Breaking News

ಪಡಿತರ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆ ಸರಿಪಡಿಸಲು ಒತ್ತಾಯಿಸಿ ಮನವಿ:ಕೆ. ಮಂಜುನಾಥ

Request to correct the problem arising in the distribution of rations: K. Manjunath

ಜಾಹೀರಾತು



ಗಂಗಾವತಿ: ತಾ­Æಕಿನ ಪಡಿತರ ಅಂಗಡಿಗಳಲ್ಲಿ ಪಡಿತರ ವಿತರಣೆಯನ್ನು ಮಾಡ­Ä ಸಾಕಷ್ಟು ಸಮಸ್ಯೆಗಳು
ಇದ್ದು, ಕೂಡಲೇ ಅವುಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿ ಅಕ್ಟೋಬರ್-೧೯ ಶನಿವಾರ ಮನವಿ
ಸಲ್ಲಿಸಲಾಯಿತು ಎಂದು ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘದ ತಾಲೂಕ
ಅಧ್ಯಕ್ಷರಾದ ಮಂಜುನಾಥ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಪ್ರಸ್ತುತ ಪಡಿತರ ವಿತರಣೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳಲ್ಲಿ ಮುಖ್ಯವಾಗಿ ಅಕ್ಟೋಬರ್-
೧೯ ರಂದು ಸರ್ವರ್ ಇಲ್ಲದೇ ಇರುವುದರಿಂದ ವಿತರಣೆ ಮಾಡಲು ಆಗದೇ, ಯಾವ ರೀತಿಯಾಗಿ
ವಿತರಣೆಯನ್ನು ಮಾಡಬೇಕು ಎನ್ನುವುದು ತಿಳಿಯದಂತಾಗಿದೆ. ಪಡಿತರ ವಿತರಣೆಯ ಸಮಯದಲ್ಲಿ
ಸರ್ವರ್ ಸಮಸ್ಯೆಯಿಂದ ಋಣಾತ್ಮಕ (ಅಃ) ಬಂದರೆ ಈ ತಿಂಗಳು ಯಾವುದೇ ರೀತಿಯ ಕ್ರಮ
ಕೈಗೊಳ್ಳಬಾರದು. ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರಿಂದ ಜನದಟ್ಟಣೆ ಆಗುವ ಸಂಭವ
ಇರುವುದರಿಂದ ಈ ಬಗ್ಗೆ ತಮ್ಮ ಕಛೇರಿಯಿಂದ ಪ್ರಕಟಣೆ ನೀಡುವುದು, ಸರ್ವರ್ ಸಮಸ್ಯೆಯಿಂದ
ವಿನಾಯತಿ ಪಡಿತರ ಕಾರ್ಡಗಳಿಗೆ ವಿತರಣೆಯನ್ನು ಹೇಗೆ ಮಾಡಬೇಕೆಂದು ತಿಳಿಯದಾಗಿದೆ.
ವಯೋವೃದ್ಧರು, ಅಂಗವಿಕಲರು ಹಾಗೂ ಆನಾರೋಗ್ಯದಿಂದ ಹಾಸಿಗೆಯಲ್ಲಿ ವಿಶ್ರಾಂತಿಯನ್ನು ಪಡೆಯುವ
ಕಾರ್ಡದಾರರಿಗೆ ಔಖಿP ಇಲ್ಲದೇ ಇರುವುದರಿಂದ ಯಾವ ರೀತಿಯಂದ ಪಡಿತರ ವಿತರಣೆ ಮಾಡಬೇಕೆಂಬುದು
ತಿಳಿಯುತ್ತಿಲ್ಲ, ನ್ಯಾಯಬೆಲೆ ಅಂಗಡಿಕಾರರಿಗೆ ಬೇರೆ ಜಿಲ್ಲೆಯಲ್ಲಿ ಕಮಿಷನ್ ಹಣ ಬಂದರು ಸಹ ನಮ್ಮ
ಜಿಲ್ಲೆಯಲ್ಲಿ ಪ್ರತಿಬಾರಿಯೂ ಸಹ ಕಮಿಷನ್ ಹಣ ಬಿಡುಗಡೆಯಾಗ­Ä ತುಂಬಾ ತಡವಾಗುತ್ತಿರುತ್ತದೆ.
ಇದರಿಂದ ಅಂಗಡಿಕಾರರಿಗೆ ನ್ಯಾಯಬೆಲೆ ಅಂಗಡಿ ಬಾಡಿಗೆ ಕಟ್ಟಲು ಮತ್ತು ಕಂಪ್ಯೂಟರ್ ಆಪರೇಟರ್ ಕೂಲಿ
ಹಾಗೂ ತೂಕ ಮಾಡುವವರ ಕೂಲಿ ನೀಡ­Ä ತುಂಬಾ ಕಷ್ಟಕರವಾಗುತ್ತದೆ ಮತ್ತು ಅಂಗಡಿಕಾರರ ಜೀವನ
ನಿರ್ವಹಿಸ­Ä ತುಂಬಾ ಕಷ್ಟಕರವಾಗುತ್ತಿದ್ದು ಆದ್ದರಿಂದ ಆದಷ್ಟು ಬೇಗ ಕಮಿಷನ್ ಹಣ ಬಿಡುಗಡೆ
ಮಾಡುವುದರ ಕುರಿತು ಕೋರಿಕೆ. ಈ ತಿಂಗಳು ಪಡಿತರ ವಿತರಣೆಯಲ್ಲಿ ತುಂಬಾ ತಡವಾಗಿರುವುದರಿಂದ
ಜನದಟ್ಟಣೆಯಾಗುವ ಸಂಭವ ಇರುವುದರಿಂದ ನ್ಯಾಯಬೆಲೆ ಅಂಗಡಿಕಾರರ ಜೊತೆ ಜಗಳ ಮಾಡುವ
ಸಂಭವವಿರುತ್ತದೆ. ಆದ್ದರಿಂದ ಪೋಲಿಸ್ ಭದ್ರತೆಯನ್ನು ನೀಡುವುದು, ಈ ಎಲ್ಲಾ ನಮ್ಮ ಸಮಸ್ಯೆಗಳನ್ನು
ಗಣನೆಗೆ ತೆಗೆದುಕೊಂಡು ಅದಷ್ಟು ಬೇಗನೆ ಸರಿಪಡಿಸಬೇಕೆಂದು ತಹಶೀಲ್ದಾರರಿಗೆ ಒತ್ತಾಯಿಸಲಾಗಿದೆ ಎಂದು
ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಟಿ.ಎಂ. ಚನ್ನಬಸವ ಶಾಸ್ತಿç, ಉಪಾಧ್ಯಕ್ಷ
ರಾದ
ಎಮ್.ಪಿ. ಪಂಪನಗೌಡ, ಕಾರ್ಯದರ್ಶಿಯಾದ ಎಮ್.ಡಿ ಫಯಾಜ್, ಸಹ ಕಾರ್ಯದರ್ಶಿ ಎಚ್.
ವೀರಭದ್ರಪ್ಪ, ಖಜಾಂಚಿಯಾದ ಬಿ. ರಾಜಶೇಖರ, ಸಂಘದ ನಿರ್ದೇಶಕರುಗಳು ಹಾಗೂ ತಾಲೂಕಿನ ವಿವಿಧ
ಪಡಿತರ ನ್ಯಾಯಬೆಲೆ ಅಂಗಡಿಗಳ ಮಾಲಿಕರು ಪಾಲ್ಗೊಂಡಿದ್ದರು.

About Mallikarjun

Check Also

ಕೆರೆ ಹೂಳೆತ್ತುವ ಕಾಮಗಾರಿ ಅಭಿವೃದ್ಧಿ ಅಧಿಕಾರಿಗಳಿಂದ ಪರಿಶೀಲನೆ

Development officials inspect lake dredging work ಕೂಲಿಕಾರರು ಮೇಜರ್ ಮೆಂಟ್ ಪ್ರಕಾರ ಕೆಲಸ ನಿರ್ವಹಿಸಲಿ,ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಮಲ್ಲಿಕಾರ್ಜುನ …

Leave a Reply

Your email address will not be published. Required fields are marked *