Breaking News
ಕಾರ್ಮಿಕ ಇಲಾಖೆಯಿಂದ ಮಂಜುರಾ ತಿ ಗೊಂಡ ಒಂದುವರೆ ಲಕ್ಷದ ವಿವಿಧಕಿಟ್ ವಿತರಣೆ. ಪಾಂಡು.ನಾ ಯ್ಕ್.
Distribution of various kits worth one and a half lakh to Manjura Thi Gond from Labor Department. Pandu.na yk.

ಕಾರ್ಮಿಕ ಇಲಾಖೆಯಿಂದ ಮಂಜುರಾ ತಿ ಗೊಂಡ ಒಂದುವರೆ ಲಕ್ಷದ ವಿವಿಧಕಿಟ್ ವಿತರಣೆ. ಪಾಂಡು.ನಾ ಯ್ಕ್.

ಜಾಹೀರಾತು
https://youtu.be/54mDmaz0YxQ?si=IlxLl6zRdn1CsS_E
ಜಾಹೀರಾತು


ಗಂಗಾವತಿ. ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯ ವತಿಯಿಂದ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕ ಸಂಘಕ್ಕೆ ಮಂಜೂರಾತಿ ಗೊಂಡ ಅಂದಾಜು ಒಂದುವರೆ ಲಕ್ಷ ದ ವಿವಿಧ ಕಿಟ್ ಗಳನ್ನು ರವಿವಾರದಂದು ವಿರುಪಾಪುರ ತಾಂಡದಲ್ಲಿ ವಿತರಿಸಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಾಂಡು.ನಾಯ್ಕ್ ಸಂಘದ ಫಲಾನುಭವಿಗಳಿಗೆ ಕಿಟ್ಟ ಗಳನ್ನು ವಿತರಿಸುವುದರ ಮೂಲಕ ಮಾತನಾಡಿ ಕಾರ್ಮಿಕ ಇಲಾಖೆ ವಿದ್ಯುತ್ ಬುನಾದಿ. ಕಟ್ಟಡ ನಿರ್ಮಾಣದ ಕಾರ್ಮಿಕರಿಗೆ ಅಗತ್ಯ ಮೂರು ಹಂತದ ಪರಿಕರಗಳನ್ನು ಕಲ್ಪಿಸಲಾಗಿದ್ದು ನೀಡಲಾಗಿರುವ ಕಿಟ್ಟುಗಳಲ್ಲಿ ಮತ್ತಷ್ಟು ಗುಣಮಟ್ಟದ ಪರಿಕರಗಳನ್ನು ಕಲ್ಪಿಸುವ ಅವಶ್ಯಕತೆ ಇತ್ತು ಎಂದು ತಿಳಿಸಿದವರು ಕಳೆದ ಮೂರು ವರ್ಷದಿಂದ ಅಸ್ತಿತ್ವಕ್ಕೆ ಬಂದ ಸಂಗವು ಈಗಾಗಲೇ ಕಾರ್ಮಿಕರ ಸದಸ್ಯರುಗಳಿಗಾಗಿ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಲಾಗಿದೆ. ವಿಶೇಷವಾಗಿ ಕಾರ್ಮಿಕರ ಇಲಾಖೆ ಮಕ್ಕಳ ಶೈಕ್ಷಣಿಕ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಿಟ್ಟುಗಳನ್ನು ಕಲ್ಪಿಸಬೇಕಾಗಿದೆ ಯಾವುದೇ ವಿದ್ಯಾರ್ಥಿ ಶಿಕ್ಷಣ ಸೌಲಭ್ಯದಿಂದ ವಂಚಿತರಾಗಬಾರದು ಜೊತೆಗೆ ವಿದ್ಯಾರ್ಥಿ ವೇತನ ರಕ್ಷಿಸುವಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುನ್ನೂರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಂತಹ ಶ್ರೀ ಸೇವಾಲಾಲ್ ಮಹಾರಾಜ್ ಕಟ್ಟಡ ಕಾರ್ಮಿಕರ ಸಂಘ ಮುಂದಿನ ದಿನಗಳಲ್ಲಿ ಸಂಗಾಪೂರ ತಾಂಡ. ಸೂರ್ಯನಾಯಕತಾಂಡ ಭಾಗದಲ್ಲಿ ಗ್ರಾಮ ಘಟಕಗಳನ್ನು ಸ್ಥಾಪಿಸುವುದರ ಮೂಲಕ ಕಾರ್ಮಿಕ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ಕಲ್ಪಿಸುವ ಸದುದ್ದೇಶ ತಾವು ಹೊಂದಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶಿವಪ್ಪ ನಾಯ್ಕ್. ಉಪಾಧ್ಯಕ್ಷ ಬಾಲಾಜಿ ಮೇಸ್ತ್ರಿ ಹನುಮಂತಪ್ಪ ಮೇಸ್ತ್ರಿ ಖಜಾಂಚಿ ರವಿಚಂದ್ರ ಸದಸ್ಯರುಗಳಾದ ಕೃಷ್ಣ ಭೋಜ ರವಿ ನಾಯ್ಕ್. ಸೇರಿದಂತೆ ಫಲಾನುಭವಿಗಳು ಪಾಲುಗೊಂಡಿದ್ದರು.

Leave a Reply

Your email address will not be published. Required fields are marked *