
ಏಳುಬೆಂಚಿಯಲ್ಲಿ ಪುರಾಣ ವಾಚನ,ಜನಪದ ಗೀತೆಗಳು ಮತ್ತು ಮೂಕಾಭಿನಯ ಸಾಂಸ್ಕೃತಿಕ
Elehubenchi has a cultural program of mythological recitation, folk songs and pantomime."
ಕುರುಗೋಡು:-ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ಫೆಬ್ರವರಿ 27 ರಂದು ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ವತಿಯಿಂದ ಪುರಾಣ ವಾಚನ,ಜನಪದ ಗೀತೆಗಳು ಮತ್ತು ಮೂಕಾಭಿನಯ ಕಾರ್ಯಕ್ರಮವನ್ನು ಕಂಪ್ಲಿ ತಾಲೂಕಿನ ಮಾವಿನಹಳ್ಳಿ ಗ್ರಾಮದ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಲಾವದರನ್ನು ಗುರುತಿಸಿ ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರದರ್ಶನ ನೀಡಿ ಮಕ್ಕಳಿಗೆ ಕಲೆಗಳನ್ನು ಉಣ ಬಡಿಸುವ ಕೆಲಸ ಪ್ರಸ್ತುತ ಮಾಡುವುದು ನಮಗೆ ಬಹಳಷ್ಟು ಸಂತೋಷವಾಗುತ್ತದೆ ಎಂದು ತಬಲಾ ಬಾರಿಸುವುದರ ಮುಖಾಂತರ ಉದ್ಘಾಟನಾ ಕಾರ್ಯಕ್ರಮ ನೇರವೇರಿಸಿದ ತಬಲಾ ವಾದಕರಾದ ಶ್ರೀ.ಚಾಗೆ ವರಬಸಪ್ಪ ಉದ್ಘಾಕರ ನುಡಿಯನ್ನು ಮಾತಾಡಿದರು.
ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅರಿವು ಮೂಡಿಸುವ ಕೆಲಸ ಪ್ರತಿಯೋಬ್ಬರ ಜವಾಬ್ದಾರಿ ಆಗಬೇಕು ತಮ್ಮ ತಮ್ಮ ಆಸಕ್ತಿ ಅನುಸರವಾಗಿ ಮಕ್ಕಳು ಭಾಗವಹಿಸುತ್ತಾ ಹೋಗುತ್ತಾರೆ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಶ್ರೀ ಎಸ್ ಎರ್ರಿಸ್ವಾಮಿ ಮಾತಾಡಿದರು.
ಹಾಡುಗಾರಿಕೆ, ಕುಣಿತ, ನಾಟಕ ,ನೃತ್ಯ ಇಂದಿನ ಮಕ್ಕಳಿಗೆ ಅದರ ಅರಿವು ಇಲ್ಲದಂತೆ ಆಗಿದೆ ಅವುಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಕೆ.ಹೇಮೇಶ್ವರ ಮಾಡುತ್ತಿದ್ದಾರೆ ಎಂದು ಬಯಲಾಟ ಹಾರ್ಮೂನಿಯಂ ಮಾಸ್ತರ್ ಶ್ರೀ. ಮಂಜುನಾಥ್ ಹೇಳಿದರು.
ನಮ್ಮ ಏಳುಬೆಂಚಿ ಗ್ರಾಮದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತೇವೆ.ಇಂದು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪರಿಚಯ ಮತ್ತು ಗ್ರಾಮೀಣ ಕಲೆಗಳನ್ನು ನೋಡುವಂತಹ ಸೌಭಾಗ್ಯ ಎಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ. ಜಿ.ಬಸವನಗೌಡ ಹೇಳಿದರು.
ನಮ್ಮ ಏಳುಬೆಂಚಿ ಗ್ರಾಮ ಎಂಬುದು ಸಪ್ತಸ್ವರಗಳು ನಾದಮಯ ನಮ್ಮ ಗ್ರಾಮ ಕಲೆಗಳ ತವರೂರು ನಮ್ಮ ಊರಿನಲ್ಲಿ ಅನೇಕ ಕಲಾವಿದರನ್ನು, ಸಾಹಿತ್ಯಗಳನ್ನು, ಒಳಗೊಂಡಿರುವ ನಮ್ಮ ಗ್ರಾಮ ಅದಕ್ಕಾಗಿ ನಮ್ಮ ಊರಿನಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ಕಾರ್ಯದರ್ಶಿ ಕೆ.ಹೇಮೇಶ್ವರ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಕಲೆಯನ್ನು ಬೆಳೆಸುತ್ತಿದ್ದಾರೆ ಎಂದು ಸರಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕರಾದ ಶ್ರೀ. ಕೆ ಮುದಿಯಪ್ಪ ಮಾತಾಡಿದರು.
ಇಂದಿನ ಮಕ್ಕಳು ಜಂಗಮವಾಣಿಗೆ ಅಥವಾ ಮೊಬೈಲ್ ಫೋನ್ಗೆ ಬಲಿಯಾಗಿದ್ದಾರೆ.ಅವರಿಗೆ ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮನೆಯಲ್ಲಿ ತಂದೆ ತಾಯಿ ಮತ್ತು ಶಾಲೆಗಳಲ್ಲಿ ಗುರುಗಳು ಮಾಡಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿ ವೈ.ನಾಗೇಶ ಶಾಸ್ತ್ರಿ ಸಂಸ್ಥೆ ಸಂಸ್ಥಾಪಕರಾದ ಶ್ರೀ. ನಯನಗೌಡ ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು:- ” ಪುರಾಣ ವಾಚನ :- ಶ್ರೀ ಕರುಣಾಮೂರ್ತಿ ಶಾಸ್ತ್ರಿಗಳು ಮತ್ತು ತಂಡದವರು” ಜನಪದ ಗೀತೆಗಳು:- ಶ್ರೀ ಮಂಜುನಾಥ ಮತ್ತು ತಂಡದವರು” ಮೂಕಾಭಿನಯ:-ಶ್ರೀ. ಕು.ಉದಯಕುಮಾರ್ ಮತ್ತು ತಂಡದವರು”ನೇರವೇರಿಸಿದರು.
ಕಾರ್ಯಕ್ರಮದಲ್ಲಿ:-ಅಂಗಡಿ ಶ್ರೀ.ದೊಡ್ಡಬಸವನಗೌಡ,ಶ್ರೀ ದೊಡ್ಡಬಸಯ್ಯಸ್ವಾಮಿ,ಶ್ರೀ. ಚಂದ್ರಶೇಖರ,ಶ್ರೀ ಭರ್ಮಪ್ಪ,ಶ್ರೀ. ಸುಧಾಕರ್, ಶಿಕ್ಷಕರಾದ ಶ್ರೀ ರಂಗ ಸಂಸ ಕಲ್ಚರಲ್ ಟ್ರಸ್ಟಿನ ಅಧ್ಯಕ್ಷ ಗ ಶ್ರೀ ಗುರುಮಹಾಂತೇಶ. ಬಿ ಕಾರ್ಯದರ್ಶಿ ಕುರುಬರ ಹೇಮೇಶ್ವರ ಮತ್ತು ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯರು ಮತ್ತು ಶಿಕ್ಷಕರು ವೃಂದದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ನಿರೂಪಣೆ:- ಕುರುಬರ ಹೇಮೇಶ್ವರ,ಸ್ವಾಗತ ಶ್ರೀ.ಪಂಪಾಣ್ಣ, ಶ್ರೀ ಎಸ್ ಎರ್ರಿಸ್ವಾಮಿ ವಂದಿಸಿದರು.





