ಸುಕ್ಷೇತ್ರನಂದಿಹಾಳಮಠ ಪರಮಪೂಜ್ಯ ಶ್ರೀ ಲಿಂ. ಶರಣ ಹನುಮೇಶ ತಾತನವರು ೧೫ ನೇ ವರ್ಷದ ಪುಣ್ಯತಿಥಿ”

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Sukshetra Nandihala Math Parampujya Shri Lim. 15th Year Punyatithi of Sharan Hanumesh Grandfather”

ಜಾಹೀರಾತು

ಲಿಂಗೈಕ್ಯ ಶರಣ ಹನುಮೇಶ ತಾತನವರ ಕೃತ ಗದ್ದುಗೆ ಪೂಜೆ ಕಾರ್ಯಕ್ರಮ

ಈಗಿರುವ ಪರಮಪೂಜ್ಯ ಶ್ರೀ ಜಯೇಂದ್ರ ತಾತಾ ಅವರು ನೇತೃತ್ವದಲ್ಲಿ

೨೭ & ೨೮ ಎರಡು ದಿನಗಳ ಕಾರ್ಯಕ್ರಮ ಜರುಗಲಿವೆ.”

ಮುದಗಲ್ : ಸಮೀಪದ ನಂದಿಹಾಳ ಗ್ರಾಮದ ಪರಮಪೂಜ್ಯ ಶ್ರೀ ಲಿಂಗೈಕ್ಯ ಶರಣ ಹನುಮೇಶ ತಾತನವರ ೧೫ ನೇ ವರ್ಷದ ಪುಣ್ಯತಿಥಿ ಅಂಗವಾಗಿ
ಶ್ರೀಮನೃಪ ಶಾಲಿವಾಹನ ಶಕೆ ೧೯೪೫ನೇ ಶುಭಕೃತನಾಮ ಸಂವತ್ಸರ, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಿನಾಂಕ ೨೭-೧೨-೨೦೨೩ ರ ಸಂಕವಾರದಂದು ಪ್ರತಿಪದ ರಾತ್ರಿ ೮-೦೦ ಗಂಟೆಗೆ ಪರಮಪೂಜ್ಯ ಶ್ರೀ ಹನುಮೇಶ ತಾತನವರ ಕತೃ ಗದ್ದುಗೆಗೆ ರುದ್ರಾಭೀಷೇಕ ನಂತರ ತೀರ್ಥ, ಪ್ರಸಾದ ರಾತ್ರಿ ೧೦-೦೦ ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಸಲಾಗುವುದು.

ಮರುದಿನ ದಿನಾಂಕ-೨೮-೧೨-೨೦೨೩ ಸ್ವಗಳನ್ಯ ದ್ವಿತೀಯ ಪುಣ್ಯತಿಥಿ, ಬೆಳಿಗ್ಗೆ ೬-೦೦ ಗಂಟೆಗೆ ಧ್ವಜಾರೋಹಣ ನಂತರ ಬೆಳಿಗ್ಗೆ ೮-೦೦ ಗಂಟೆಗೆ ಹೋಮ ಮಾಡಲಾಗುವುದು.

ತದನಂತರ ಬೆಳಿಗ್ಗೆ ೧೦-೦೦ ಗಂಟೆಗೆ ಕತೃ ಗದ್ದುಗೆಗೆ ಹೂವಿನ ಅಲಂಕಾರ, ಪೂಜೆಯೊಂದಿಗೆ ಪರಮಪೂಜ್ಯ ಶ್ರೀ ಜಯಂದ್ರ ತಾತನವರಿಂದ ಪೂಜೆ ನಡೆಸಲಾವುದು.
ನಂತರ ಶ್ರೀಗಳಿಂದ ತೀರ್ಥ ಕೊಡಲಾಗುವುದು.

ಮಧ್ಯಾಹ್ನ ೧೨-೦೦ ಗಂಟೆಯಿಂದ ಸಕಲ ಭಕ್ತಾಧಿಗಳಿಗೆ ಆಶೀರ್ವಾದ (ವಚನ) ಮಾಡಲಾಗುವುದು. ಮಧ್ಯಾಹ್ನ ೧-೦೦ ಗಂಟೆಯಿಂದ ಪ್ರಸಾದ ನಡೆಸಲಾಗುವುದು.

ಸುಕ್ಷೇತ್ರ ನಂದಿಹಾಳಮಠದ ಪರಮಪೂಜ್ಯ ಶ್ರೀ ಹನುಮೇಶ ತಾತನವರ ಕೃತ ಗದ್ದುಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಳ್ಳಿ ಎಂದು ಪರಮಪೂಜ್ಯ ಶ್ರೀ ಜಯೇಂದ್ರ ತಾತಾ ತಿಳಿಸಿದರು.

ಉಪ್ಪಾರನಂದಿಹಾಳ ಗ್ರಾಮದ ಗುರು-ಹಿರಿಯರು, ಸಕಲ ಸದ್ಭಕ್ತ ಮಂಡಳಿ ಹಾಗೂ ರಾಜ್ಯದ ವಿವಿಧೆಡೆಗಳಲ್ಲಿ ಇರುವ ಭಕ್ತಾದಿಗಳು, ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಂದರು
ಸುಕ್ಷೇತ್ರ ನಂದಿಹಾಳಮಠದ ಪರಮಪೂಜ್ಯ ಹನುಮೇಶ ತಾತನವರ ಟ್ರಸ್ಟ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views: 0
Share This Article