Breaking News

ನಾಗಮಂಗಲದಐತಿಹಾಸಿಕ ಮಹತ್ವವುಳ್ಳಂತಹ ಹಂಪಿ ಅರಸನ ಕೊಳದಲ್ಲಿ ಸಹಸ್ರಾರು ಸಂಖ್ಯೆಯ ಮೀನುಗಳು ಸಾಯುತ್ತವೆ.

ಹವಾಮಾನದ ವೈಪರಿಚಯದಿಂದಾಗಿ ನಾಗಮಂಗಲದ ಐತಿಹಾಸಿಕ ಮಹತ್ವವುಳ್ಳಂತಹ ಹಂಪಿ ಅರಸನ ಕೊಳದಲ್ಲಿ ಸಹಸ್ರಾರು ಸಂಖ್ಯೆಯ ಮೀನುಗಳು ಸತ್ತಿರುವುದು ಕಾಣ ಬರುತ್ತಿದೆ ಕಳೆದ ನಾಲ್ಕು ದಿನಗಳಿಂದ ಕೊಳದಲ್ಲಿ ಬೆಳೆದಿದ್ದಂತಹ ಮೀನುಗಳೆಲ್ಲವೂ ದಿನವೂ ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಿದ್ದು , ಈ ಐತಿಹಾಸಿಕ ಮಹತ್ವವಾದ ಹಂಪೆಯ ಅರಸನ ಕೊಳ ದುರ್ವಾಸನೆಯಿಂದ ಕೂಡಿದೆ. ಇದಕ್ಕೆ ಪ್ರಕೃತಿಯಲ್ಲಿ ಆದಂತಹ ಹವಾಮಾನದ ವೈಪರಿತ್ಯ ಕಾರಣವೆಂದು ಎಲ್ಲರೂ ಭಾವಿಸಿದ್ದಾರೆ . ಕಳೆದ 15 20 ದಿನಗಳ ಹಿಂದೆ ಈ ಕೊಳದ ಪಕ್ಕದಲ್ಲಿ ಇರುವಂತಹ ಹಿರಿಕೆರೆಯಲ್ಲಿ ಇದೇ ರೀತಿ ಮೀನುಗಳು ಸತ್ತು ತೇಲುತ್ತಿದ್ದವು ,ಹಾಗೆಯೇ ಮಂಡ್ಯ ರಸ್ತೆಯಲ್ಲಿರುವ ಅಮ್ಮನ ಕಟ್ಟೆಯಲ್ಲೂ ಸಹ ಮೀನುಗಳು ಸತ್ತು ತೇಲುತ್ತಿದ್ದವು,

ಜಾಹೀರಾತು

ಆದರೆ ಕೊಳದಲ್ಲಿ ಮಾತ್ರ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ಸಾಯುತ್ತಿದ್ದು ಕೆಟ್ಟ ವಾಸನೆ ಸುತ್ತಲೂ ಹರಡುತ್ತಿದೆ . ಇದಕ್ಕೆ ಸಂಬಂಧಿಸಿದಂತೆ ಸತ್ತ ಮೀನುಗಳನ್ನೆಲ್ಲ ಆಚೆಗೆ ಎಸೆಯುತಿದ್ದರೂ ಸಹ ಮತ್ತೆ ಮತ್ತೆ ಸಾಯುತ್ತಿರುವ ಮೀನುಗಳ ಸಂಖ್ಯೆ ಹೆಚ್ಚಾಗುತ್ತಿದೆ . ಇದಕ್ಕೆ ಸಂಬಂಧಿಸಿದಂತೆ ನಾಗಮಂಗಲ ಪುರಸಭೆ ಹಾಗೂ ಮೀನುಗಾರಿಕೆ ಇಲಾಖೆಯವರು ಗಮನಹರಿಸಿ ನೀರಿನಲ್ಲಿ ಆಗಿರುವಂತಹ ಬಿಸಿಲ ತಾಪದ ವ್ಯತ್ಯಯವನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಕೋರಿದ್ದಾರೆ . ಐತಿಹಾಸಿಕ ಮಹತ್ವವುಳ್ಳಂತಹ ಈ ಹಂಪಿ ಅರಸನ ಕೊಳದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಮೀನುಗಳು ಸಾಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಗಮನ ಹರಿಸುವಂತೆ ಹಾಗೂ ಇದರ ಕೆಟ್ಟ ವಾಸನೆಯಿಂದ ಜನಸಾಮಾನ್ಯರಿಗೆ ಆಗಬಹುದಾದ ರೋಗರುಜನೆಗಳನ್ನ ತಡೆಯಲು ಕ್ರಮಯವಹಿಸುವಂತೆ ನಾಗರಿಕರು ಕೋರಿರುತ್ತಾರೆ. ಏಕೆಂದರೆ ಈ ಕೊಳವು ಹಬ್ಬ ಹರಿದಿನಗಳು ದೇವಸ್ಥಾನದ ಪೂಜೆ ಕಾರ್ಯಗಳಿಗೆ ಪವಿತ್ರ ಗಂಗೆಯಾಗಿ ಕೊಂಡೊಯ್ಯುತ್ತಿದ್ದು ಇದರ ಬಳಕೆಗೆ ಜನರಿಗೆ ತೊಂದರೆಯಾಗುತ್ತದೆ. ಮದುವೆ ಕಾರ್ಯಗಳಲ್ಲಿ ಇಲ್ಲಿನ ನೀರನ್ನು ಎಲ್ಲರೂ ಅತಿ ಹೆಚ್ಚಾಗಿ ಬೆಳೆಸುತ್ತಿದ್ದರು.

About Mallikarjun

Check Also

ಸೆ. 2 ಮತ್ತು 3 ರಂದು ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆ: ನಿಷೇಧಾಜ್ಞೆ ಜಾರಿ

Exams for Group C posts of various departments on Sept. 2 and 3: Prohibitory order …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.