Breaking News

ಶಿಲೆಯನ್ನು ಕಲೆಯಾಗಿ ಅರಳಿಸಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿಗೆ ಸಲ್ಲಿತ್ತದೆ‌ : ಗಿರಿಧರ್ ಜೋಷಿ

Amarashilpi Jakanachari is credited with blossoming rock into art: Giridhar Joshi

ಜಾಹೀರಾತು
ಜಾಹೀರಾತು

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರ : ತಾಲೂಕ ಪಂಚಾಯತ ಕುಕನೂರ ಕಛೇರಿಯಲ್ಲಿ ವಿಶ್ವ ಕಂಡ ಮಹಾ ಶಿಲ್ಪಕಾರ ಅಮರಶಿಲ್ಪಿ ಜಕಣಾ ರರ ಜಯಂತಿಯನ್ನು ಆಚರಿಸಲಾಯಿತು.

ಪೂಜಾ ಕಾರ್ಯಕ್ರಮವನ್ನು ನೆರವೇರಿಸಿ ತಾಲೂಕ ಪಂಚಾಯತ ಕುಕನೂರ ಮ್ಯಾನೇಜರ್ ಗಿರಿಧರ್ ಜೋಷಿ ಮಾತನಾಡಿ ಅಮರಶಿಲ್ಪಿ ಜಕಣಾಚಾರಿಯವರು ನಾಡು ಕಂಡ ಮಹಾನ್ ಚೇತನ ರಾಮಾನುಜಾಚಾರ್ಯರ ಮಾರ್ಗದರ್ಶನದಿಂದ ತಮ್ಮ ವೃತ್ತಿಯಲ್ಲಿ ಏಕಾಗೃತೆಯನ್ನು ಸಾಧಿಸಿ ಹೋಯ್ಸಳ, ಕಲ್ಯಾಣ ಚಾಲುಕ್ಯರ ಸಾಮ್ರಾಜ್ಯಗಳಲ್ಲಿ ಅನೇಕ ದೇವಾಲಯಗಳನ್ನು ನಾಜೂಕಾದ ಕುಸುರಿ ಕೆತ್ತನೆಗಳಿಂದ ನಿರ್ಮಾಣ ಮಾಡಿ ಕವಿಗಳಿಗೆ ಕಲೆಯ ಬಲೆಯಾಗಿ, ಇತಿಹಾಸಕಾರರಿಗೆ ಆಕರವಾಗಿ, ಕೆಲವರಿಗೆ ವಿಸ್ಮಯದ ತಾಣಗಳಾಗಿವೆ,

ಕಾಯ ಅಳಿದರೂ ಕೀರ್ತಿ ಇಂದಿಗೂ ಶಿಲೆಗಳಲ್ಲಿ ಉಳಿದಿವೆ. ನಾವು ನಮ್ಮ ನಮ್ಮ ಕೆಲಸಗಳನ್ನು ಶ್ರೆದ್ದೆಯಿಂದ ಮಾಡಿದರೆ ಮಹಾನ್ ಸಾಧಕರ ಸಾಲಿನಲ್ಲಿ ನಿಲ್ಲ ಸಾಧ್ಯವಾಗುತ್ತದೆ ಎಂದರು.

ಈ ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಚೆನ್ನಬಸಪ್ಪ ಸಣ್ಣಕರಡದ್, ತಾಂತ್ರಿಕ ಸಂಯೋಜಕ ಸುರೇಶ್ ದೇಸಾಯಿ, ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ತಾಪಂ ಸಿಬ್ಬಂದಿಗಳು, ಎನ್.ಆರ್.ಎಲ್ ಎಮ್ ಸಿಬ್ಬಂದಿಗಳು ಹಾಜರಿದ್ದರು.

About Mallikarjun

Check Also

ಗ್ರಾಮೀಣ ಸಿಪಿಐಯಾಗಿ ಆರ್.ಹೆಚ್.ದೊಡ್ಡಮನಿ ಅಧಿಕಾರ ಸ್ವೀಕಾರ:

R.H. Doddamani assumes office as Rural CPI: ಗಂಗಾವತಿ,13: ಗ್ರಾಮೀಣ ಭಾಗದ ಸಿಪಿಐ ಆಗಿ ಆರ್.ಎಚ್.ದೊಡ್ಡಮನಿ ಅವರು ಇಂದು ಅಧಿಕಾರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.