
ವಿವಿಧ ಬೇಡಿಕೆ ಈಡೇರಿಸುವಂತೆ ಸಂಘದ ಕಾರ್ಯದರ್ಶಿಗಳು ಒಕ್ಕೂಟ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಕೆ.

The secretaries of the association submitted a petition to the union president asking for various demands to be met
ಗಂಗಾವತಿ: ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ಜಯನಗರ ಜಿಲ್ಲೆಯ ಬಳ್ಳಾರಿ ಹಾಲು ಒಕ್ಕೂಟದ, ಜಿಲ್ಲೆ ಹಾಗೂ ತಾಲೂಕುಗಳ ಸಹಕಾರ ಸಂಘಗಳ ಕಾರ್ಯದರ್ಶಿಗಳು, ವರ್ಷಕ್ಕೆ 365 ದಿನಗಳು ರಜೆ ಇಲ್ಲದೆ ಬೆಳಗ್ಗೆ ಮತ್ತು ಸಂಜೆ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸರಕಾರದ ಮತ್ತು ಸಹಕಾರ ಇಲಾಖೆಯ ಯಾವುದೇ ವೇತನ ಇರುವುದಿಲ್ಲ, ಸಂಘದಲ್ಲಿ ಸಂಗ್ರಹವಾದ ಹಾಲಿನ ಗುಣಮಟ್ಟ ಮತ್ತು ಬಂಡವಾಳ ಆಧರಿಸಿ ವೇತನವನ್ನು ತೆಗೆದುಕೊಂಡು ಅಲ್ಪಕಾಲಿಕ ಜೀವನ ನಡೆಸುತ್ತಿದ್ದಾರೆ, ಒಕ್ಕೂಟದಲ್ಲಿ ಕಾರ್ಯದರ್ಶಿಗಳ ಕಲ್ಯಾಣ ಸೇವ ಟ್ರಸ್ಟ್ ಅಳವಡಿಸಿ, 60 ವರ್ಷದ ನಂತರ ಅವರಿಗೆ ಯಾವುದೇ ಪಿಂಚಣಿ ಇರುವುದಿಲ್ಲ, ಟ್ರಸ್ಟ್ ಮೂಲಕ ಅವರಿಗೆ ಪಿಂಚಣಿಯನ್ನು ನೀಡಿ, ಕಾರ್ಯದರ್ಶಿಗಳಿಗೆ ವಿವಿಧ ಬೇಡಿಕೆಯನ್ನು ಈಡೇರಿಸಬೇಕೆಂದು ಶನಿವಾರ ನಡೆದ ಒಕ್ಕೂಟದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರಾದ, ಶ್ರೀಮಾನ್ಯ ರಾಘವೇಂದ್ರ ಇಟ್ನಾಳ್, ಉಪಾಧ್ಯಕ್ಷರಾದ ಎನ್. ಸತ್ಯನಾರಾಯಣ ಕೋಟೆ ಕ್ಯಾಂಪ್, ಹಾಗೂ ಒಕ್ಕೂಟದ ಆಡಳಿತ ಮಂಡಳಿಯ ನೇತೃತ್ವದಲ್ಲಿ, ಕಾರ್ಯದರ್ಶಿಗಳು ಮನವಿ ಪತ್ರ ಸಲ್ಲಿಸಿದರು, ನಂತರ ಒಕ್ಕೂಟದ ಅಧ್ಯಕ್ಷರು ಮಾತನಾಡಿ ರಾಜ್ಯದ ವಿವಿಧ ಹಾಲು ಒಕ್ಕೂಟದ ಜಿಲ್ಲೆಯಲ್ಲಿ ಸಂಘಗಳಲ್ಲಿ ಕಾರ್ಯನಿರ್ವಹಿಸುವಂತಹ ಮುಖ್ಯ ಕಾರ್ಯನಿರ್ವಾಹಕರಿಗೆ, ಯೋಜನೆಗಳ ಪಟ್ಟಿಯನ್ನು ತೆಗೆದುಕೊಂಡು, ಮುಂದಿನ 5 ದಿನಗಳಲ್ಲಿ ಯೋಜನೆಗಳನ್ನು ರೂಪಿಸಲು ಒಕ್ಕೂಟದ ಮುಖ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಲಭ್ಯಗಳನ್ನು ಕಲ್ಪಿಸಿ ಕೊಡಲಾಗುವುದು ಎಂದರು, ಈ ಸಂದರ್ಭದಲ್ಲಿ ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟದ ಸಹಕಾರ ಸಂಘಗಳ ಕಾರ್ಯದರ್ಶಿಗಳು ಭಾಗಿಯಾಗಿದ್ದರು.




