Shortage of cooking gas due to lack of vision of central government: Dr. Anand Kumar
ಅಡುಗೆ ಅನಿಲ ಕೊರತೆಗೆ ಕೇಂದ್ರ ಸರ್ಕಾರದ ದೂರದೃಷ್ಟಿಯ ಕೊರತೆ ಕಾರಣ: ಡಾ. ಆನಂದ ಕುಮಾರ್
ಜಾಹೀರಾತು
ಬೆಂಗಳೂರು,: ದೇಶದ ಅನೇಕ ಭಾಗಗಳಲ್ಲಿ ಅಡುಗೆ ಅನಿಲದ ಕೊರತೆ ತೀವ್ರವಾಗಿ ಬಾಧಿಸುತ್ತಿದ್ದರೂ ಸಿಲಿಂಡರ್ಗಾಗಿ ವಾರಗಳ ಕಾಲ ಕಾಯುವ ಪರಿಸ್ಥಿತಿ ತಲೆ ದೋರಿದೆ. ಹೊಣೆಗಾರಿಕೆಯುಳ್ಳ ಸರ್ಕಾರ ಅಂತಾರಾಷ್ಟ್ರೀಯ ಪರಿಸ್ಥಿತಿಗಳನ್ನು ಮುಂಚಿತವಾಗಿ ಅಂದಾಜಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಆದರೆ ಕೇಂದ್ರ ಸರ್ಕಾರ ಅದನ್ನು ಮಾಡಲು ವಿಫಲವಾಗಿದೆ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ ಕುಮಾರ್ ಆರೋಪಿಸಿದ್ಧಾರೆ.
ಜಾಗತಿಕ ಸಂಘರ್ಷ ತಲೆ ದೋರುವ ಎರಡು ದಿನಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡಿ, ಅಲ್ಲಿನ ಪ್ರಧಾನಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ನಂತರವಷ್ಟೇ ಜಾಗತಿಕ ಸಂಘರ್ಷ ಆರಂಭವಾಯಿತು. ಹಾಗಿದ್ದರೆ ಈ ಭೇಟಿಯ ಉದ್ದೇಶವೇನು? ಪ್ರಧಾನಿ ಅವರಿಗೆ ಭವಿಷ್ಯದ ಬೆಳವಣಿಗೆಗಳು ಮೊದಲೇ ಗೊತ್ತಿತ್ತು? ಆದರೆ ಅವರು ದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪ್ರಧಾನ ಆದ್ಯತೆ ನೀಡಲಿಲ್ಲ. ಹೀಗಾಗಿ ನಿಜವಾಗಿಯೂ ಅಡುಗೆ ಅನಿಲ ಕೊರತೆಗೆ ಕೇವಲ ಜಾಗತಿಕ ಸಂಘರ್ಷಗಳೇ ಕಾರಣವೇ ಅಥವಾ ಇದು ಕೇಂದ್ರ ಸರ್ಕಾರದ ದೌರ್ಬಲ್ಯ ಮತ್ತು ನಿರ್ಲಕ್ಷ್ಯದ ಫಲವೇ? ಎಂಬ ಪ್ರಶ್ನೆ ಎದ್ದಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ತಕ್ಷಣವೇ ನೈತಿಕ ಹೊಣೆ ಹೊತ್ತು ಸಮಸ್ಯೆಯನ್ನು ಪರಿಹರಿಸುವ ದಿಕ್ಕಿನಲ್ಲಿ ಸ್ಪಷ್ಟ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ ಈ ಕೊರತೆ ಕೇವಲ ಅಡುಗೆ ಮನೆಯ ಸಮಸ್ಯೆಯಾಗಿ ಉಳಿಯದೆ, ಜನರ ಆಕ್ರೋಶದ ರಾಜಕೀಯ ವಿಚಾರವಾಗುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಾಗತಿಕ ಮಟ್ಟದಲ್ಲಿ ಉಂಟಾಗುವ ಯುದ್ಧಗಳು ಅಥವಾ ರಾಜಕೀಯ ಸಂಘರ್ಷಗಳು ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದು ಸತ್ಯ. ಆದರೆ ಅದನ್ನು ನೆಪವನ್ನಾಗಿ ಮಾಡಿಕೊಂಡು ದೇಶದ ಆಂತರಿಕ ಸಮಸ್ಯೆಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ.
ದೇಶ ಅಡುಗೆ ಅನಿಲ ಸೇರಿದಂತೆ ಬಹುತೇಕ ಇಂಧನಗಳಿಗಾಗಿ ವಿದೇಶಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಪೂರೈಕೆ ಸರಪಳಿಯನ್ನು ಬಲಪಡಿಸುವುದು, ಪರ್ಯಾಯ ಮೂಲಗಳನ್ನು ಹುಡುಕುವುದು ಹಾಗೂ ಸಂಗ್ರಹ ವ್ಯವಸ್ಥೆಯನ್ನು ಸುಧಾರಿಸುವುದು ಸರ್ಕಾರದ ತುರ್ತು ಕರ್ತವ್ಯವಾಗಿತ್ತು.
ಆದರೆ ಈ ವಿಷಯದಲ್ಲಿ ಸಮರ್ಪಕ ಯೋಜನೆ ಮತ್ತು ದೂರದೃಷ್ಟಿ ಕಾಣಿಸುತ್ತಿಲ್ಲ ಎಂದು ವಿಷಾದಿಸಿದ್ದಾರೆ.
ಬೆಲೆ ನಿಯಂತ್ರಣ ಮತ್ತು ಸಬ್ಸಿಡಿ ನೀತಿಗಳಲ್ಲಿ ಸರ್ಕಾರ ಒತ್ತಡಗಳಿಗೆ ಮಣಿದಂತೆ ಕಾಣುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಅಡುಗೆ ಅನಿಲದ ಬೆಲೆ ನಿರಂತರವಾಗಿ ಏರಿಕೆಯಾಗಿದ್ದರೂ ಸಾಮಾನ್ಯ ಜನರಿಗೆ ಸುಲಭ ದರದಲ್ಲಿ ದೊರಕಿಸಿಕೊಡುವಲ್ಲಿ ಸುಧಾರಣೆ ಕಂಡು ಬಂದಿಲ್ಲ. ವಿತರಣಾ ವ್ಯವಸ್ಥೆಯಲ್ಲಿನ ಅವ್ಯವಸ್ಥೆ ಕೂಡ ಸಮಸ್ಯೆಯನ್ನು ಗಂಭೀರಗೊಳಿಸಿದೆ.
ಅನೇಕ ಕಡೆಗಳಲ್ಲಿ ಅನಿಲ ಏಜೆನ್ಸಿಗಳ ಬಳಿ ಸಿಲಿಂಡರ್ಗಳ ಕೊರತೆ ಕಂಡುಬರುತ್ತಿದ್ದು, ಗ್ರಾಹಕರು ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.
ಕಾಳಸಂತೆ ಕೋರರು ಹೆಚ್ಚಾಗದ್ದು, ಸರ್ಕಾರದ ಮೇಲ್ವಿಚಾರಣೆ ಮತ್ತು ನಿಯಂತ್ರಣ ವ್ಯವಸ್ಥೆ ದುರ್ಬಲವಾಗಿರುವುದರಿಂದ ಈ ಸಮಸ್ಯೆ ತೀವ್ರಗೊಂಡಿದೆ ಎಂದು ಡಾ. ಆನಂದ ಕುಮಾರ್ ಟೀಕಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಜಾಗತಿಕ ಸಂಘರ್ಷಗಳನ್ನು ಕಾರಣವನ್ನಾಗಿ ಹೇಳುವುದು ಸುಲಭ. ಆದರೆ ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಅದು ಸಾಕಾಗುವುದಿಲ್ಲ. ದೂರದೃಷ್ಟಿಯ ಯೋಜನೆ, ಬಲವಾದ ಸಂಗ್ರಹ ವ್ಯವಸ್ಥೆ ಮತ್ತು ಪರಿಣಾಮಕಾರಿ ವಿತರಣಾ ವ್ಯವಸ್ಥೆ ಹೊಂದಿದ್ದರೆ ಜನ ಇಂತಹ ಸಂಕಷ್ಟ ಎದುರಿಸಬೇಕಾಗಿರಲಿಲ್ಲ.
ಅಡುಗೆ ಅನಿಲ ಕೊರತೆ ಎಂಬುದು ಕೇವಲ ಜಾಗತಿಕ ಪರಿಸ್ಥಿತಿಯ ಪರಿಣಾಮವಲ್ಲ; ಅದು ಕೇಂದ್ರದ ನೀತಿ ವೈಫಲ್ಯ, ಯೋಜನಾ ಕೊರತೆ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿದೆ. ಜನರ ದಿನನಿತ್ಯದ ಬದುಕಿಗೆ ನೇರವಾಗಿ ಸಂಬಂಧಿಸಿದಂತಹ ಮೂಲಭೂತ ಅಗತ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಸರ್ಕಾರ ವಿಫಲವಾಗಿದೆ.
ಅಡುಗೆ ಅನಿಲಕ್ಕೂ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಯಾವುದೇ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಕ್ಕೆ ಶೋಭೆಯ ವಿಷಯವಲ್ಲ. ಮೂಲಭೂತ ಅಗತ್ಯಗಳಾದ ಆಹಾರ ಮತ್ತು ಅಡುಗೆ ವ್ಯವಸ್ಥೆಯನ್ನು ಭದ್ರಗೊಳಿಸುವುದು ಯಾವುದೇ ಸರ್ಕಾರದ ಮೊದಲ ಕರ್ತವ್ಯ.
ಅಡುಗೆ ಅನಿಲದ ಕೊರತೆಯಂತಹ ಸಮಸ್ಯೆಗಳು ಮುಂದುವರಿದರೆ ಅದು ಕೇವಲ ಆಡಳಿತ ವೈಫಲ್ಯವಷ್ಟೇ ಅಲ್ಲ, ಜನರ ಜೀವನಮಟ್ಟದ ಮೇಲೆ ನೇರ ಪರಿಣಾಮ ಬೀರುವ ಗಂಭೀರ ಸಾಮಾಜಿಕ ಸಮಸ್ಯೆಯಾಗುತ್ತದೆ ಎಂದು ಡಾ. ಆನಂದ ಕುಮಾರ್ ಹೇಳಿದ್ದಾರೆ.
Women are omnipotent and should realize their power and become self-reliant: Justice Mahantesh Dargada
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ-2026
ಜಾಹೀರಾತು
ಮಹಿಳೆ ಸರ್ವಶಕ್ತಳಾಗಿದ್ದು, ತನ್ನ ಶಕ್ತಿಯನ್ನು ಅರಿತು ಸ್ವಾವಲಂಬಿಯಾಗಬೇಕು: ನ್ಯಾ.ಮಹಾಂತೇಶ ದರಗದ
ಕೊಪ್ಪಳ ಮಾರ್ಚ್ 17, (ಕರ್ನಾಟಕ ವಾರ್ತೆ): ಇಂದು ಆಧುನಿಕ ಮಹಿಳೆಯು ಸರ್ವಶಕ್ತಳಾಗಿದ್ದಾಳೆ. ಅಪಾರ ಶಕ್ತಿಯನ್ನು ಹೊಂದಿರುವ ಮಹಿಳೆಯರು ಧೈರ್ಯವಾಗಿ ಮುನ್ನುಗ್ಗಬೇಕು. ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಹೇಳಿದರು. ಮಂಗಳವಾರದAದು ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಜೀಂ ಪ್ರೇಮ್ಜೀ ಫೌಂಡೇಶನ್, ಇನ್ನರ್ವ್ಹೀಲ್ ಕ್ಲಬ್, ಶ್ರೀ ಮಹಿಳಾ ಪ್ರತಿಧ್ವನಿ ಸಾಮಾಜಿಕ, ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳ(ರಿ) ಹಾಗೂ ವಾಸವಿ ಕ್ಲಬ್ ಭಾಗ್ಯನಗರ ಪಾನಘಂಟಿ ಫೌಂಡೇಶನ್(ರಿ) ಕೊಪ್ಪಳ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯಮಹಿಳಾ ದಿನಾಚರಣೆ-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಎಲ್ಲ ರಂಗದಲ್ಲಿಯೂ ತನ್ನ ಛಾಪು ಮೂಡಿಸುತ್ತಿದ್ದಾಳೆ. ಅವಳಿಗೆ ಅರ್ಹತೆ ಇದೆ, ಅಗಾಧ ಅವಕಾಶಗಳೂ ಇವೆ, ಮಹಿಳೆ ಧೈರ್ಯವಾಗಿ ಮುನ್ನುಗ್ಗಬೇಕು. ಸಮಾಜದಲ್ಲಿ ಸಮಾನತೆ ಸಾಧಿಸಲು, ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸುಶಿಕ್ಷಿತ ಸಮಾಜದಲ್ಲಿಯೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಸುರಕ್ಷಿತವಾಗಿರುವ ಕುರಿತು ಹೆಣ್ಣುಮಕ್ಕಳಿಗೆ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಹೆಣ್ಣುಮ್ಕಕಳನ್ನು ಹೇಗೆ ಗೌರವಿಸಬೇಕು ಎಂಬುದನ್ನು ಗಂಡುಮಕ್ಕಳಿಗೂ ಕಲಿಸಬೇಕು. ಮಹಿಳೆಯರ ರಕ್ಷಣೆಗೆ ಕಾನೂನಿನಲ್ಲಿ ಹಲವಾರು ರೀತಿಯ ಅವಕಾಶಗಳಿದ್ದು, ಸಂವಿಧಾನದಲ್ಲಿಯೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಮಹಿಳೆಯರು ಇವುಗಳನ್ನು ಅರಿತುಕೊಂಡು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕು. ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು. ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಜಿ. ಗೊಂಡಬಾಳ ಅವರು ಮಾತನಾಡಿ, ಮಹಿಳೆಗೆ ಮಹಿಳೆಯೇ ಶತ್ರುವಾಗಿರುವ ಕಾಲ ಘಟ್ಟದಲ್ಲಿ, ಮಹಿಳೆ ಓದು ಬರಹದ ಕಡೆಗೆ, ಸ್ವಂತದ ಬೆಳವಣಿಗೆಯ ಕಡೆಗೆ ಗಮನ ಹರಿಸಬೇಕು. ಸಮಾಧಾನ ಮತ್ತು ಶಾಂತಚಿತ್ತತೆಯಿAದ ಎಲ್ಲವನ್ನೂ ಅವಲೋಕಿಸಿ ಮುನ್ನಡೆಯಬೇಕು, ವಿಧವೆ ಮಹಿಳೆ ಬಗ್ಗೆ ಸಮಾಜ ಆಡುವ ಮಾತುಗಳು ಮತ್ತು ವಿಧುರ ಪುರುಷನ ಬಗ್ಗೆ ಸಮಾಜ ತೋರುವ ಅನುಕಂಪವನ್ನೇ ನಾವು ನೋಡಿದರೆ ಅಸಮಾನತೆಯನ್ನು ಗಮನಿಸಬಹುದು. ಕೇವಲ ಹೆಣ್ಣುಮಕ್ಕಳಿಗೆ ಅಷ್ಟೇ ಅಲ್ಲದೇ ಗಂಡುಮಕ್ಕಳಿಗೆ ಸರಿಯಾದ ಸಂಸ್ಕಾರ ಕಲಿಸುವ ಅಗತ್ಯವಿದೆ. ಮಹಿಳೆಯ ತಮ್ಮ ಅಹಮಿಕೆಯನ್ನು ಬಿಟ್ಟು ಸಮಾಜ ಕಟ್ಟುವ ಕಡೆಗೆ ಗಮನಹರಿಸಿದರೆ ಅಸಾಧಾರಣ ಪ್ರಗತಿ ಹೊಂದಬಹುದು ಎಂದರು. ಮಹಿಳಾ ದೌರ್ಜನ್ಯ ತಮ್ಮ ನಂಬುಗಸ್ಥರಿAದಲೇ ಹೆಚ್ಚಾಗಿ ನಡೆಯುತ್ತಿರುವದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಪರಶುರಾಮ ಶೆಟ್ಟೆಪ್ಪನವರ ಮಾತನಾಡಿ, ಇಲಾಖೆ ಅನೇಕ ಯೋಜನೆಗಳ ಮೂಲಕ ಮಹಿಳೆ ಮತ್ತು ಮಕ್ಕಳ ಸಬಲೀಕರಣ ಮಾಡುತ್ತಿದೆ. ಈ ಬಾರಿಯ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯನ್ನು ಗೀವ್ ಟು ಗೇನ್ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಮಹಿಳೆಯರ ಶಕ್ತಿಯ ಬಗ್ಗೆ ಹೇಳಲು ಪದಗಳು ಸಾಲುವುದಿಲ್ಲ ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ನಟರಾಜ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ರೋಹಿಣಿ ಕೊಟಗಾರ, ಜಯಶ್ರೀ ಆರ್., ವಿರುಪಾಕ್ಷಿ, ಯಲ್ಲಮ್ಮ ಅಂಡಗಿ, ಬೆಟದೇಶ ಮಾಳೆಕೊಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಎಲಿಗಾರ, ವಿವಿಧ ಮಹಿಳಾ ಸಂಘಟನೆಗಳ ಡಾ. ರಾಧಾ ಕುಲಕರ್ಣಿ, ಗೀತಾ ಮುತ್ತಾಳ, ಮಧು ಶೆಟ್ಟರ್, ಸರೋಜಾ ಬಾಕಳೆ, ಕೋಮಲಾ ಕುದರಿಮೋತಿ ಸೇರಿದಂತೆ ಇತರರು ಇದ್ದರು. ಸುಜಾತಾ ರಾಯಕರ್ ಮತ್ತು ಪ್ರೀತಿ ಕೋರೆ ಕಾರ್ಯಕ್ರಮ ನಿರ್ವಹಿಸಿದರು. ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಪ್ರದಾನ : ಜಿಲ್ಲೆಯ ಆರು ಜನ ಮಕ್ಕಳಿಗೆ ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ ಸೇವೆಯನ್ನು ಗುರುತಿಸಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ನೆಟ್ಬಾಲ್ ಮತ್ತು ಪೆಂಕಾಕ್ ಸಿಲತ್ ನಲ್ಲಿ ರಾಷ್ಟ್ರೀಯ ಪದಕ ಪಡೆದ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅಸಾಧಾರಣ ಸಾಧನೆ ಮಾಡಿರುವ ಸಾಹಿತ್ಯ ಎಂ. ಗೊಂಡಬಾಳ, ಕಲಾ ಸೇವೆಗೆ ಸಾಯಿ ಶೌರ್ಯ ಎಂ. ಕುಕನೂರ, ಕ್ರೀಡಾ ಕ್ಷೇತ್ರದ ಸಾಧನೆಗೆ ಅಖಿಲೇಶ ಯಾದವ್ ಕೊಪ್ಪಳ, ಆಫ್ರೀನ್ ಪೀರಸಾಬ್ ಗಂಗಾವತಿ, ಮೊಹಮ್ಮದ್ ಅಸದ್ ಗಂಗಾವತಿ ಹಾಗೂ ಪ್ರದ್ವಿಕಾ ಅಗಸಿಮುಂದಿನ ಕುಷ್ಟಗಿ ಅವರಿಗೆ ಹತ್ತು ಸಾವಿರ ನಗದು ಪುರಸ್ಕಾರದ ಜೊತೆಗೆ ಪ್ರಶಸ್ತಿ ನೀಡಲಾಯಿತು. ಅಲ್ಲದೇ ಇದೇ ವೇಳೆ ಉತ್ತಮ ಸೇವೆ ಮಾಡಿದ ಮೇಲ್ವಿಚಾರಿಕಿಯರಿಗೆ, ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
Dr. Dattatesh Kumar responded to the water problems in Hanur assembly constituency.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಿನ ಸಮಸ್ಯೆಗಳಗೆ ಸ್ಪಂದಿಸಿದ ಡಾಕ್ಟರ್ ದತ್ತೇಶ್ ಕುಮಾರ್ .
ಜಾಹೀರಾತು
ವರದಿ: ಬಂಗಾರಪ್ಪ .ಸಿ. ಹನೂರು:ವಿಧಾನಸಭಾ ಕ್ಷೇತ್ರದಾದ್ಯಂತ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸದಾ ಮುಂದಿರುವ ಡಾಕ್ಟರ್ ದತ್ತೇಶ್ ಕುಮಾರ್ ಅವರು ಇಂದು ಹುತ್ತೂರು ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಕೇಳಿ ಅಲ್ಲಿನ ನಿವಾಸಿಗಳು ಪರದಾಡುವಂತಹ ಸ್ಥಿತಿಯಲ್ಲಿ ಇದ್ದಂತಹ ಸಮಯದಲ್ಲಿ ಬಿಜೆಪಿಯ ಹಿರಿಯರಾದ ಅವರು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಮೂಲಕ ತಮ್ಮ ಸಮಾಜ ಸೇವೆಯಿಂದ ಜನರ ಮನ ಗೆದ್ದಿದ್ದಾರೆ ಎಂದು ಬಿಜೆಪಿ ಮುಖಂಡರಾದ ಬೊರ್ವೆಲ್ ಶ್ರೀನಿವಾಶ್ ರವರು ತಿಳಿಸಿದರು. ಇದೇ ವಿಷಯವಾಗಿ ಮಾತನಾಡಿದ ಡಾಕ್ಟರ್ ದತ್ತೇಶ್ ಕುಮಾರ್ ರವರು ನಮ್ಮ ಮಾನಸ ಫೌಂಡೇಷನ್ ವತಿಯಿಂದ ಇತ್ತೀಚಿನ ದಿನಗಳಲ್ಲಿ ನಮ್ಮ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮವಾಗಿನೀರಿಗೆ ಅಹಾಕಾರ ಉಂಟಾಗುವಂತಹ ಸ್ಥಿತಿಗೆ ತಾಲೂಕಿನ ಹುತ್ತೂರು ಗ್ರಾಮದಲ್ಲಿ ಕಾಣಬಹುದು, ಕಳೆದ ಒಂದು ತಿಂಗಳಿಂದಲೂ ಸಹ ನೀರಿನ ಸಮಸ್ಯೆಯಿಂದ ಇಲ್ಲಿನ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ,ಇಲ್ಲಿ ಸಿಗುವ ಅಲ್ಪ ಸ್ವಲ್ಪ ನೀರಿನಲ್ಲಿಯೇ ಬದುಕುಳಿಯುವಂತಹ ಪರಿಸ್ಥಿತಿಯಲ್ಲಿದ್ದಾರೆ, ಲೊಕ್ಕನಹಳ್ಳಿ ಹೋಬಳಿಯ ಸುಮಾರು ನಾಲ್ಕು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಹುತ್ತೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಇರುವ ಎಂಟು ಕೊಳವೆ ಬಾವಿಗಳ ಪೈಕಿ ಕೆಲವೇ ಕೆಲವು ಬೋರ್ವೆಲ್ಗಳಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ ಉಳಿದಂತೆ ಎಲ್ಲ ಕೊಳವೆ ಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ , ಜನರ ಸಮಸ್ಯೆಗೆ ಸ್ಪಂದಿಸಿದ್ದೆನೆ ,ಗ್ರಾಮಗಳಿಗೆ ಟ್ಯಾಂಕರ್ ಗಳ ಮೂಲಕ ಜನರಿಗೆ ಬೇಕಾಗುವಷ್ಟು ನೀರನ್ನು ಪೂರೈಸಿ ಒಂದು ಟ್ಯಾಂಕರ್ ಅನ್ನು ಗ್ರಾಮದಲ್ಲಿ ಇರುವಂತೆ ಮಾಡಿದ್ದೇನೆ ಪ್ರತಿನಿತ್ಯ ಎಷ್ಟು ಟ್ಯಾಂಕ್ ನೀರು ಬೇಕಾದರೂ ಬೇಕಾದರೂ ಬಳಸಿಕೊಳ್ಳಿ ಎಂದು ಅನುಕೂಲ ಕಲ್ಪಿಸಿಕೊಟ್ಟಿದ್ದೆನೆ , ಯುಗಾದಿ ಹಬ್ಬದ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಿದ ಗ್ರಾಮದ ನಿವಾಸಿಗಳು ಮಹಿಳೆಯರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.