
ಬಲ್ದೋಟ ವಿರೋಧಿ ಹೋರಾಟಕ್ಕೆ
ಶತದಿನ ಪೂರ್ಣಚುನಾವಣೆ ಬಹಿಷ್ಕಾರ, ಬೃಹತ್ ಶಕ್ತಿ ಪ್ರದರ್ಶನ ಮಾಡಿಗೆಲ್ಲೋಣ : ಪಂಡಿತಾರಾಧ್ಯ ಶ್ರೀ

Let's boycott the general election for a hundred days and make a huge show of strength for the anti-baldota struggle: Pandita Radhya Sri
ಕೊಪ್ಪಳ: ಚುನಾವಣೆ ಬಂದಾಗ ಇಡೀ ಕೊಪ್ಪಳ ಜನ ಘೋಷಣೆಮಾಡಬೇಕು, ಮತ ಹಾಕಲ್ಲ ಎಂದು ನಿರ್ಣಯಿಸಿ ಹೋರಾಡಬೇಕುಎಂದು ಪೂಜ್ಯ ಶ್ರೀ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ
ಶ್ರೀಗಳು ಕರೆ ನೀಡಿದರು.
ಅವರು ನಗರಸಭೆ ಹತ್ತಿರದ ಹೋರಾಟದ ವೇದಿಕೆಯಹಿಂದುಗಡೆ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ಕೊಪ್ಪಳ ಜಿಲ್ಲಾಬಚಾವೋ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ
ನಡೆದ ಬಲ್ದೋಟ ಹಟಾವೋ ಕೊಪ್ಪಳ ಬಚಾವೋ ಇತರೆಕಾರ್ಖಾನೆಗಳ ವಿರೋಧಿ ನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ೧೦೦ನೇ ದಿನದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು.
ಮುಂದುವರಿದು ಮಾತನಾಡುತ್ತ, ಹಳ್ಳಿಗಳಿಗೆ ಭೇಟಿ
ನೀಡಿದಾಗ ನಮಗೆ ಅಲ್ಲಿನ ನರಕಸದೃಶ್ಯ ಪರಿಚಯ ಆಯಿತು.
ಮಹಾತ್ಮ ಗಾಂಶಿ ಅವರ ಸರ್ವೋದಯ ಪರಿಕಲ್ಪನೆಯಲ್ಲಿ ಪರಿಸರ,ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಸುಧಾರಣೆ ಆದರೆ
ಮಾತ್ರ ಸರ್ವಾಂಗೀಣ ಅಭಿವೃದ್ಧಿ ಎನ್ನಬಹುದು. ದುರಾದೃಷ್ಟವಶಾತ್ಇಲ್ಲಿ ಇವುಗಳ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು. ಹೊಗೆ ದೂಳು
ಯಾವ ಸರಕಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಅದ್ಯಾಕೆತಿಳಿವಲ್ದು ಗೊತ್ತಿಲ್ಲ, ಇಂತಹ ಮೇವು ತಿನ್ನುವ ದನಕರುಗಳಸ್ಥಿತಿ ಏನು ಅವು ಕೊಡುವ ಹಾಲು ಕುಡಿಯುವ ನಮ್ಮ ಸ್ಥಿತಿ ಹೇಗೆ?
ಎಂದು ಪ್ರಶ್ನಿಸಿದರು.
ಶಿಕ್ಷಣ ಉದ್ಯಮವಾದ ಪರಿಸ್ಥಿತಿಯಲ್ಲಿ ಅಲ್ಲಿ ಶಿಕ್ಷಣ ಸಂಸ್ಥೆಗಳುಸಹ ಆರಂಭ ಆಗುವದಿಲ್ಲ. ಆಡಳಿತದ ಜನರಿಗೆ ಬದ್ಧತೆಇಲ್ಲದಿರುವದು ಸಹ ಬಹಳ ಕಷ್ಟ. ನೂರು ದಿನ ಆದರೂಹೋರಾಟಕ್ಕೆ ತಾತ್ವಿಕ ಹಿನ್ನೆಲೆಯಲ್ಲಿ ನಿಲ್ಲಬೇಕು ಎಂದರು. ಈ
ಹೋರಾಟ ಯಶಸ್ವಿಯಾಗಬೇಕು ಅಂದರೆ ಜನ ಸಂಘಟನೆಆಗಬೇಕಿದೆ, ಆಗ ಮಾತ್ರ ಅದು ಸಾಧ್ಯ. ಆ ಎಚ್ಚರವಹಿಸಬೇಕು,
ಗೆಲ್ಲಬೇಕು ಅಂದ್ರೆ ನಡೆ ನುಡಿ ಶುದ್ಧವಾಗಿರಬೇಕು ಎಂದು ಕರೆನೀಡಿದರು. ಕಾರ್ಖಾನೆ ವಿಸ್ತರಣೆ ಮಾಡಬಾರದು, ಎಚ್ಚರಿಕೆಕೊಡಬೇಕು ಅಲ್ಲದೇ ನಿಗಾವಹಿಸಬೇಕು, ನಮ್ಮ ಮೊಟಾರ್ ಗಾಡಿ
ಜಾಸ್ತಿ ಹೊಗೆ ಉಗುಳಿದರೆ ದಂಡ ಹಾಕುವ ಪರಿಸರ ಇಲಾಖೆ ಇಂತಹಕಾರ್ಖಾನೆಗಳನ್ನು ನೊಡೋದೆ ಇಲ್ಲ ಅಂದ್ರೆ ಏನರ್ಥ. ಫೆ. ೨೪ ರಹೋರಾಟಕ್ಕೆ ಎಲ್ಲಾ ಜನಪ್ರತಿನಿಧಿಗಳು ಬರಲಿ, ನಾವೂ ಬರುತ್ತೇವೆ.
ಮುಖ್ಯ ಮಂತ್ರಿ ಅವರನ್ನು ಭೇಟಿ ಮಾಡೋಣ, ಹೋರಾಟನಿಲ್ಲಿಸಬೇಕಾದರೆ ಕಾರ್ಖಾನೆ ನಿಲ್ಲಿಸಬೇಕು ಎಂದರು.
ಸಮಾವೇಶದ ನಿರ್ಣಯಗಳು : ಕಾರ್ಖಾನೆಗಳ ವಿಸ್ತರಣೆ ಮತ್ತುಹೊಸ ಸ್ಥಾಪನೆ ವಿರೋಧಿಸಿ ನಡೆದ ಸುಧೀರ್ಘ ಹೋರಾಟ ಅದರ.
ಭಾಗವಾಗಿ ೨೦೨೫ರ ಫೆ. ೨೪ ರಂದು ಗವಿಸಿದ್ಧೇಶ್ವರ
ಮಹಾಸ್ವಾಮಿಗಳ ನೇತೃತ್ವದಲ್ಲಿ ಬಂದ್ ಮಾಡಿ ಹೋರಾಟ ಮಾಡಲಾದ
ನೆನಪು ಹಾಗೂ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿಮತ್ತೊಮ್ಮೆ ಬೃಹತ್ ಹೋರಾಟ ಹಾಗೂ ಬಂದ್ ಕರೆ ಕೊಡಲಾಗಿದೆ.
ಗವಿಮಠದಿಂದ ತಾಲೂಕ ಕ್ರೀಡಾಂಗಣದ ವರೆಗೆ ಪ್ರತಿಭಟನಾಮೆರವಣಿಗೆ ಇರಲಿದೆ ಸುಮಾರು ಹತ್ತು ಸಾವಿರಕ್ಕೂ ಅಧಿಕಜನರು, ವಿದ್ಯಾರ್ಥಿಗಳು, ಮಹಿಳೆಯರು ಸೇರಿಸುವ ಗುರಿಇಡಲಾಗಿದೆ.
ಬಲ್ಡೋಟ ಕಣ್ಣೊರೆಸುವ ಸಿ ಎಸ್ ಆರ್ ಫಂಡ್ ಸಹಾಯದ ಟ್ರೀ ಗಾರ್ಡ
ಮತ್ತು ಸಿಮಂಟ್ ಆಸನಗಳ ಮರಳಿಸುವ ಅಭಿಯಾನಕ್ಕೆ
ಚಾಲನೆ. ೨೦ ಗ್ರಾಮಗಳ ಆರೋಗ್ಯ ಸಮೀಕ್ಷೆ, ಪರಿಸರ ಮತ್ತು
ಆರೋಗ್ಯ ಪುನರ್ ನಿರ್ಮಾಣಕ್ಕೆ ಒತ್ತಾಯ. ತಜ್ಞರ ವರದಿಯಂತೆ
ಕಾರ್ಖಾನೆಗಳ ಸ್ಥಳಾಂತರ ಆರಂಭಿಸಬೇಕು.
ತುAಗಭದ್ರಾ ವಿಷಗೊಳಿಸುವ ಕಾರ್ಖಾನೆಗಳನ್ನು
ಮುಚ್ಚಿಸಬೇಕು, ಅಲ್ಲಿಯವರೆಗೆ ಶುದ್ದ ಸಂಸ್ಕರಿಸಿದ ನೀರನ್ನು
ಜನ ಜಾನುವಾರುಗಳಿಗೆ ಸರಬುರಾಜು ಮಾಡಲು ಕ್ರಮ
ತೆಗೆದುಕೊಳ್ಳಬೇಕು. ಬಸಾಪುರ ಸಾರ್ವಜನಿಕ ಕೆರೆಯನ್ನು
ಕೂಡಲೇ ಮರಳಿ ಜನರಿಗೆ ಬಿಟ್ಟು ಕೊಡಬೇಕು. ಭದ್ರಶ್ರೀ
ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ ಹೋರಾಟ ತೀವ್ರಗೊಳಿಸುವದು
ಸೇರಿ ಇತರೆ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಧಾರವಾಡ ಸಾಹಿತಿ, ಚಿಂತಕ ರಂಜಾನ್ ದರ್ಗಾ, ಮಾಜಿ
ನಗರಸಭೆ ಅಧ್ಯಕ್ಷ ಚಂದ್ರಶೇಖರ ಕವಲೂರು,
ರಂಗಕರ್ಮಿ, ಕವಿ, ಸಾಹಿತಿ ಸೂರ್ಯಕಾಂತ ಗುಣಕಿಮಠ, ಧಾರವಾಡ
ಸಾಹಿತಿ ಅಸ್ಲಂ ದರ್ಗಾ, ಮಹಿಳಾ ಧುರೀಣೆ ಜ್ಯೋತಿ ಎಂ. ಗೊಂಡಬಾಳ,
ಸುಜಾತಾ ಗುರುರಾಜ ಹಲಗೇರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ
ಎ.ವಿ. ಕಣವಿ ಆರೋಗ್ಯದ ಕಳವಳ ಕುರಿತು ಮಾತನಾಡಿದರು. ಇದೇ
ಸಮಯದಲ್ಲಿ ಬಾಧಿತ ಹಳ್ಳಿ ಜನರ ಜೀವ ಉಳಿಸೋಣ
ಘೋಷಣೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ
ರಕ್ತದಾನ ಶಿಬಿರವನ್ನು ಡಾ. ಮಂಜುನಾಥ ಸಜ್ಜನ್ ನೇತೃತ್ವದಲ್ಲಿ
ನಡೆಸಿದರು.
ಬಾಧಿತರ ನೋವಿನ ನುಡಿಯನ್ನು ಹಿರೇಬಗನಾಳ ಗ್ರಾಮದ
ಯುವರೈತ ಗವಿಸಿದ್ದಪ್ಪ ಪುಟಗಿ, ಹಾಲವರ್ತಿ ಗ್ರಾಮದ ರೈತ
ಮಂಜು ಕೆಂಚನಗೌಡ್ರ ಹೇಳಿದರು. ಸಮಾವೇಶದ
ನಿರ್ಣಯಗಳನ್ನು ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ
ಮಂಡಿಸಿದರು, ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು
ಬೆಟ್ಟದೂರು ಅವರು ಅಧ್ಯಕ್ಷೀಯ ಭಾಷಣ ನೆರವೇರಿಸಿ
ನಿರ್ಣಯಗಳಿಗೆ ಅನುಮೋದನೆ ಪಡೆದರು. ಆರ್.ಸಿ.ಎಫ್. ಕಲಾ
ತಂಡದ ಎಂ. ಗಂಗಾಧರ ಹಾಗೂ ತಂಡದವರು ಬಲ್ದೋಟ
ವಿರೋಧಿ ಎಚ್ಚರಿಕೆಯ ಕ್ರಾಂತಿ ಹಾಡು ಹೇಳಿದರು. ಸದಾಶಿವ ಪಾಟೀಲ್
ಪರಿಸರ ಜಾಗೃತಿ ಗೀತೆ ಹಾಡಿದರು. ಸಂಚಾಲಕರಾದ ಮಂಜುನಾಥ ಜಿ.
ಗೊಂಡಬಾಳ ಸ್ವಾಗತಿಸಿ, ಮಾತನಾಡಿದರು. ಪ್ರಾಸ್ತಾವಿ
ಶಿವಕುಮಾರ ಕುಕನೂರು, ಹೋರಾಟದ ಅನುಭವದ
ನುಡಿಯನ್ನು ಡಿ.ಎಚ್. ಪೂಜಾರ ಮಾತನಾಡಿದರು.
ಬೆಂಗಳೂರು ನಿವಾಸಿ ನಿವೃತ್ತ ಪ್ರಾಚಾರ್ಯರು ಡಿ.ಎಸ್. ಕೌಜಲಗಿ, ಸಾಹಿತಿಗಳು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಎಚ್. ಎಸ್.
ಪಾಟೀಲ್, ಮತ್ತೊಬ್ಬ ಸಾಹಿತಿಗಳು, ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕ್ರತರಾದ ಎ.ಎಂ. ಮದರಿ, ಪುಸ್ತಕ ಪ್ರಕಾಶಕರು
ಡಿ.ಎಂ.ಬಡಿಗೇರ, ನಿವೃತ್ತ ಪ್ರಾಚಾರ್ಯರು ಬಿ.ಜಿ. ಕರಿಗಾರ, ಮಾಜಿ ತಾ.ಪಂ.
ದಾನಪ್ಪ ಕವಲೂರು ಭಾಗ್ಯನಗರ, ನಿವೃತ್ತ ಪ್ರಾಚಾರ್ಯ
ಎಸ್.ಬಿ.ರಾಜೂರು, ನಿವೃತ್ತ ನ್ಯಾಯಾಂಗ ಜಿ.ಬಿ. ಪಾಟೀಲ್, ಕಾವ್ಯಾ
ಪ್ರಸನ್ನ ಗಡಾದ್, ಶಂಭುಲಿAಗಪ್ಪ ಹಲಗೇರಿ, ವಾಣಿಜ್ಯೋದ್ಯಮಿ
ಬಸವರಾಜ ಬಳ್ಳೊಳ್ಳಿ, ಪ್ರಭು ಹೆಬ್ಬಾಳ, ವೇದಿಕೆ ಮೇಲೆ
ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ಈಶ್ವರ ಕೊರ್ಲಹಳ್ಳಿ, ಸ್ಪೋರ್ಟ್ಸ್
ಕ್ಲಬ್ ಅಧ್ಯಕ್ಷ ಭಾಗ್ಯನಗರ ಗ್ಯಾನೇಶ ಹ್ಯಾಟಿ, ದಲಿತ ಕವಿ
ದಾನಪ್ಪ ಮಸ್ಕಿ, ಜಿ.ಎಸ್. ಕಡೇಮನಿ, ಬಾಳಪ್ಪ ವಕೀಲರು,
ಮಹಾಂತೇಶ ಕೊತಬಾಳ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಈಶ್ವರ ಕೊರ್ಲಹಳ್ಳಿ, ಹನುಮೇಶ ಕಲ್ಮಂಗಿ ವಚನ
ಗಾಯನ ಮಾಡಿದರು, ರಮೇಶ ತುಪ್ಪದ ಮತ್ತು ಶರಣು ಗಡ್ಡಿ
ಕಾರ್ಯಕ್ರಮ ನಿರೂಪಣೆ ಮಾಡಿದರು. ಶರಣು ಶೆಟ್ಟರ್
ವಂದನಾರ್ಪಣೆ ಮಾಡಿದರು. ಬಾಧಿತ ರೈತರು ಕಾರ್ಖಾನೆಯಿಂದ
ಹಾಳಾದ ಬೆಳೆ ಹೊತ್ತು ತಂದು ಆಕ್ರೋಶಭರಿತ ಘೋಷಣೆ
ಸರ್ಕಾರದ ವಿರುದ್ಧ ಕೂಗಿದರು. ನಗರದ ಹಲವಾರು
ಸಂಘಟನೆಗಳ ಮುಖಂಡರು, ಹಿರೇಬಗನಾಳ, ಹಾಲವರ್ತಿ,
ಕುಣಿಕೇರಿ, ಗಿಣಿಗೇರಿ, ಬಸಾಪುರ ಮುಂತಾದ ಬಾಧಿತ ಗ್ರಾಮಗಳ
ರೈತರು ಮತ್ತು ರೈತ ಮಹಿಳೆಯರು ಇದ್ದರು.




