
Srijagadguru Gurusiddheshwar Brihanmath is his birth anniversary


ಅಕ್ಕಲಕೋಟಿಯ ಶಿವಯೋಗಿ ಶ್ರೀ ರೇವಣಸಿದ್ಧ ಶಿವಶರಣರ ಧಾರ್ಮಿಕ ಸ್ವಾತಂತ್ರ್ಯದ ಹೋರಾಟದ ಫಲವಾಗಿ ಪ್ರತಿಷ್ಠಾಪಿತ ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಬೃಹನ್ಮಠವು ಅವರ ಜಯಂತಿಯನ್ನು ಶ್ರೀ ಮಠದ ಕಾರ್ತಿಕೋತ್ಸವವಾಗಿ 1937 ರಿಂದ ಆಚರಿಸುತ್ತ ಬಂದಿದೆ.
ಶರಣ ಸಂಗಮ ಸಮಾರಂಭ ಸಂಪಣ್ಣಗೊಂಡ 6 ನೇ ದಿನ ಮಾರ್ಗೇಶ್ವರಿ ಬಹುಳ ಚತುರ್ದಸಿ ದಿನಾಂಕ 10-1-2024 ಬುಧವಾರ ಸಂಜೆ 6 ಗಂಟೆಗೆ ತೊಟ್ಟಿಲೋತ್ಸವದೊಂದಿಗೆ ಜಯಂತಿ ಮಹೋತ್ಸವವು ಜರುಗುತ್ತದೆ.
ಭಜನೆ, ಉಪನ್ಯಾಸ, ಸತ್ಕಾರ ಇತ್ಯಾದಿ ಕಾರ್ಯಕ್ರಮಗಳಲ್ಲದೆ ಶರಣ ಸಂಗಮ ಸಮಾರಂಭ ಯಶಸ್ವಿ ಮಾಡಿದ ಸ್ವಾಗತ ಸಮಿತಿಯವರಿಗೆ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಮಹಾಪ್ರಸಾದವಿದೆ ಆದ್ದರಿಂದ ಎಲ್ಲರೂ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಮಾಡಿ ಪ್ರಸಾದ ಸ್ವೀಕರಿಸಬೇಕಾಗಿ ಕೋರಲಾಗಿದೆ.ಎಂದು
ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಬೃಹನ್ಮಠ , ಪಟ್ಟಸಾಲಿ ನೇಕಾರ ಗುರುಪೀಠ ಗುಳೇದಗುಡ್ಡ. ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
