸಿಬ್ಬಂದಿ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು

ಶಿಕ್ಷಕರಾದ ಮಹಮ್ಮದ್ ಹನೀಫ್ ಸ್ವಾಗತಿಸಿದರು, ನಾಗಭೂಷಣ ನಿರೂಪಿಸಿದರು, ಪ್ರವೀಣಕುಮಾರ್ ವಂದಿಸಿದರು.

ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಪ್ರದಾನ
Ramesh Balutagi awarded PhD degree

ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಪ್ರದಾನ

ಕಾರಟಗಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದಿಂದ ಕಾರಟಗಿಯ ನಿವಾಸಿ, ಉಪನ್ಯಾಸಕ ರಮೇಶ್ ಬಳುಟಗಿ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.

ಪ್ರಸ್ತುತ ಬಳ್ಳಾರಿ ವೀವಿ ಸಂಘ (ರಿ)ದ ವಿಜಯನಗರ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿರುವ ರಮೇಶ ಅವರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅವಿನಾಶ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ “ಫಿಸಿಕ-ಕೆಮಿಕಲ್ ಅನಾಲಿಸಿಸ್ ಅಂಡ್ ಥೆಇರ್ ಕಂಪೆರಟಿವೆ ಸ್ಟಡೀಸ್ ಆ ಗ್ರೌಂಡ್ವಾಟರ್ ಇನ್ ಸಂ ಸೆಲೆಕ್ಟೆಡ್ ತಾಲುಕ್ಸ್ ಆ ಕೊಪ್ಪಲ್ ಅಂಡ್ ಬಳ್ಳಾರಿ ಡಿಸ್ಟ್ರಿಕ್ಟ್ಸ್, ಕರ್ನಾಟಕ, ಇಂಡಿಯಾ” ಎಂಬ ಶೀರ್ಷಿಕೆಯಡಿ ಮಹಾಪ್ರಬಂಧವನ್ನು ಮಂಡಿಸಿದ್ದರು.

ಕಾಂಗ್ರೆಸ್ ಸರ್ಕಾರವು ರೈತರ ಪರ ಉಡುತೋರೆ ಜಲಾಶಯಕ್ಕೆ 490 ಕೋಟಿ ಬಜೆಟ್ ಮಂಡನೆ , ಮಾಜಿ ಶಾಸಕ ಆರ್ ನರೇಂದ್ರ ಸಂತೋಷ.
If the Congress government is pro-farmers, it will present a budget of 490 crores for the reservoir, former MLA R Narendra Santhosh.

ಕಾಂಗ್ರೆಸ್ ಸರ್ಕಾರವು ರೈತರ ಪರ ಉಡುತೋರೆ ಜಲಾಶಯಕ್ಕೆ 490 ಕೋಟಿ ಬಜೆಟ್ ಮಂಡನೆ , ಮಾಜಿ ಶಾಸಕ ಆರ್ ನರೇಂದ್ರ ಸಂತೋಷ.


ವರದಿ: ಬಂಗಾರಪ್ಪ .ಸಿ.‌
ಹನೂರು :ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದನಂತರ ಗ್ಯಾರಂಟಿ ಯೋಜನೆಯ ಮೂಲಕ ಬಡವರ ಪರವಾಗಿದೆ ಎಂಬುದನ್ನು ಜನತೆಗೆ ತೋರಿಸಿಕೊಟ್ಟಿದೆ , ಹಾಗೇಯೆ ಏತ ನೀರಾವರಿ ಯೋಜನೆಯಿಂದ ರೈತರ ಜಮಿನುಗಳಿಗೆ ನೀರಿನ ಸಮಸ್ಯೆಗಳಿಗೆ ಇತಿ ಶ್ರೀ ಹಾಡಿದೆ ಎಂದರು ತಪ್ಪಾಗಲಾರದು ಎಂದು ಮಾಜಿ ಶಾಸಕ ಆರ್ ನರೇಂದ್ರ ರವರು ತಿಳಿಸಿದರು.
ಹನೂರು ಪಟ್ಟಣದಲ್ಲಿ ಪತ್ರಕರ್ತರನ್ನೂದ್ದೇಶಿಸಿ ಮಾತನಾಡಿದ ಅವರು ನಮ್ಮ ಕ್ಷೇತ್ರದ ಭಾಗದ
ಉಡುತೊರೆಹಳ್ಳ ಜಲಾಶಯ ಏತ ನೀರಾವರಿ ಯೋಜನೆ ಯನ್ನು ಇಂದಿನ ಬಜೆಟ್‌ನಲ್ಲಿ ನಮ್ಮ ಸರಕಾರ ಘೋ ಷಣೆ ಮಾಡಿರುವುದರಿಂದ ಈ ಭಾಗದಲ್ಲಿ ಶಾಶ್ವತವಾಗಿ ರೈತರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ,

ಕ್ಷೇತ್ರ ವ್ಯಾಪ್ತಿಯ ಪ್ರಮುಖ ಜಲಾಶಯಗಳಿಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯನ್ನು ಹಲವಾರು ವರ್ಷಗಳಿಂದ ನಮ್ಮ ತಂದೆಯವರಾದಿಯಾಗಿ ನಾನು ಸಹ ಶ್ರಮವಹಿಸಿ ಡಿಪಿಆರ್ ಸಿದ್ಧಪಡಿಸಿ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಕಳೆದ ಬಾರಿ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಯಾವುದೇ ಅನುದಾನ ನೀಡಲಿಲ್ಲ ಇ ದಿನದ ಬಜೆಟ್‌ನಲ್ಲಿ ಅಂದಾಜು ಮೊತ್ತ 490 ಕೋಟಿ ರೂಗಳ ವೆಚ್ಚದ ಉಡುತೊರೆಹಳ್ಳ ಜಲಾಶಯ ಏತ ನೀರಾವರಿ ಯೋಜನೆಯಿಂದ ಸುಮಾರು 15 ಸಾವಿರ ಎಕರೆ ಪ್ರದೇಶದ ರೈತರಿಗೆ ಅನುಕೂಲವಾಗಲಿದೆ ಎಂದರು.

ಕೆಶಿಪ್ ಯೋಜನೆಯಡಿ ಮೊದಲ ಹಂತದಲ್ಲಿ ರಸ್ತೆ ಅಭಿವೃದ್ಧಿಪಡಿಸಲು 108 ಕೋಟಿ ರೂ ಗಳ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ, ಕಳೆದ ಬಾರಿಯೇ ಹನೂರು ತಾಲ್ಲೂಕು ಕೇಂದ್ರದಿಂದ ರಾಮಾಪುರ ಮಾರ್ಗವಾಗಿ ಪಾಲಾರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಕೆ ಶಿಪ್ ಯೋಜನೆ ಘೋಷಣೆಯಾಗಿದೆ, ನಂತರ ಹಣ ಬಿಡುಗಡೆ ಯಾಗಿರಲಿಲ್ಲ, ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಕಾಮಗಾರಿಗಳನ್ನು ನಮ್ಮ ಸರ್ಕಾರವು ಮಾಡುತ್ತದೆ ಎಂದು ತಿಳಿಸಿದರು. ‌