
ಗಂಗಾವತಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿ ಆಚರಣೆ
300th birth anniversary of Sriyogi Narayana Yathindra celebrated at Gangavathi Nagar Traffic Police Station
ಗಂಗಾವತಿ: ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ 300ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಯೋಗಿ ನಾರಾಯಣ ಯತೀಂದ್ರರ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪ ನಮನ ಸಲ್ಲಿಸಿ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಸಂಚಾರಿ ಠಾಣೆಯ ಪಿಎಸ್ಐ ಇಸ್ಮೈಲ್ ಸಾಬ್ ಮಾತನಾಡಿ, ಶ್ರೀಯೋಗಿ ನಾರಾಯಣ ಯತೀಂದ್ರರು ಸಮಾಜಕ್ಕೆ ನೀಡಿದ ಧಾರ್ಮಿಕ ಹಾಗೂ ನೈತಿಕ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಲಿಜ ಸಮಾಜದ ಅಧ್ಯಕ್ಷ ಬಿ. ರಮೇಶ್, ಉಪಾಧ್ಯಕ್ಷ ಸೋಮನಾಥ್, ಗಂಗಾಧರ್ ಕಟ್ಟಿಮನಿ, ರಾಘವೇಂದ್ರ, ಜಯರಾಮ್ ಬಿ., ರಾಘವೇಂದ್ರ ಕಟ್ಟಿಮನಿ, ನಾಗರಾಜ್ VSSSN, ಗುರುರಾಜ್, ರಾಜು, ತಬಲಾ ನವೀನ್ ಸೇರಿದಂತೆ ಬಲಿಜ ಸಮಾಜದ ಪದಾಧಿಕಾರಿಗಳು ಹಾಗೂ ನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಶಾಂತಿಯುತ ಹಾಗೂ ಗೌರವಪೂರ್ಣ ವಾತಾವರಣದಲ್ಲಿ ನೆರವೇರಿತು.


