Breaking News

ಸರಕಾರ ನಾಮ ನಿರ್ದೇಶಕರಾಗಿ ಭೀಮಗೌಡ ನಾಯಿಕ ಆಯ್ಕೆ

Bhim Gowda Naika was selected as the director of the government

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಕೃಷಿ ಪತ್ತಿನ ವಿವಿದೊದ್ದೇಶಗಳ ಸಹಕಾರಿ ಸಂಘಕ್ಕೆ ಕಾಗವಾಡ ಮತಕ್ಷೇತ್ರದ ಶಾಸಕರಾದ ರಾಜು ಕಾಗೆ, ಅಥಣಿ ಮತಕ್ಷೇತ್ರದ ಲಕ್ಷ್ಮಣ ಸವದಿ, ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ರಮೇಶ ಕತ್ತಿ ಅವರ ಆದೇಶದ ಮೇರೆಗೆ ಸರಕಾರದ ನಾಮ ನಿರ್ದೇಶಕರಾಗಿ ಆಯ್ಕೆ ಮಾಡಿ ಆದೇಶ ಮಾಡಿದರಿಂದ ಸಂಘದ ಕಾರ್ಯದರ್ಶಿ ಅಣ್ಣಾಸಾಬ ಮೆಂಡಿಗೇರಿ ಅವರಿಗೆ ಆದೇಶ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ನಿಜಗುಣಿ ಮಗದುಮ್ಮ, ಉಪಾಧ್ಯಕ್ಷ ಅಶೋಕ ಪೂಜಾರಿ, ಸದಸ್ಯರಾದ ಮನೋಹರ ಪೂಜಾರಿ, ರಾವಸಾಬ ಚೌಗಲಾ, ಅರ್ಜುನ ಇಬ್ರಾಹಿಂಪೂರ,ವಿಠ್ಠಲ ಅವಳೆ,ಕಾಂಗ್ರೆಸ್ ಪಕ್ಷದ ಮುಖಂಡರಾದ ವಿನಾಯಕ ಬಾಗಡಿ,ಬಸಗೌಡಾ ನಾಯಿಕ,ಪ್ರವೀಣ ನಾಯಿಕ, ಸಿದರಾಯ ತೋಡಕರ, ಉಮೇಶ ಪಾಟೀಲ, ಅಸ್ಲಾಂ ಮುಲ್ಲಾ,ಸುರೇಶ ನಾಯಿಕ, ಸಿದ್ದಗೌಡ ಪಾಟೀಲ, ಸಂತೋಷ ನಾಯಿಕ, ತಾತ್ಯಾಸಾಬ ನಾಯಿಕ, ಮಹೇಶ ಅವಟಿ, ರಮೇಶ ನಾಯಿಕ, ಶಂಕರ ನಾಯಿಕ,ರಾಕೇಶ ಪಾಟೀಲ, ಬಸಗೌಡ ಪಾಟೀಲ, ರವಿ ಪಾಟೀಲ ಶಿವಾನಂದ ಮಗದುಮ್ಮ,ಪರಗೊಂಡ ಮುದೋಳ, ಶರದ ಶೆಟ್ಟಿ,ಸಿದ್ದು ಪಾಟೀಲ,ರವಸಾಬ ಮುದೋಳ ಶಿವಾನಂದ ಅವಟಿ, ಸಾತಗೊಂಡ ಪಾಟೀಲ, ಭರಮು ಖಟಾವಿ,ವಿಠ್ಠಲ ಭಂಡಾರೆ,ರಾಮು ಅವಟಿ, ಅಣ್ಣಪ್ಪಾ ಚೌಗಲಾ ಮುಂತಾದವರು ಉಪಸ್ಥಿತರಿದ್ದರು.

About Mallikarjun

Check Also

ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು : ಡಾ.ಲಿಂಗರಾಜ್‌ಸರ್ಕಾರಿ ಉಪವಿಭಾಗಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ಗಂಗಾವತಿ,14:ವೈದ್ಯರ ಭಾರವನ್ನು ಕಡಿಮೆ ಮಾಡುವವರು ಶುಶ್ರೂಷಕಿಯರು, ಅವರಿಗೆ ಗೌರವ ಸಲ್ಲಿಸಲೆಂದೇ ಪ್ರತಿ ವರ್ಷ ಮೇ.12 ರಂದು ಅಂತಾರಾಷ್ಟ್ರೀಯ ಶುಶ್ರೂಷಕಿಯರ ದಿನವನ್ನು …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.