Breaking News

ತ್ರಿಪುರಾಂತ ಕೆರೆಯ ಹೆಸರು ಬದಲಾಯಿಸಲು ರಂಭಾಪುರಿ ಶ್ರೀ ಗಳ ಹೇಳಿಕೆ ಖಂಡನೆ -ಶ್ರೀಕಾಂತ ಸ್ವಾಮಿ,

Srikanth Swami condemns Rambhapuri Sri's statement on changing the name of Tripuranta Lake

Screenshot 2025 09 25 19 02 43 50 6012fa4d4ddec268fc5c7112cbb265e71815865393331190347

ಬೀದರ: ಮಹನೀಯರೇ, ಪೂಜ್ಯ ಜಗದ್ಗುರು ಶ್ರೀ ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಶಿವಾಚಾರ್ಯರು ಪುರಾತನ ಇತಿಹಾಸದಲ್ಲಿ ಹೆಸರಾದ ತ್ರಿಪುರಾಂತ ಕೆರೆಯ ಹೆಸರನ್ನು ರೇಣುಕಾಚಾರ್ಯರ ಹೆಸರಿಡಬೇಕು ಹಾಗೂ ಅಲ್ಲಿರುವ ವೃತ್ತದ ಹೆಸರಿಡುವ ಹೇಳಿಕೆ ಕುತಂತ್ರ ಭರಿತ ಮತ್ತು ಖಂಡಿಸಿ ಶ್ರೀಕಾಂತ ಸ್ವಾಮಿ,ಬೀದರ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಜಾಹೀರಾತು

ಹಲವಾರು ಶರಣರ ವಚನಗಳಲ್ಲಿ ಉಲ್ಲೇಖಗೊಂಡ ತ್ರಿಪುರಾಂತ ಕೆರೆಯ ಹೆಸರು ಬದಲಾಯಿಸಿದ್ದರೆ ಶರಣರ ಇತಿಹಾಸಕ್ಕೂ ಹಾಗೂ ಬಸವಕಲ್ಯಾಣ ನಗರಕ್ಕೂ ಅಪಚಾರ ಬಗೆದಂತೆ ಆಗುತ್ತದೆ, ಯಾವುದೇ ಕಾರಣಕ್ಕೂ ಹೆಸರು ಬದಲಾಯಿಸ ಕೂಡದು. ಇಂತಹ ವೈಮನಸ್ಸು ಹುಟ್ಟಿಸುವ ವಿಷಯವನ್ನು ಪೂಜ್ಯ ರಂಭಾಪುರಿ ಜಗದ್ಗುರುಗಳ ತಲೆಯಲ್ಲಿ ತುಂಬಿ ವೀರಶೈವ ಮತ್ತು ಲಿಂಗಾಯತರ ಮಧ್ಯ ವಿಷ ಬೀಜ ತುಂಬುವ ಕೆಲಸ ಮಾಡಿದ್ದು ಲಿಂಗಾಯತರ ತಾಳ್ಮೆಗೆ ಧಕ್ಕೆ ತಂದಿದೆ. ರಂಭಾಪುರಿ ಪೀಠದ ದಸರಾ ದರ್ಬಾರ ಯಾರು ವಿರೋಧ ಮಾಡಿಲ್ಲ ಅಂದರೆ ನಾವು ಏನು ಬೇಕಾಗಿದ್ದು ಮಾಡಬಹುದು ಎಂದು, ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳ ಬಂದು ಪೂಜ್ಯರ ಪಾದಕ್ಕೆ ಬಿದ್ದು ಆಶೀರ್ವಾದ ಪಡೆದಿದ್ದಾರೆ ಅಂದರೆ ಏನು ಬೇಕಾಗಿದ್ದು ಮಾಡಬಹುದು ಎನ್ನುವ ಮನಸ್ತಿತಿ ಜಗದ್ಗುರು ಶಿಷ್ಯರ ಅಹಂಕಾರ ಎದ್ದು ಕಾಣುತ್ತದೆ.

ಯಾವುದೇ ಕಾರಣಕ್ಕೂ ಸ್ಥಳೀಯ ಆಡಳಿತ ಮಂಡಳಿ ಮತ್ತು ಶಾಸಕರು ಈ ಪ್ರಸ್ತಾವಕ್ಕೆ ಮನ್ನಣೆ ಕೊಟ್ಟರೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ.
ಎಲ್ಲಾ ಬಸವಾದಿ ಶರಣರ ಪರ ಹಾಗೂ ಲಿಂಗಾಯತ ಧರ್ಮ ಪರ ಸಂಘಟನೆಗಳು ಎಚ್ಚೆತ್ತುಗೊಂಡು ತೀವ್ರವಾಗಿ ವಿರೋಧಿಸಿ ಪ್ರತಿಭಟನೆಗೆ ಮುಂದಾಗಬೇಕೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಶ್ರೀಕಾಂತ ಸ್ವಾಮಿ,ಬೀದರ

About Mallikarjun

Check Also

screenshot 2025 10 09 09 44 42 09 40deb401b9ffe8e1df2f1cc5ba480b12.jpg

ಭೀಮಣ್ಣ ಖಂಡ್ರೆಯವರು ಶರಣ ಸಮಾಜ ಸೇವಾ ರತ್ನ ಪ್ರಶಸ್ತಿಗೆ ಅನರ್ಹ -ಸದ್ಗುರು ಬಸವಪ್ರಭು ಸ್ವಾಮೀಜಿ 

Bhimanna Khandre is not eligible for the Sharan Samaj Seva Ratna award - Sadhguru Basavaprabhu …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.