
ಗಣಿತ ಜ್ಞಾನಕ್ಕೆ ಸರ್ವ ಕ್ಷೇತ್ರದಲ್ಲಿ ಬೇಡಿಕೆ- ಡಾ. ಶಿವರಾಜ ಗುರಿಕಾರ
Mathematical knowledge is in demand in all fields - Dr. Shivaraj Gurikar

ಗಂಗಾವತಿ,ಫೆ, 25: ಕೃಷಿ ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ, ರಾಕೆಟ್ ತಂತ್ರಜ಼್ಞಾನ ಸೇರಿದಂತೆ ಸರ್ವ ಕ್ಷೇತ್ರಗಳಲ್ಲೂ ಗಣಿತ ಜ್ಞಾನಕ್ಕೆ ಬಹಳಷ್ಟು ಬೇಡಿಕೆ ಇದ್ದು, ವಿದ್ಯಾರ್ಥಿಗಳು ಇದರ ಅಧ್ಯಯನ, ಸದ್ಬಳಕೆಯೊಂದಿಗೆ ಕಾಲೇಜಿನ ಘನತೆ ಎತ್ತಿ ಹಿಡಿಯಬೇಕೆಂದು ಎಸ್.ಜೆ.ಎನ್.ಜಿ.ಕಾಲೇಜಿನ ಪ್ರಾಚಾರ್ಯರಾದ ಡಾ. ಶಿವರಾಜ ಗುರಿಕಾರ ಅವರು ಹೇಳಿದರು.
ನಗರದ ಎಸ್.ಕೆ.ಎನ್.ಜಿ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ ಹಾಗೂ ಗಣಿತ ವಿಭಾಗದಿಂದ ಆಯೋಜಿಸಲಾಗಿದ್ದ ಸ್ಪರ್ಧಾತ್ಮಕ ಗಣಿತ ಹಾಗೂ ಉದ್ಯೋಗಾವಕಾಶಗಳು ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್.ಕೆ.ಎನ್.ಜಿ.ಕಾಲೇಜಿಗೆ ಒಳ್ಳೆಯ ಹೆಸರಿದ್ದು, ಗ್ರಂಥಾಲಯ, ಕಂಪ್ಯೂಟರ್ ಸೇರಿದ ಬಹಳಷ್ಟು ಒಳ್ಳೆಯ ಸೌಲಭ್ಯಗಳು ಕಾಲೇಜಿನಲ್ಲಿವೆ. ಇವುಗಳ ಸದ್ಬಳಕೆ ಮಾಡಿಕೊಂಡು ಕಾಲೇಜಿನ ಘನತೆ ಹೆಚ್ಚಿಸುವಂತಹ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಇದೇ ವೇಳೆ ಕರೆ ನೀಡಿದರು.
ವಿಶೇಷ ಉಪನ್ಯಾಸರಾಗಿ ಆಗಮಿಸಿದ್ದ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ಬಿ.ಪರ್ವತಲು ಮಾತನಾಡಿ ವಿದ್ಯಾರ್ಥಿಗಳು ಸತತ ಪರಿಶ್ರಮ ಹಾಗೂ ಗುಂಪು ಚರ್ಚೆಗಳ ಮೂಲಕ ಗಣಿತ ವಿಷಯದಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಲು ತಿಳಿಸಿ, ಇಂದಿನ ದಿನಗಳಲ್ಲಿ ಗಣಿತಕ್ಕಿರುವ ಮಹತ್ವದ ಬಗ್ಗೆ ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಮುಖ್ಯಸ್ಥರಾದ ಡಾ. ಮಂಜುನಾಥ ಕೆ.ಎಸ್. ಭೌತ ಶಾಸ್ತ್ರ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಡಾ. ಅಣ್ಣೋಜಿರೆಡ್ಡಿ, ಗಣಿತ ವಿಭಾಗದ ಮುಖ್ಯಸ್ಥರಾದ ಅಶೋಕ ನಾಯಕ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ಸಹ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ನಿರೋಷಾ ಎಂ. ಸ್ವಾಗತಿಸಿದರೆ, ನೇತ್ರಾ ಸಜ್ಜನ್ ವಂದಿಸಿದರು, ಚಂದನಾ ಹಾಗೂ ಸುನಿತಾ ನಿರೂಪಿಸಿದರು.
ದಯವಿಟ್ಟು ಮೇಲ್ಕಂಡ☝️ ಸುದ್ದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ವಿನಂತಿ,
ಡಾ.ಬಸವರಾಜ್ ಎಸ್ ಗಡಾದ,
ಪತ್ರಿಕೋದ್ಯಮ ವಿಭಾಗ,
ಎಸ್.ಕೆ.ಎನ್.ಜಿ.ಕಾಲೇಜು,
ಗಂಗಾವತಿ



