
ಡಾ. ಕೋಲ್ಕಾರ ಪುಸ್ತಕ ಪ್ರಶಸ್ತಿಗೆ ಭಾಜನ
Dr. Kolkara Book Award Winner

ಗಂಗಾವತಿಯ ಕಲ್ಮಠ ಮಹಿಳಾ ಕಾಲೇಜಿನ ಪ್ರಾಚಾರ್ಯ ಹಾಗೂ ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಅವರ ಪುಸ್ತಕ ಕಲಬುರ್ಗಿಯ ಕನ್ನಡನಾಡು ಲೇಖಕರ ಮತ್ತು ಓದುಗರ ಸಂಘದ ‘ಸಾಹಿತ್ಯ ಕೃತಿ’ ಪ್ರಶಸ್ತಿಗೆ ಭಾಜನವಾಗಿದೆ. ಸಂಘವು ಪ್ರತಿವರ್ಷ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಸಾಹಿತಿಗಳ ಆರು ಪುಸ್ತಕಗಳಿಗೆ ಪ್ರಶಸ್ತಿ ನೀಡುತ್ತಾ ಬರುತ್ತಿದೆ. 2025 ರ ಸಾಲಿನಲ್ಲಿ ಸಂಕೀರ್ಣ ಸಾಹಿತ್ಯ ಪ್ರಕಾರದಲ್ಲಿ ಡಾ. ಶರಣಬಸಪ್ಪ ಕೋಲ್ಕಾರ ಅವರ ‘ ಕಲ್ಯಾಣ ಕರ್ನಾಟಕದ ಪ್ರಾಗಿತಿಹಾಸ ಮತ್ತು ಆದಿಮ ಸಂಸ್ಕೃತಿ’ ಎಂಬ ಪುಸ್ತಕ ಪರಿಗಣಿಸಲ್ಪಟ್ಟಿದೆ. ಲೇಖಕರಿಗೆ ಇದೆ ಫೆಬ್ರವರಿ 22 ರಂದು ಕಲಬುರಗಿಯಲ್ಲಿ ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ್ ಸ್ಮರಣಾರ್ಥ ಸಾಹಿತ್ಯ ಕೃತಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಮತ್ತು ಪ್ರಶಸ್ತಿಯು ನಗದು ಹಣ ಮತ್ತು ಅಭಿನಂಧನಾ ಪತ್ರ ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೊಣೆಯವರು ತಿಳಿಸಿದ್ದಾರೆ




