Breaking News

ನವಲಿ ಮೌನೇಶ್ವರ ದೇವಸ್ಥಾನಜಿರ್ಣೋದ್ದಾರಕ್ಕೆ 50 ಸಾವಿರ ದೇಣಿಗೆ


ನವಲಿ: ಗ್ರಾಮದ ಶತವರ್ಷಗಳ ಹಳೆಯದಾದ ಮೌನೇಶ್ವರ ದೇವಸ್ಥಾನ ಜಿರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ಕಾಂತಪ್ಪ ಕೆ, ನಿಂಗಪ್ಪ ಅವರು ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷರಾದ ಲಕ್ಷ್ಮಣ ಪತ್ತಾರ ಅವರಿಗೆ 50 ಸಾವಿರ ರೂಪಾಯಿಗಳ ಡಿಡಿಯನ್ನು ನೀಡಿದರು. ನಂತರ ಮಾತನಾಡಿದ ಕಾಂತಪ್ಪರವರು, ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಪುರಾತನ ಹಾಗೂ ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡುತ್ತಾ ಬಂದಿದೆ ನವಲಿ ಹೊಬಳಿ ವ್ಯಾಪ್ತೀಯ ಕೆರೆಗಳ ನಿರ್ಮಾಣ ಹಾಗೂ ದೇವಾಲಯಗಳ ಅಭಿವೃದ್ದಿಗೆ ಪೂಜ್ಯ ವಿರೇಂದ್ರ ಹೆಗ್ಡೆಯವರು ಸಹಾಯ ನೀಡಿದ್ದಾರೆ ಎಂದರು. ಕಾರಟಗಿ ತಾಲೂಕ ವಲಯದ ಮೇಲ್ವಿಚಾರಕ ಸಂಜು ಗೌಡರ್ ನವಲಿ ವಲಯದ ರತ್ನಮ್ಮ ತಳವಾರ , ನವಲಿ ವೀರಭದ್ರೇಶ್ವರ ಸಂಸ್ಥೆಯ ಮುಖ್ಯಸ್ಥ ಶಿವಯ್ಯ ಸ್ವಾಮಿ ನವಲಿ, ವಿಶ್ವಕರ್ಮ ಟ್ರಸ್ಟ್ನ ದೇಂದ್ರಪ್ಪ ಬಡಿಗೇರ, ಪುರುಶೋತ್ತಮ ಪತ್ತಾರ, ಮೌನೇಶ ಬಡಿಗೆರ ಕಾಳಪ್ಪ ಕಮ್ಮಾರ, ಮಂಜುನಾಥ ಈಚನಾಳ, ಗ್ರಾಮದ ಹಿರಿಯರು ಮುಖ್ಯಸ್ಥರು ಇದ್ದರು.

About Mallikarjun

Check Also

ಆಸ್ತಿ ತೆರಿಗೆ ಕಡಿಮೆ ಮಾಡಲುವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಗಳ ಮನವಿ.

ಗಂಗಾವತಿ:ಕಲ್ಯಾಣ ಕರ್ನಾಟಕ ಭಾಗಕ್ಕೆ ನೂತನ ಕೈಗಾರಿಕಾ ನೀತಿ ಜಾರಿ ಮಾಡಲು ಮತ್ತು ಆಸ್ತಿ ತೆರಿಗೆ ಕಡಿಮೆ ಮಾಡಲು ಕಲಬುರ್ಗಿ ವಿಭಾಗ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.