Breaking News

ಗಡ್ಡಿ ಯಲ್ಲಿ ಉಚಿತವಾಗಿ ಅಯ್ಯಾಚಾರ ಮತ್ತು ಶಿವ ದೀಕ್ಷೇ ಯನ್ನು ಹಮ್ಮಿಕೊಳ್ಳಲಾಯಿತು

Ddharma Sri Ajata Appaji’s holy shrine Sri Kshetra Gaddi was offered free Ayyachar and Shiva Deekshe.

ಜಾಹೀರಾತು
IMG 20240429 WA0237 300x145

ಗಂಗಾವತಿ.29  ;ಗಂಗಾವತಿ ಸಮೀಪದ ಗಡ್ಡಿ ಗ್ರಾಮದ ಸದ್ದರ್ಮ   ಶ್ರೀ ಅಜಾತ ಅಪ್ಪಾಜಿಯವರ ಪವಿತ್ರ ಪುಣ್ಯಾಶ್ರಮ ಶ್ರೀ ಕ್ಷೇತ್ರ ಗಡ್ಡಿ ಯಲ್ಲಿ ಉಚಿತವಾಗಿ ಅಯ್ಯಾಚಾರ ಮತ್ತು ಶಿವ ದೀಕ್ಷೇ ಯನ್ನು ಹಮ್ಮಿಕೊಳ್ಳಲಾಯಿತು ಪರಮ ಪೂಜ್ಯ ಶ್ರೀ ಸಂಗಮೇಶ್ವರ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಷ. ಬ್ರ. 108 ಶ್ರೀ ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಅಂಕುಷದೊಡ್ಡಿ ಪುಜ್ಯರಿಂದ ಜಂಗಮ ವಟುಗಳಿಗೆ ಅಯ್ಯಾಚಾರ ಮತ್ತು ಭಕ್ತ ಗಣದ ಎಲ್ಲಾ ಸಮಾಜದ ಸದ್ಬಕ್ತರಿಗೆ ಶಿವ ದೀಕ್ಷೆ ನಡೆಯಿತು ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ನಾಗಭೂಷಣ ದೇವರು ಸದಾನಂದ ಶಿವಯೋಗಿ ಮಠ ಗುಳೇದಗುಡ್ಡ ಇವರು ಸಾನಿಧ್ಯವನ್ನು ವಹಿಸಿ ಪಿಂಡ ಮಯ ಶರೀರವನ್ನು ಮಂತ್ರಮಯ ಶರೀರವನ್ನಾಗಿಸಲು ಶಿವ ದೀಕ್ಷಾ ಮತ್ತು ಅಯ್ಯಾಚಾರ ದಂತಹ ಕಾರ್ಯಕ್ರಮಗಳು ಇಂದಿನ ದಿನದಲ್ಲಿ ಸಂಸ್ಕಾರವನ್ನುಂಟು ಮಾಡುವ0ತಹ ಮಹತ್ ಕಾರ್ಯವಾಗಿದೆ ಶ್ರೀಮಠದಿಂದ ಅನೇಕ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳು ನಡೆದುಕೊಂಡು ಬಂದಿದ್ದು ಪೂಜ್ಯರು ಇಂತಹ ಬರಗಾಲದ ದಿನಗಳಲ್ಲೂ ಕೂಡ ಭಿಕ್ಷಾಟನೆ ಮಾಡಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ ವಸತಿಯ ಜೊತೆ ಜ್ಞಾನ ದಾಸೋಹವನ್ನು ನೀಡುವುದರ ಮೂಲಕ ತ್ರಿವಿಧ ದಾಸೋಹವನ್ನು ನಡೆಸುತ್ತಿರುವ ಪೂಜ್ಯರ ಕಾರ್ಯ ಶ್ಲಾಗನಿಯ ಎಂದು ಅಭಿಪ್ರಾಯಪಟ್ಟರು ಈ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಸ್ವಾಮಿ ಗಡ್ಡಿಮಠ ಶ್ರೀ ಶರೀಫ ಶಿವಯೋಗಿ ಓಜನಹಳ್ಳಿ ಹುಟ್ಟು ಶಾಸ್ತ್ರಿ ಮತ್ತು ಜಂಗಮ ಸಮಾಜದ ಗಣ್ಯರು ಹಾಗೂ ವಟು ಸಾಧಕರು ಮತ್ತು ಸದ್ಭಕ್ತರು ಮತ್ತಿತರರು ಉಪಸ್ಥಿತರಿದ್ದರು

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.