
ಯುವ ಸಾಹಿತಿ ಮೈಲಾರಪ್ಪ ಬೂದಿಹಾಳರ ಬಾರೋ ಕಂದ ಶಾಲೆಗೆ ಕೃತಿ
ದಲಿತ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗೆ ಆಯ್ಕೆ.
Young writer Mailarappa Budihalara's work for Baro Kanda School has been selected for the Dalit Sahitya Parishad's National Book Award.
ಗಂಗಾವತಿ: ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಗದಗ ಕೊಡಮಾಡುವ ಪುಸ್ತಕ ಪ್ರಶಸ್ತಿ ವಿಭಾಗದಲ್ಲಿ ಮೈಲಾರಪ್ಪ ಬೂದಿಹಾಳರವರ ಮಕ್ಕಳ ಪದ್ಯಗಳ ಕೃತಿಯಾದ “ಬಾರೋ ಕಂದ ಶಾಲೆಗೆ” ಕೃತಿಯು ರಾಷ್ಟ್ರೀಯ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಅರ್ಜುನ ಗೊಳಸಂಗಿ ಹಾಗೂ ರಾಜ್ಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಲಾರಪ್ಪ ಬೂದಿಹಾಳರು ಈಗಾಗಲೇ ಸಾಹಿತ್ಯದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದು, ದಾಟಬೇಡ ಹೊಸ್ತಿಲು ಕವನ ಸಂಕಲನ, ಮುಗಿಲಹಕ್ಕಿಯ ನೆಲದ ಹಾಡು ಹನಿಗವನ ಸಂಕಲನ, ಶಿಕ್ಷಣಕ್ಕೆ ಪೂರಕವಾಗಿ ಶಿಕ್ಷಕ ರತ್ನ ಶಾಲಾ ಸುತ್ತಮುತ್ತ ಲೇಖನಗಳು ಹಾಗೂ ಮಕ್ಕಳ ಕೃತಿ ಬಾರೋ ಕಂದ ಶಾಲೆಗೆ ಮಕ್ಕಳ ಪದ್ಯಗಳು ಹೊರತಂದಿದ್ದು, ರಾಜ್ಯಮಟ್ಟದ ಹಲವಾರು ಪತ್ರಿಕೆಗಳಲ್ಲಿ ಶೈಕ್ಷಣಿಕ ಲೇಖನ, ಮಕ್ಕಳ ಕವಿತೆ, ಕಥೆಗಳು ಪ್ರಕಟವಾಗಿವೆ. ಇವರ ಬಾರೋ ಕಂದ ಶಾಲೆಗೆ ಮಕ್ಕಳ ಕೃತಿಗೆ ಈಗಾಗಲೇ ಪಂಡಿತ ಪುಟ್ಟರಾಜ ಸೇವಾ ಸಮಿತಿ ಗದಗ ಕೊಡಮಾಡುವ ಶ್ರೇಷ್ಟ ಕೃತಿ ರತ್ನ ಪ್ರಶಸ್ತಿ, ಬೆಂಗಳೂರಿನ ಚೆನ್ನಪ್ಪ ಪ್ರತಿಷ್ಠಾನದಿಂದ ದ್ವಿತೀಯ ಬಹುಮಾನ ಪ್ರಶಸ್ತಿ ದೊರಕಿದೆ. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಶ್ರಮಿಸಿದ್ದಕ್ಕಾಗಿ ಕೊಪ್ಪಳ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗ ಮಂದಿರದಲ್ಲಿ ಇದೇ ಡಿಸೆಂಬರ್ ೨೦, ೨೧ ರಂದು ೨೦೨೫ ರಂದು ನಡೆಯುವ ೧೧ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ರಾಜ್ಯ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.



