Breaking News

53ನೇ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ

53rd Jatra celebration and mass wedding

ಜಾಹೀರಾತು
IMG 20250211 WA0267

ಆರಾಳ ಶ್ರೀ ದಾಸೋಹ ಹಿರೇಮಠದ ಶ್ರೀ ರುದ್ರಸ್ವಾಮಿ ಶರಣರ ಅದ್ದೂರಿ ಜಾತ್ರಾ ಮಹೋತ್ಸವ,,

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಗಂಗಾವತಿ : ಗಂಗಾವತಿ ತಾಲೂಕಿನ ಆರಾಳ ಗ್ರಾಮದಲ್ಲಿ ಬುಧವಾರದಂದು ಜರುಗುವ ಶ್ರೀ ದಾಸೋಹ ಹಿರೇಮಠದ ರುದ್ರಸ್ವಾಮಿ ಶರಣರ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ದಿ.11.02.2025 ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ರುದ್ರಸ್ವಾಮಿ ಶರಣರ ಕರ್ತೃ ಗದ್ದುಗಿಗೆ ರುದ್ರಾಭಿಷೇಕ ಬೆಳಿಗ್ಗೆ 9-30 ಕ್ಕೆ ಪಲ್ಲಕ್ಕಿ ಮಹೋತ್ಸವ ಜರುಗಿತು.

ದಿ.12.02ರ ಬುಧವಾರದಂದು ಬೆಳಿಗ್ಗೆ 9 ಗಂಟೆಗೆ ಮಡಿತೇರು ನಂತರ 9.30ಗಂಟೆಗೆ ಸಾಮೂಹಿಕ ವಿವಾಹ ನಂತರ ಗಣಾರಾಧನೆ, ಪ್ರಸಾದ ವಿನಿಯೋಗ ನಡೆಯುವುದು.

ಸಾಯಂಕಾಲ 5ಗಂಟೆಗೆ ಸಾವಿರಾರು ಭಕ್ತಾಧಿಗಳ ಸಮ್ಮಖದಲ್ಲಿ ಅದ್ದೂರಿ ಮಹಾರಥೋತ್ಸವ ಜರುಗುವುದು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ನಾಡಿನ ಸಕಲ ಸದ್ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ತನು, ಮನ, ಧನದಿಂದ ಸೇವೆ ಸಲ್ಲಿಸಿ ರುದ್ರಸ್ವಾಮಿ ತಾತನವರ ಆಶಿರ್ವಾದ ಪಡೆದುಕೊಳ್ಳಬೇಕೆಂದು ಶ್ರೀ ಗುರು ರುದ್ರಸ್ವಾಮಿ ದೇವಸ್ಥಾನ ಸೇವಾ ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.