
Veerakumar Gadada, the state working president of the Rashtriya Sangharsh Samiti, organized a struggle to increase pensions.

ಗಂಗಾವತಿ:ಸಮೀಪದ ಮರಳಿಯ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನದ ಸಮುದಾಯ ಭವನದಲ್ಲಿ ಕೊಪ್ಪಳ ಜಿಲ್ಲೆಯ ಸಭೆ ಜರುಗಿತು.
ರಾಷ್ಟ್ರೀಯ ಸಂಘರ್ಷ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷರಾದ ವೀರಕುಮಾರಗಡಾದ ಅವರು ಪಿಂಚಣಿ ಹೆಚ್ಚು ಮಾಡಲು ಸಂಘಟಿತ ಹೋರಾಟದ ಮುಖಾಂತರ ಸಾಧ್ಯ ಎಂದು ತಿಳಿಸಿದರು, ಉಪಾಧ್ಯಕ್ಷರಾದ ಚನ್ನಬಸಯ್ಯ ಅವರು ದಿನಾಂಕ 9, 10 ಹಾಗೂ 11 ಮಾರ್ಚನಲ್ಲಿ ದೆಹಲಿಯ ಜಂತರ ಮಂತರದಲ್ಲಿ ನಡೆಯುವ ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿ ಮಾಡಬೇಕೆಂದು ಕರೆ ನೀಡಿದರು. ಮಾಹಿತಿ ಸಂಚಾಲಕರಾದ ಅನೀಲ ಇನಾಮದಾರ ಅವರು ವಾರ್ಷಿಕ ಚಂದಾ, ಅಜೀವ ಚಂದಾದಾರರಾಗಬೇಕೆಂದು ವಿನಂತಿಸಿದರು. ಇನ್ನುಳಿದ ಶಾಂತಿನಾಥ ಪಾಟೀಲ್, ಗುಂಡಪ್ಪ ತೊಂತನಾಳ, ಎಸ್. ಎಸ್. ಅಲಸುಂಡಿ, ಜಿಲ್ಲಾ ಅಧ್ಯಕ್ಷರಾದ ಮಹಮ್ಮದ್ ಶ್ಯಾಮೀದ, ಮೌನೇಶ್ ಪತ್ತಾರ ಆಗಮಿಸಿದ್ದರು.
ಸಕ್ಕರೆ ಕಾರ್ಖಾನೆಯ ನಿವೃತ್ತ ಕಾರ್ಮಿಕರು, ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು, ಸಹಕಾರಿ ಇಲಾಖೆ ಮತ್ತು ಸಾರಿಗೆ ಇಲಾಖೆಯ ನಿವೃತ್ತ ನೌಕರದಾರರು ಭಾಗವಹಿಸಿದ್ದರು.
ಕಾರ್ಯಕ್ರಮ ರಮೇಶ್ ಕುಲಕರ್ಣಿ, ಮೌನಪ್ಪ ನಾಯಕ, ವೀರಯ್ಯಸ್ವಾಮಿ, ಮುದಗಲ್ ಬಸಪ್ಪ, ಎಂ. ಹೊನ್ನಪ್ಪ, ಬಸಪ್ಪ ಉಮಲೂಟಿ, ಆಲಮಯ್ಯ, ಶಿವರಾಜ್ ಹಾಗೂ ಸುಭಾನಿ ಇವರ ಮುಂದಾಳತ್ವದಲ್ಲಿ ಯಶಸ್ವಿಯಾಗಿ ನಡೆಯಿತು ಎಂದು ಸಂಘಟಕರಾದ ಶಾಂತಿನಾಥ ಪಾಟೀಲ್ ತಿಳಿಸಿದರು.




