Breaking News

ಎಲ್ ಐ ಸಿ ಸಿಬ್ಬಂದಿಯವರಿಂದ ಒಂದು ದಿನದ ಸಾರ್ವತ್ರಿಕ ಮುಷ್ಕರ

One-day general strike by LIC employees
Screenshot 2025 07 09 20 11 18 21 E307a3f9df9f380ebaf106e1dc980bb6263990543991560314


ಕೊಪ್ಪಳ: ಎಲ್ ಐ ಸಿ ಸಿಬ್ಬಂದಿಯವರಿAದ ನಗರದ ಎಲ್ ಐ ಸಿ ಕಛೇರಿ ಮುಂಭಾಗದಲ್ಲಿ ಒಂದು ದಿನದ ಸಾರ್ವತ್ರಿಕ ಮುಷ್ಕರವನ್ನು ಮಾಡಲಾಯಿತು. ಮುಷ್ಕರವನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ವಿಮಾ ನೌಕರರ ಸಂಘದ ಕಾರ್ಯದರ್ಶಿ ಕಾಂ|| ಮಲ್ಲಿಕಾರ್ಜುನ ಭೃಂಗಿ ವಿಮಾ ಉದ್ದಿಮೆಯಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಕೇಂದ್ರ ಸರಕಾರ ವಿಮಾ ಉದ್ದಿಮೆಯಲ್ಲಿ ವಿದೇಶೀ ನೇರ ಬಂಡವಾಳ ಹೆಚ್ಚು ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಮಾತನಾಡುತ್ತಾ ಎಲ್ ಐ ಸಿ ಯಲ್ಲಿ ವರ್ಗ, ೩ ಮತ್ತು ೪ ನೇಮಕಾತಿಗಾಗಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಲ್ ಯ ಸಿ ಯ ಪ್ರೀಮಿಯಮ್ ಮೇಲಿನ ಜಿಎಸ್‌ಟಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘದ ಕೊಪ್ಪಳದ ಅಧ್ಯಕ್ಷರಾದ ಕಾಂ|| ಶೇಖರಪ್ಪ, ಸದಸ್ಯರಾದ ಕಾಂ|| ರಮೇಶ,ಶ್ರೀಕಾಂತ, ಸಿದ್ದಪ್ಪ, ಸಾಗರ್, ವಂಶಿಕೃಷ್ಣ,ಜಗದೀಶ, ಚಂದ್ರಶೇಖರ, ಶ್ರೀಪಾದ, ವಿಜಯಕುಮಾರ, ಅನಂತರೆಡ್ಡಿ, ವಿನಯ, ಲಕ್ಷö್ಮಯ್ಯ, ಚಂದನ್ ,ಮಹಿಳಾ ಸಂಗಾತಿಗಳಾದ ಕಾಂ|| ಸುಧಾಬಾಯಿ, ಸುಕನ್ಯಾ, ಮಹಾಲಕ್ಷಿö್ಮ, ಭಾರತಿ, ಪುಷ್ಪಾವತಿ, ಶಿರಿಶಾ, ಇಂದುಶ್ರೀ ಹಾಜರಿದ್ದರು.

ಜಾಹೀರಾತು

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.