
ಮೂಡಲಗಿಯಲ್ಲಿ ಐದು ದಿನ ಸತ್ಸಂಗ ಸಮ್ಮೇಳನ
Five-day Satsang Conference in Mudalagi
ಮೂಡಲಗಿ:ಡಿ,5ರಂದು ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ “೧೬ ನೆಯ ಸತ್ಸಂಗ” ಪರಮ ಪೂಜ್ಯರುಗಳ ಸಾನಿಧ್ಯದಲ್ಲಿ ಸಂಜೆ,೬ ಗಂಟೆಗೆ, ಡಿಸೆಂಬರ್, ೦೫ ರಿಂದ ೦೯-೨೦೨೫ ರವರೆಗೂ ೦೫ ದಿನ ಪ್ರವಚನ ಕಾರ್ಯಕ್ರಮ ಜರುವುದು ಎಂದು ವೇದಮೂರ್ತಿ ಶಂಕರಯ್ಯಾ ಹಿರೇಮಠ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪೂಜ್ಯರ ನೇತೃತ್ವದಲ್ಲಿ ಚಿದಂಬರಾಶ್ರಮ ಸಿದ್ಧಾರೂಢ ಮಠ ಬೀದರ,ಪೀಠಾಧಿಪತಿಗಳಾದ ಶ್ರೀ ಡಾ: ಶಿವಕುಮಾರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಮತ್ತು ಸಾಧು ಸಂಸ್ಥಾನ ಮಠ ಇಂಚಲ ಪೀಠಾಧಿಪತಿಗಳಾದ ಶ್ರೀ ಡಾllಶಿವಾನಂದ ಭಾರತಿ ಮಹಾಸ್ವಾಮಿಗಳ ಉದ್ಘಾಟಿಸುವವರು.
ಸಿದ್ದಾರೂಢ ಮಠ,ಮಹಾಲಿಂಗಪೂರ ಶ್ರೀ ಸಹಜಾನಂದ ಸ್ವಾಮೀಜಿ,ಎಮ್ ಎ ಪೂರ್ಣ ಪ್ರಜ್ಞಾ ಯೋಗಾಶ್ರಮ ಕಲಬುರಗಿ ಮಾತೊಶ್ರೀ ಲಕ್ಷ್ಮೀ ತಾಯಿ,ಚಿದಾಂಬರಾಶ್ರಮ ಬೀದರ ಶ್ರೀ ಶಿವಪ್ರಕಾಶನಂದ ಗಿರಿ ಸ್ವಾಮೀಜಿ,ಅಡವಿಸಿದ್ದೇಶ್ವರ ಮಠ,ಶಿವಾಪೂರ (ಹ) ಶ್ರೀ ಅಡವಿಸಿದ್ದರಾಮ ಸ್ವಾಮೀಜಿ,ಮೈಲಾರಲಿಂಗೇಶ್ವರ ದೇವಸ್ಥಾನ,ಶ್ರೀ ಸಿದ್ದೇಶ್ವರ ಆಶ್ರಮದ,ಇಟನಾಳದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಈ ಪೂಜ್ಯರು ಸಹ ಪಾಲ್ಗೊಳ್ಳುವರು.
ಸಕಲ ಭಕ್ತರು ಭಾಗವಹಿಸಿ ಶ್ರೀಗಳ “ಅಮೃತ ವಾಣಿ” ಕೇಳಿ ಪುಣಿತರಾಗೋಣ.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಧನ ಸಹಾಯ ಮತ್ತು ಐದು ದಿನಗಳವರೆಗೂ ಪ್ರಸಾದ ವ್ಯವಸ್ಥೆ ಕೂಡಾ ಇರುವುದು ಎಂದು ಧಾರ್ಮಿಕ ಕಮಿಟಿಯವರು ತಿಳಿಸಿದ್ದಾರೆ.
ಸತ್ಸಂಗದ ಮುಖಂಡರುಗಳಾದ ಬಸಗೌಡ ಪಾಟೀಲ, ನೇಮು ಬೇವಿನಕಟ್ಟಿ, ಬಿ.ವಾಯ್,ಶಿವಾಪೂರ,ಅಜ್ಜಪ್ಪ ಬಳಿಗಾರ,ಅಜೀತ ಜರಾಳೆ,ಶಿವಪ್ಪಾ ಬುಜನ್ನವರ, ಪ್ರಕಾಶ ಶೀಲವಂತ, ತಮ್ಮಣ್ಣಾ ಗಡಾದ ಹಾಗೂ ಇನ್ನು ಅನೇಕರು ಭಾಗಿಯಾಗಿದ್ದರು.



