Breaking News

ಬೆಂಗಳೂರಲ್ಲಿ ದೇಶದಲ್ಲೇ ಅತಿ ಎತ್ತರದ ಅಂಬೇಡ್ಕರ್ ಪ್ರತಿಮೆ ಶ್ಲಾಘನೀಯ-ರುದ್ರಮುನಿ ಶ್ರೀ.

The tallest Ambedkar statue in the country in Bengaluru is commendable – Rudramuni

ಜಾಹೀರಾತು
Screenshot 2025 04 15 18 14 34 46 6012fa4d4ddec268fc5c7112cbb265e7


ಬೆಂಗಳೂರು ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ ಮ್ಯೂಸಿಯಂ ಹಾಗೂ ದೇಶದಲ್ಲೇ ಎತ್ತರವಾದ ಅಂಬೇ ಡ್ಕ‌ರ್ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗು ವುದು ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಘೋಷಿಸಿರುವುದರಿಂದ ಸ್ವಾಗತರ್ಹ ಎಂದು ಕಾಂಚಘಟ್ಟ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು
ಮೈಸೂರು ವಿಶ್ವವಿದ್ಯಾ ಲಯದಲ್ಲಿ ಸಂವಿಧಾನ ಪೀಠ ಸ್ಥಾಪನೆ ಮಾಡುವುದು ಹಾಗೂ ول
ಆಂಧ್ರದ ವಿಜಯವಾಡ ದಲ್ಲಿ ದೇಶ ಹಾಗೂ ವಿಶ್ವದ ಅತಿ ದೊಡ್ಡ ಅಂಬೇಡ್ಕರ್ ಪ್ರತಿಮೆಯಾಗಿದ್ದು
ಆ ಪ್ರತಿಮೆ ಒಟ್ಟು ಎತ್ತರ 206 ಅಡಿಯಾಗಿದ್ದು
ಈಗ ಕರ್ನಾಟಕದಲ್ಲಿ ಇದಕ್ಕಿಂತ ಹೆಚ್ಚು ಎತ್ತರದ ಪ್ರತಿಮೆ ನಿರ್ಮಾಣ ಸ್ವಾಗತರ್ಹ ಎಂದರು.
ಕರ್ನಾಟಕ ಭೀಮಸೇನೆ ತಾಲೂಕು ಅಧ್ಯಕ್ಷ ಮಂಜುನಾಥ್ ಆಂಜಿನಪ್ಪ ಮಾತನಾಡಿ • ಆಂಧ್ರದ ಮಾದರಿಯಲ್ಲೇ ಬೆಂಗಳೂರಲ್ಲಿ ಅಂಬೇಡ್ಕರ್ ಮ್ಯೂಸಿಯಂ ನಿರ್ಮಾಣಕ್ಕೆ ಪಣ ತೊಟ್ಟಿರುವ ಮುಖ್ಯಮಂತ್ರಿ ಗಳಿಗೆ ಅಭಿನಂದನೆಗಳು. ಈ ಕಾರ್ಯದಲ್ಲಿ ರಾಜ್ಯಾದ್ಯಂತ ಕರ್ನಾಟಕ ಭೀಮಸೇನಿಯು ಪ್ರತಿ ಜಿಲ್ಲಾವಾರು ಜಿಲ್ಲಾಧಿಕಾರಿಗಳಿಗೆ ರಾಜ್ಯದಲ್ಲಿ ಅತ್ಯಂತ ಎತ್ತರದ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಈಗಾಗಲೇ ಹೋರಾಟ ನಡೆಸಿದ ಫಲವಾಗಿ ಮುಖ್ಯಮಂತ್ರಿಗಳು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜನ್ಮದಿನದಂದೆ ಘೋಷಣೆ ಮಾಡಿರುವುದು ಖುಷಿಯ ವಿಚಾರವೆಂದು ಇದೇ ವೇಳೆ ಅವರು ವರ್ಷ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಕರ್ನಾಟಕ ಭೀಮಸೇನೆಯ ಗೌರವಾಧ್ಯಕ್ಷ ರೇಣುಕ್ ಮೂರ್ತಿ.
ಕಾರ್ಯದರ್ಶಿ ಮೋಹನ್ ಕುಮಾರ್. ಡಾ ಪುನೀತ್ ರಾಜಕುಮಾರ್ ಜನಸೇವಾ ಟ್ರಸ್ಟ್ ಅಧ್ಯಕ್ಷ ಎಸ್ ಜಗದೀಶ್ ಕರ್ನಾಟಕ ಭೀಮಸೇನೆಯ ಬಾಲಾಜಿ ಸುಮಂತ್ ಮೊದಲಾದವರು ಹಾಜರಿದ್ದರು

About Mallikarjun

Check Also

screenshot 2025 10 25 19 16 03 64 6012fa4d4ddec268fc5c7112cbb265e7.jpg

ಕಿತ್ತೂರು ಚೆನ್ನಮ್ಮನ ಹಾಗೂ ಬೆಳವಡಿ ಮಲ್ಲಮ್ಮ ಆದರ್ಶ ಬೆಳೆಸಿಕೊಳ್ಳಿ : ಶಂಕರ ಬಿದಿರಿ

Cultivate the ideals of Kittur Chennamma and Belavadi Mallamma: Shankara Bidiri ಬೆಂಗಳೂರು,ಅ.೨೫; ಬೆಳವಡಿ ಮಲ್ಲಮ್ಮ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.